Home / ಕಥೆ / ಕಿರು ಕಥೆ / ಚರ್ಚೆ

ಚರ್ಚೆ

ಒಂದು ಸೇವಾಶ್ರಮದಲ್ಲಿ ಅನೇಕ ಅಂಗವಿಕಲರು, ಕುಂಟರು, ಕುರುಡರು, ಹೆಳವರು, ಮೂಕರು, ಬುದ್ಧಿ ಮಾಂದ್ಯರು, ನಿಶ್ಯಕ್ತರು, ಹೀಗೆ ಹಲವು ಹತ್ತು ಜನರಿದ್ದರು. ಅವರು ಜಗತ್ತನ್ನು ನೋಡುತ್ತಿದ್ದರು. ಜನಗಳು ಹಣೆಯಲ್ಲಿ, ತಿಲಕ, ವಿಭೂತಿ, ಪಟ್ಟೆ, ಮುದ್ರೆ, ನಾಮ, ಅಂಗಾರ ಅಕ್ಷತೆ ಹಚ್ಚಿಕೊಂಡು ದೇವಾಲಯಗಳಿಗೆ ಹೋಗುವುದನ್ನು, ತಮ್ಮ ಧರ್ಮದ ಬಗ್ಗೆ ಬಾಯಿ ತುಂಬಾ ಮಾತಾಡಿ ಗುರುಗಳ ಉಪದೇಶ ಕೇಳಿ ಧರ್ಮ ದೈವದ ಬಗ್ಗೆ ಚರ್ಚೆ ಮಾಡುವುದನ್ನು ನೋಡಿದ್ದರು. ಅಂಗವಿಕಲರು ಒಮ್ಮೆ ಸಭೆ ಸೇರಿ ಚರ್ಚೆಗೆ ತೊಡಗಿದರು.

“ಕುರುಡನ ಕಣ್ಣಿಗೆ ದೈವದ ದರ್ಶನ ಒಳಗಿನ ಕಣ್ಣೆಅಲ್ಲವೇ?” ಎಂದ ಒಬ್ಬ ಹುಟ್ಟು ಕುರುಡ.

ಕೈಯಿಲ್ಲದ ಹೆಳವನಾದ ನನಗೆ “ಹಣೆಯಲ್ಲಿ ಯಾವ ತಿಲಕ ನಾಮ ಇಟ್ಟುಕೊಳ್ಳಲು ನನಗೆ ಕೈ ಇಲ್ಲ. ನನಗೆ ದಯಯೇ ದೈವ, ಧರ್ಮ” ಎಂದ.

ಕುಂಟನೋರ್ವ ಹೇಳಿದ “ನಾನು ನಡೆದು ಹೋಗಲಾರೆ. ನನಗೆ ದೇಹವೇ ದೇವಾಲಯ. ನನ್ನ ಆಂತರ್ಯದಲ್ಲೇ ನನ್ನ ಆರಾಧ್ಯ ದೈವ” ಎಂದ.

“ಹೀಗೆ ಅಂಗವಿಕಲಾರಾದರೂ ನಾವು ನಾಮ, ಮುದ್ರೆ ಮಂದಿರ, ಜಾತಿ ಪಂಗಡಗಳಿಲ್ಲದೆ ದೇವರನ್ನು ದಯೆಯಲ್ಲಿ ಧರ್ಮದಲ್ಲಿ ಕಂಡುಕೊಂಡಿದ್ದೇವೆ. ಎಲ್ಲಾ ನೆಟ್ಟಗಿರುವ ಜನರೇಕೆ ದಯೆಯೇ ಧರ್ಮವೆಂಬುದು ಬಿಟ್ಟು ವಕ್ರಗತಿಯಲ್ಲಿ ಸಾಗಿದ್ದಾರೆ?” ಎಂದ ಮತ್ತೋರ್ವ ಅಂಗವಿಕಲ.

ಇವರೆಲ್ಲರ ಹೃದಯದಲ್ಲಿ ಅಧ್ಯಕ್ಷತೆವಹಿಸಿದ ದೈವ, ದಯೆಯ ಮಹಾಪೂರ ಹರಿಸಿದ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...