Home / ಕಥೆ / ಕಿರು ಕಥೆ / ಚರ್ಚೆ

ಚರ್ಚೆ

ಒಂದು ಸೇವಾಶ್ರಮದಲ್ಲಿ ಅನೇಕ ಅಂಗವಿಕಲರು, ಕುಂಟರು, ಕುರುಡರು, ಹೆಳವರು, ಮೂಕರು, ಬುದ್ಧಿ ಮಾಂದ್ಯರು, ನಿಶ್ಯಕ್ತರು, ಹೀಗೆ ಹಲವು ಹತ್ತು ಜನರಿದ್ದರು. ಅವರು ಜಗತ್ತನ್ನು ನೋಡುತ್ತಿದ್ದರು. ಜನಗಳು ಹಣೆಯಲ್ಲಿ, ತಿಲಕ, ವಿಭೂತಿ, ಪಟ್ಟೆ, ಮುದ್ರೆ, ನಾಮ, ಅಂಗಾರ ಅಕ್ಷತೆ ಹಚ್ಚಿಕೊಂಡು ದೇವಾಲಯಗಳಿಗೆ ಹೋಗುವುದನ್ನು, ತಮ್ಮ ಧರ್ಮದ ಬಗ್ಗೆ ಬಾಯಿ ತುಂಬಾ ಮಾತಾಡಿ ಗುರುಗಳ ಉಪದೇಶ ಕೇಳಿ ಧರ್ಮ ದೈವದ ಬಗ್ಗೆ ಚರ್ಚೆ ಮಾಡುವುದನ್ನು ನೋಡಿದ್ದರು. ಅಂಗವಿಕಲರು ಒಮ್ಮೆ ಸಭೆ ಸೇರಿ ಚರ್ಚೆಗೆ ತೊಡಗಿದರು.

“ಕುರುಡನ ಕಣ್ಣಿಗೆ ದೈವದ ದರ್ಶನ ಒಳಗಿನ ಕಣ್ಣೆಅಲ್ಲವೇ?” ಎಂದ ಒಬ್ಬ ಹುಟ್ಟು ಕುರುಡ.

ಕೈಯಿಲ್ಲದ ಹೆಳವನಾದ ನನಗೆ “ಹಣೆಯಲ್ಲಿ ಯಾವ ತಿಲಕ ನಾಮ ಇಟ್ಟುಕೊಳ್ಳಲು ನನಗೆ ಕೈ ಇಲ್ಲ. ನನಗೆ ದಯಯೇ ದೈವ, ಧರ್ಮ” ಎಂದ.

ಕುಂಟನೋರ್ವ ಹೇಳಿದ “ನಾನು ನಡೆದು ಹೋಗಲಾರೆ. ನನಗೆ ದೇಹವೇ ದೇವಾಲಯ. ನನ್ನ ಆಂತರ್ಯದಲ್ಲೇ ನನ್ನ ಆರಾಧ್ಯ ದೈವ” ಎಂದ.

“ಹೀಗೆ ಅಂಗವಿಕಲಾರಾದರೂ ನಾವು ನಾಮ, ಮುದ್ರೆ ಮಂದಿರ, ಜಾತಿ ಪಂಗಡಗಳಿಲ್ಲದೆ ದೇವರನ್ನು ದಯೆಯಲ್ಲಿ ಧರ್ಮದಲ್ಲಿ ಕಂಡುಕೊಂಡಿದ್ದೇವೆ. ಎಲ್ಲಾ ನೆಟ್ಟಗಿರುವ ಜನರೇಕೆ ದಯೆಯೇ ಧರ್ಮವೆಂಬುದು ಬಿಟ್ಟು ವಕ್ರಗತಿಯಲ್ಲಿ ಸಾಗಿದ್ದಾರೆ?” ಎಂದ ಮತ್ತೋರ್ವ ಅಂಗವಿಕಲ.

ಇವರೆಲ್ಲರ ಹೃದಯದಲ್ಲಿ ಅಧ್ಯಕ್ಷತೆವಹಿಸಿದ ದೈವ, ದಯೆಯ ಮಹಾಪೂರ ಹರಿಸಿದ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...