ಅಹಲ್ಯೆ

ಕನಸುಗಳು ಕತ್ತಲಲ್ಲಿ ಕರಗಿ ಹೋಗಿ
ಕಣ್ಣು ಮುಚ್ಚಿ ಕುಳಿತಾಗ ಉತ್ತರವಾಗಿ
ಮೆಲ್ಲಗೆ ನಿನ್ನ ಹೆಜ್ಜೆಯ ಸಪ್ಪಳಗಳು
ಇರುವೆಗಳಂತೆ ಸದ್ದು ಮಾಡದೇ
ಮುಚ್ಚಿದ ಬಾಗಿಲುಗಳ ಸಂದಿಯಿಂದ
ಹರಿದು ಬಂದಾಗ ಕಣ್ಣುಗಳ ತುದಿಯಿಂದ
ಹನಿಗಳು ಜಾರಿ ಬಿದ್ದವು ಮಂಕಾದಳು ಅಹಲ್ಯೆ

ಕಾಲುದಾರಿ ರಸ್ತೆರಹದಾರಿ ಏನೊಂದೂ ಆಗದ
ನನ್ನ ಪ್ರೇಮದ ನಡುಗೆ ಬರೀ
ಅವರಿವರ ಕಣ್ಣುಗಳ ನೋಟಗಳ ಅರೆಸುವಿಕೆ
ನೆನೆಪುಗಳು ತೂತು ತೂತಾದ ಜಾಲರಿಯ
ಭಂಗಿಗಳು ಸೋರಿಹೋದ ಕಣಗಳ ನೆನಪು
ಗೋಡೆ ಮೇಲಿನ ಗಡಿಯಾರ ಸುಮ್ಮನೆ
ಬಾರಿಸುತ್ತದೆ. ಗಂಟೆಗಳ ಕಾಯುತ್ತಾ ಕುಳಿತ ಅಹಲ್ಯೆ.

ಸ್ಪರ್ಶದಲಿ ಚಿಗುರಿನಲಿ ಮೌನದಲಿ
ಬೆರಗು ವಿಸ್ಮಯಗಳ ಹಾದಿ ಪಯಣದಲಿ
ಒಂಟಿ ಕಂದೀಲು ಹಿಡಿದು ಕಲ್ಲಾದ ಉಸಿರು
ಓಣಿಯ ತುಂಬೆಲ್ಲಾ ಬರೀ ಕೆಸರು ಯಾವ
ಸೂಚನೆಗಳು ಯೋಚನೆಗಳು ಗಾಳಿಯಲಿ
ನೀಲಿಯಲಿ ನದಿಯಲಿ ಹರಿದು ಬರೆಯಲು
ಕನಸುಗಳ ಬಣ್ಣದ ಎಳೆಗಳ ನೇಯ್ಗೆ, ಎದೆಯ ಮಗ್ಗದಲಿ
ಸ್ಪರ್ಶ ಸುಖದ ಕಾವು ಹರಡುವ ಸೂರ್ಯನಿಗಾಗಿ,
ಕಾಯುತ್ತಾ ಕುಳಿತ ಅಹಲ್ಯೆ ಇವಳು.

ಮೂಡಿಸಿದ ಮೂಡಲಲಿ ಕೆಂಪುಹಿತ
ಬಣ್ಣದೋಕುಳಿ ಆಡಿದ ಸಂಜೆಯ
ಬಾನಿನ ತುಂಬಾ ರೆಕ್ಕೆಗಳ ಬಿಚ್ಚಿ ಹಾರಾಡಿ
ಸಾಗಿದ ಬೆಳ್ಳಕ್ಕಿ ಹಿಂಡು, ಚಂದ್ರನಿಲ್ಲದ
ಇರುಳಲ್ಲಿ ನಕ್ಷತ್ರಗಳ ಲೋಕಗಳ ಚುಕ್ಕಿಗಳು
ಮಿನುಗಿ ಊರೆಲ್ಲಾ ನಿಶ್ಯಬ್ದ ಬಂದೇ ಬರುವ
ಅವನ ಹೆಜ್ಜೆ ಸಪ್ಪಳದಲ್ಲಿ ಕಲ್ಲಾಗಿ ಪವಡಿಸಿದ
ನಾಳೆಯ ಆಗಮಕೆ ಕಾದ ಅಹಲ್ಯೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಟಮಿನ್ ವಸ್ತ್ರ!
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೭೧

ಸಣ್ಣ ಕತೆ

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

cheap jordans|wholesale air max|wholesale jordans|wholesale jewelry|wholesale jerseys