ವಿಶ್ವರೂಪ

ಈ ನೆಲವು ಬರಿಯ ಮಣ್ಣಲ್ಲವೊ
ಈ ನೆಲದ ನುಡಿ ಕಿರಿದಲ್ಲವೊ
ಅರಿವಿಗಣ್ಣಿನ ನೋಟಕಿಲ್ಲಿ ವಿಶ್ವಂಬರನ
ವಿಶ್ವರೂಪವು ತೆರೆದಿದೆ

ಬಿಂಕ ಬೆಡಗಿನ
ನುಡಿಯ ಸಂಕರ,
ತುಂಬ ಬಹುದೆ
ತಾಯ್ನುಡಿ ಸಾಗರ?
ಒನಪಿನೊನಪಿನ
ಶಬ್ದ ಡಂಗುರ
ತೋರಬಹುದೆ ಸತ್ಯ ಶಿವ ಸುಂದರ…

ಭಾಷೆಯೆಂಬುದು
ಅನ್ನ ನಿಯತಿಯೆ?
ಅನ್ಯ ತಾಯಲಿ
ಜೋಗುಳವೆಲ್ಲಿಯೊ?
ಮಧುರಾನುಭಂಧದ
ಭಾವದೊಳದನಿ
ನನ್ನ ತಾಯನುಡಿ
ಗೆಣೆಯೆಲ್ಲಿಯೂ…

ಯಾವ ಮಡಿಲದು
ನಿನ್ನನೊಳಕೊಳುವುದು
ಎಂಬುದೇತಕೆ
ಮರೆವೆಯೋ…
ನೂರು ಭಾಗ್ಯಕೆ,
ನೂರು ರಾಗಕೆ
ತನ್ನ-ಬೆಳಕನೆ ಹಿಡಿವುದು

*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಿರಣಿ ವಿಸ್ತಾರ ನೋಡಮ್ಮಾ
Next post ನವ್ವಾಲೆ ಬಂತಪ್ಪ ನವ್ವಾಲೆ

ಸಣ್ಣ ಕತೆ

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…