ಯಾರು ದೂರವಾದರೇನು?

ಈ ಪಚ್ಚಬಾಳಸಿಪ್ಪೆಯ ಬೆಳಗು,
ಟೊಮ್ಯಾಟೋ ಸೂರ್‍ಯನ ಮುಳುಗು,
ಮೊಳೆಮೆಟ್ಟಿನಿಂದ ತಲೆಮೆಟ್ಟುವ
ರಾಕ್ಷಸ ನಡುಹಗಲು,
ಹಗಲು ಹಿಂಜಿದವನನ್ನ ತುದಿಗೆ ಮಂಜಲ್ಲಿ ಹುಗಿಯುವ
ಡಿಸೆಂಬರಿನ ರೆಫ್ರಿಜಿರೇಟರ್ ರಾತ್ರಿ,
ಯಾರು ದೂರವಾದರೆ ಏನು ನನಗೆ?
ನಿಂತ ನೆಲದ ಈ ಸುಖಸಂಬಂಧ
ಖಾತ್ರಿ ಕಡೆವರೆಗೆ.

ಸದಾ ಕಿವಿವರೆಗೆ ಹಲ್ಲುಕಿರಿವ ಆಕಾಶದ
ನೀಲಿ ಗಿಲೀಟುನಗೆ
ಒರಟುನಿಂತ ಬೆಟ್ಟದ ‘ಏ ಹೋಗೋ ಮಗನೆ’ ಎಂಬ ಬಗೆ
ಖೆಡ್ಡಕ್ಕೆ ಬಿದ್ದ ಆನೆಯಂತೆ
ಎದ್ದಬ್ಬರಿಸುವ ಕಡಲ ಮೊರೆ
ಬಿಳಿ ಪತ್ತಲವಾಗಿ ತೇಲಿ ಬರುವ ಅದರ ಹಾಲು ನೊರೆ
ರಸ್ತೆಗೆ ಛತ್ರಿಬೆಳೆದ ಸೈಂಧವ ಮರಗಳ ಸೊಟ್ಟ ಹಸಿರು
ಇವನ್ನೆಲ್ಲ ಡಬ್ಬಿಗೆ ತುರುಕಿ ಮುಚ್ಚಳ ಬೀಳುವ ಇರುಳು
ಯಾರು ದೂರವಾದರೇನು ನನಗೆ?
ಇವೆಲ್ಲ ಇರುತ್ತ ಲೋಕ ಮದಿರಾಕ್ಷಿಯ ತೋಳ ಸೆರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಹದಾರಿ
Next post ಕಮಲ

ಸಣ್ಣ ಕತೆ

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

cheap jordans|wholesale air max|wholesale jordans|wholesale jewelry|wholesale jerseys