ಚರ್ಚೆ

ಒಂದು ಸೇವಾಶ್ರಮದಲ್ಲಿ ಅನೇಕ ಅಂಗವಿಕಲರು, ಕುಂಟರು, ಕುರುಡರು, ಹೆಳವರು, ಮೂಕರು, ಬುದ್ಧಿ ಮಾಂದ್ಯರು, ನಿಶ್ಯಕ್ತರು, ಹೀಗೆ ಹಲವು ಹತ್ತು ಜನರಿದ್ದರು. ಅವರು ಜಗತ್ತನ್ನು ನೋಡುತ್ತಿದ್ದರು. ಜನಗಳು ಹಣೆಯಲ್ಲಿ, ತಿಲಕ, ವಿಭೂತಿ, ಪಟ್ಟೆ, ಮುದ್ರೆ, ನಾಮ, ಅಂಗಾರ ಅಕ್ಷತೆ ಹಚ್ಚಿಕೊಂಡು ದೇವಾಲಯಗಳಿಗೆ ಹೋಗುವುದನ್ನು, ತಮ್ಮ ಧರ್ಮದ ಬಗ್ಗೆ ಬಾಯಿ ತುಂಬಾ ಮಾತಾಡಿ ಗುರುಗಳ ಉಪದೇಶ ಕೇಳಿ ಧರ್ಮ ದೈವದ ಬಗ್ಗೆ ಚರ್ಚೆ ಮಾಡುವುದನ್ನು ನೋಡಿದ್ದರು. ಅಂಗವಿಕಲರು ಒಮ್ಮೆ ಸಭೆ ಸೇರಿ ಚರ್ಚೆಗೆ ತೊಡಗಿದರು.

“ಕುರುಡನ ಕಣ್ಣಿಗೆ ದೈವದ ದರ್ಶನ ಒಳಗಿನ ಕಣ್ಣೆಅಲ್ಲವೇ?” ಎಂದ ಒಬ್ಬ ಹುಟ್ಟು ಕುರುಡ.

ಕೈಯಿಲ್ಲದ ಹೆಳವನಾದ ನನಗೆ “ಹಣೆಯಲ್ಲಿ ಯಾವ ತಿಲಕ ನಾಮ ಇಟ್ಟುಕೊಳ್ಳಲು ನನಗೆ ಕೈ ಇಲ್ಲ. ನನಗೆ ದಯಯೇ ದೈವ, ಧರ್ಮ” ಎಂದ.

ಕುಂಟನೋರ್ವ ಹೇಳಿದ “ನಾನು ನಡೆದು ಹೋಗಲಾರೆ. ನನಗೆ ದೇಹವೇ ದೇವಾಲಯ. ನನ್ನ ಆಂತರ್ಯದಲ್ಲೇ ನನ್ನ ಆರಾಧ್ಯ ದೈವ” ಎಂದ.

“ಹೀಗೆ ಅಂಗವಿಕಲಾರಾದರೂ ನಾವು ನಾಮ, ಮುದ್ರೆ ಮಂದಿರ, ಜಾತಿ ಪಂಗಡಗಳಿಲ್ಲದೆ ದೇವರನ್ನು ದಯೆಯಲ್ಲಿ ಧರ್ಮದಲ್ಲಿ ಕಂಡುಕೊಂಡಿದ್ದೇವೆ. ಎಲ್ಲಾ ನೆಟ್ಟಗಿರುವ ಜನರೇಕೆ ದಯೆಯೇ ಧರ್ಮವೆಂಬುದು ಬಿಟ್ಟು ವಕ್ರಗತಿಯಲ್ಲಿ ಸಾಗಿದ್ದಾರೆ?” ಎಂದ ಮತ್ತೋರ್ವ ಅಂಗವಿಕಲ.

ಇವರೆಲ್ಲರ ಹೃದಯದಲ್ಲಿ ಅಧ್ಯಕ್ಷತೆವಹಿಸಿದ ದೈವ, ದಯೆಯ ಮಹಾಪೂರ ಹರಿಸಿದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇನ್ನಾರೋ ದುಡಿದುಣಿಸುವನ್ನ ಕೆಡುಕೆನಬೇಡವೇ?
Next post ಇಂದು

ಸಣ್ಣ ಕತೆ

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ನೆಮ್ಮದಿ

    ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…