ಯಾರು ದೂರವಾದರೇನು?

ಈ ಪಚ್ಚಬಾಳಸಿಪ್ಪೆಯ ಬೆಳಗು,
ಟೊಮ್ಯಾಟೋ ಸೂರ್‍ಯನ ಮುಳುಗು,
ಮೊಳೆಮೆಟ್ಟಿನಿಂದ ತಲೆಮೆಟ್ಟುವ
ರಾಕ್ಷಸ ನಡುಹಗಲು,
ಹಗಲು ಹಿಂಜಿದವನನ್ನ ತುದಿಗೆ ಮಂಜಲ್ಲಿ ಹುಗಿಯುವ
ಡಿಸೆಂಬರಿನ ರೆಫ್ರಿಜಿರೇಟರ್ ರಾತ್ರಿ,
ಯಾರು ದೂರವಾದರೆ ಏನು ನನಗೆ?
ನಿಂತ ನೆಲದ ಈ ಸುಖಸಂಬಂಧ
ಖಾತ್ರಿ ಕಡೆವರೆಗೆ.

ಸದಾ ಕಿವಿವರೆಗೆ ಹಲ್ಲುಕಿರಿವ ಆಕಾಶದ
ನೀಲಿ ಗಿಲೀಟುನಗೆ
ಒರಟುನಿಂತ ಬೆಟ್ಟದ ‘ಏ ಹೋಗೋ ಮಗನೆ’ ಎಂಬ ಬಗೆ
ಖೆಡ್ಡಕ್ಕೆ ಬಿದ್ದ ಆನೆಯಂತೆ
ಎದ್ದಬ್ಬರಿಸುವ ಕಡಲ ಮೊರೆ
ಬಿಳಿ ಪತ್ತಲವಾಗಿ ತೇಲಿ ಬರುವ ಅದರ ಹಾಲು ನೊರೆ
ರಸ್ತೆಗೆ ಛತ್ರಿಬೆಳೆದ ಸೈಂಧವ ಮರಗಳ ಸೊಟ್ಟ ಹಸಿರು
ಇವನ್ನೆಲ್ಲ ಡಬ್ಬಿಗೆ ತುರುಕಿ ಮುಚ್ಚಳ ಬೀಳುವ ಇರುಳು
ಯಾರು ದೂರವಾದರೇನು ನನಗೆ?
ಇವೆಲ್ಲ ಇರುತ್ತ ಲೋಕ ಮದಿರಾಕ್ಷಿಯ ತೋಳ ಸೆರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಹದಾರಿ
Next post ಕಮಲ

ಸಣ್ಣ ಕತೆ

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…