ಗೋಪಾಲಕೃಷ್ಣ ಅಡಿಗ

ಮೊದಲ ಹೆಜ್ಜೆಗಳಲ್ಲೆ ಅಸಲು ಕುಣಿತದ ಆಸೆ;
ಹುಡುಕಾಟ, ನಕಲಿ ಹೆಜ್ಜೆಯನಿಟ್ಟ ಮಿಡುಕಾಟ.
ಯಾರದೋ ಚೊಣ್ಣ, ಅಂಗಿಯ ತೊಟ್ಟು ಹುಸಿಮೀಸೆ
ಹೊತ್ತು ಎಗರಿದ್ದಕ್ಕೆ ಪಶ್ಚಾತ್ತಾಪ ಪರದಾಟ;
ದುಃಖ, ಗಾಢ ವಿಷಾದ, ಸೃಷ್ಟಿಕಾರಕ ನೋವು.
ಕಾವು ಕೂತಿತು ಹಕ್ಕಿ. ಮಣ್ಣ ಕತ್ತಲಿನಲ್ಲಿ
ಸಣ್ಣ ಬೆತ್ತಲೆ ಬೀಜ, ಹೇಗಾದೇನು ಹೂವು
ಹೇಗಾದೇನು ಹಣ್ಣು ಎನ್ನುವ ತಪಸ್ಸಿನಲ್ಲಿ
ಬೋಧಿವೃಕ್ಷದ ಕೆಳಗೆ ಏನೊ ಫಳ್ಳನೆ ಮಿಂಚಿ
ಚಂಡೆ ಮದ್ದಳೆ ಬಡಿತ, ಬೆರಗೆಬ್ಬಿಸುವ ಕುಣಿತ;
ಗರುಡರೆಕ್ಕೆಯ ಬಿಚ್ಚಿ ನೀಲನಭದಲ್ಲಿ ಹೊಂಚಿ
ಸುತ್ತಿಸಾಗುವ ಮೋಡಿ, ಬಲಿಷ್ಠಮೈಯ ಮಣಿತ

ಭಾಷೆ ಲಯ ನಾದದಲ್ಲಿ ಎದ್ದ ಹೊಸ ನೋಟಕ್ಕೆ ದಂಗಾಯ್ತು ಇಡಿಯ ಕವಿಕುಲವೇ
ಭೋರ್ಗರೆವ ಸಾಗರಕೆ, ಬೆಳಗಿನಾಕಾಶಕ್ಕೆ ಯಾರು ಹೋಲಿಕೆ? ನಿಮಗೆ ನೀವೇ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾತು
Next post ಡಂಗುರ

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…