Home / ಕವನ / ಕವಿತೆ / ವ್ಯತಿರಿಕ್ತ ವರ್ಣಗಾಥೆ

ವ್ಯತಿರಿಕ್ತ ವರ್ಣಗಾಥೆ

ಆಗಸದ ತುಂಬೆಲ್ಲ ಚೆಲ್ಲಿ ಬಿದ್ದ
ಅನ್ನದ ಅಗುಳು
ಕಲಾವಿದ ಕೊಂಚ ಕೊಂಚ
ಬಲಗೈಯೂರಿ ಒತ್ತತೊಡಗಿದ ಕುಂಚ.
ನಡುವೆ ಬೆಳದಿಂಗಳ ಚಂದಿರನ ಹೊತ್ತು ತರಬೇಕು
ಎನ್ನುತ್ತ ಕವಿತೆ ಬರೆಯತೊಡಗಿದ.

ಅದು ಬರಿಯ ಒಂದು ನೋಟವಲ್ಲ
ಒಂದು ಆಟ, ಒಂದು ಅಧ್ಯಾಯ
ಮತ್ತೆ ಪುಟ ತಿರುವಿ ಬಳಿಯಬೇಕು
ವರ್ಣಗಾಥೆ – ಬಣ್ಣ ಬಣ್ಣಗಳಲ್ಲಿ

ಕೈಯ ಹಿಂಡತೊಡಗಿತು ಕುಂಚ
ಆಕುಂಚಿಸಿ ಸೆಟೆದುಕೊಳ್ಳುತ್ತ.
ಚುಕ್ಕಿಗಳ ಜೊತೆಗೇಕೆ ಚಂದಿರ?
ಉತ್ತರವಿಲ್ಲ ಕಲಾವಿದನಲ್ಲಿ.

ಬರೆದ ಚಿತ್ರದ ಅಡಿಗೆ ಕೊಂಚಕೊಂಚವೇ ಅದೆಷ್ಟೋ
ಕುಂಚಗಳ ಸೃಷ್ಟಿಯಾಗತೊಡಗಿತು.
ಈಗ ಹತ್ತಾರು ನೂರಾರು ಕುಂಚಗಳು
ಎದ್ದು ಬರತೊಡಗಿದವು. ಚಿತ್ರಪಟದಿಂದ
ಗಾಬರಿಗೊಂಡ ವಿಹ್ವಲಿತನಾದ ಕಲಾವಿದ
ಮುಖತಿರುವಿ ಮರೆಯಾಗಬಯಸಿದ.

ಸೂಜಿ ಇರಿತಕ್ಕಿಂತ ಆಳವಾಗಿ ಕುಂಚ
ಕುಕ್ಕತೊಡಗಿತು. ಇಂಚು ಇಂಚಿಗೂ ಬಿಡದೆ
ತೊಟ್ಟಿಕ್ಕುವ ರಕ್ತದೊಂದಿಗೆ ಕಲಾವಿದ
ಹಿಂಗಾಲಲ್ಲಿ ನಡೆಯತೊಡಗಿದ.
ಕಾಲಲ್ಲಿ ಎನೋ ಸಿಕ್ಕಂತಾಗಿ ಎಡವಿಬಿದ್ದ
ಅಂಗಾತಾಗಿ, ಚಿತ್ರಪಟದ ಚಾರಕಲ ಚುಕ್ಕಿಗಳ
ಮಧ್ಯೆ ಈಗ ರಕ್ತಸಿಕ್ತ ಗುಳಿಬಿದ್ದ ಮುಖದ
ಅವನಿದ್ದಾನೆ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...