ಗಣಪತಿ

ಹೊಗಳುವರು ಭಟ್ಟಂಗಿಗಳು ನಿನ
ಗಗಣಿತಾರೋಪಗಳ ಮಾಡುತ
ಹಗರಣದ ಕಾಮುಕರು ನಿನ್ನರಿತವರು ಅವರಲ್ಲ

ಸುಗುಣ ನಿರ್‍ಗುಣ ರೂಪ ನೀನೈ
ಜಗಕೆ ಮಂಗಳ ಕಾರಿ ನೀನೈ
ಮಗುಳೆ ನಮ್ಮಲಿ ಹೊಳೆವ ತೇಜವೆ! ಹೊರತೆ ನೀ ಯಮಗೆ

ನೊಂದಿ ಮೈತ್ರಿಯು ತಮದಲಿರುಳಲಿ
ಕಂದರೆಲ್ಲರು, ಕಂದಿ ತಮ್ಮೊಳ
ಗಿಂದು ನೊಂದಿಹರೆನುತ ಗಣಪನು ಗಿರಿಜೆಯೊಡಗೂಡಿ

ಬಂದು ನಿಂದಿಹ ನಿದುಗೊ! ಹೊಸಿಲಲಿ
ಒಂದೂಗೂಡಿಸಿ ನೊಂದ ಕರಗಳ
ಸಂದ ಪ್ರೇಮಾಂಜಲಿಯ ಪುಟದಲಿ ನೀಡಿರರ್ಘ್ಯವನು

ಮಳೆಯ ಕರೆಯಲು ಮೇಘ ಘಟೆಗಳು
ಬಳಲಿ ತೊಳಲಿದ ಧರಣಿ ತಣಿಯಲು
ಹೊಳೆಗಳೇರಲು ನರರು ಹರುಷಿಸೆ! ಪರಿಯನರಿಯದಲೆ

ಎಳೆಯ ಸುಳಿಗಳು ಪೂಗಳರಳಲು
ಇಳೆಯಕೇದಿಗೆ ಬಿರಿದು ಹೊಗಳಲು
ಸುಳಿದು ಸುಯ್ಯನೆ! ಗಾಳಿಯುಸರಿತು ಗಣಪ ಬರತಿಹನು

ಬರಹಗಾರರ ಗುರುವು ನೀನೈ
ಹರನ ಸುತ ಚಿರ ವಟುವು ನೀನೈ
ಹಿರಿದು ಸೇವೆಯ ಮಾಡಲೆಮಗರಿವಿತ್ತು ಸಲಹುತಿರು

ಇರವನಿಡು ಶಿವಸುಖದ ಬೆಳಕಲಿ
ಇರಿದು ಅಂಕುಶದಲ್ಲಿ ಶಂಕೆಯ
ಧರೆಯ ಸುಖಗಳ ಕರಿವೆ ಭಕುತಿಯಲೀವೆ ಮೋದಕವ

ಅರಿತು ನೋಡಲು ನಾಡ ಒಲುಮೆಗೆ
ಹರಿವ ವೀರ್‍ಯಕೆ ಭಾವಿ ಸೌಖ್ಯಕೆ
ಹರನ ಸುತ ಸ್ವಾತಂತ್ರಜೀವಿಗೆ ನೀನೆ ರಕ್ಷಕನು

ಭರತಮಾತೆಯ ಬೆಮರ ಮಣ್ಣೊಳ
ಗುರಿದಮೂರುತಿ ಭರತಗಣಪತಿಯೆ
ಅರಿತುನಿನ್ನನು ಭಜಿಸಿ ನಲಿವೆವು! ಜಗದ ಜನರೆಲ್ಲ

ನಡುವ ಬಿಗಿಯುವೆ ಪಾಶ ಬಂಧದಿ
ಹಿಡೆವನಂಕುಶ ಕೊಲಲು ಶಂಕೆಯ
ಒಡಲ ಕಟ್ಟುವೆ ಪರರ ಸೇವೆಗೆ ಪೊರೆವೆನಾರ್‍ತರನು

ಹಿಡಿವೆ ಲೇಖನಿ ಬರಿವೆ ಭಾರತ
ದೊಡಲ ಬೇಗೆಯ ಭವ್ಯ ಚರಿತೆಯ
ಒಡೆಯ! ಗಣಪನ ಮಾಡಲೆನ್ನನು ಘಳಿಗೆಯೋಲವಿನಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವ್ಯತಿರಿಕ್ತ ವರ್ಣಗಾಥೆ
Next post ಕಟ್ಟಕಡೆಗೆ ಪ್ರೀತಿ

ಸಣ್ಣ ಕತೆ

  • ಅನಾವರಣ

    "ಹಲೋ-ಸ್ವೀಟಿ-ಗುಡ್ ಮಾರ್‍ನಿಂಗ್-" ಡಾಕ್ಟರ್ ವಿಜಯಾ ಪ್ರೊಫೆಸರ್‍ಗೆ ವಿಶ್ ಮಾಡಿದಳು. ಆತ್ಮವಿಶ್ವಾಸದ, ಧೈರ್‍ಯ-ಆಸೆ ಭರವಸೆ ಹುಟ್ಟಿಸುವ ಪುಟ್ಟ ತೀಕ್ಷ್ಣವಾದ ಕಣ್ಣುಗಳ ಸ್ವಲ್ಪವೇ ಸ್ಥೂಲಕಾಯದ ಎತ್ತರದ ನಿಲುವಿನ ಮಧ್ಯ ವಯಸ್ಸು… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…