Home / ಕವನ / ಕವಿತೆ / ಅಹಲ್ಯೆ

ಅಹಲ್ಯೆ

ಕನಸುಗಳು ಕತ್ತಲಲ್ಲಿ ಕರಗಿ ಹೋಗಿ
ಕಣ್ಣು ಮುಚ್ಚಿ ಕುಳಿತಾಗ ಉತ್ತರವಾಗಿ
ಮೆಲ್ಲಗೆ ನಿನ್ನ ಹೆಜ್ಜೆಯ ಸಪ್ಪಳಗಳು
ಇರುವೆಗಳಂತೆ ಸದ್ದು ಮಾಡದೇ
ಮುಚ್ಚಿದ ಬಾಗಿಲುಗಳ ಸಂದಿಯಿಂದ
ಹರಿದು ಬಂದಾಗ ಕಣ್ಣುಗಳ ತುದಿಯಿಂದ
ಹನಿಗಳು ಜಾರಿ ಬಿದ್ದವು ಮಂಕಾದಳು ಅಹಲ್ಯೆ

ಕಾಲುದಾರಿ ರಸ್ತೆರಹದಾರಿ ಏನೊಂದೂ ಆಗದ
ನನ್ನ ಪ್ರೇಮದ ನಡುಗೆ ಬರೀ
ಅವರಿವರ ಕಣ್ಣುಗಳ ನೋಟಗಳ ಅರೆಸುವಿಕೆ
ನೆನೆಪುಗಳು ತೂತು ತೂತಾದ ಜಾಲರಿಯ
ಭಂಗಿಗಳು ಸೋರಿಹೋದ ಕಣಗಳ ನೆನಪು
ಗೋಡೆ ಮೇಲಿನ ಗಡಿಯಾರ ಸುಮ್ಮನೆ
ಬಾರಿಸುತ್ತದೆ. ಗಂಟೆಗಳ ಕಾಯುತ್ತಾ ಕುಳಿತ ಅಹಲ್ಯೆ.

ಸ್ಪರ್ಶದಲಿ ಚಿಗುರಿನಲಿ ಮೌನದಲಿ
ಬೆರಗು ವಿಸ್ಮಯಗಳ ಹಾದಿ ಪಯಣದಲಿ
ಒಂಟಿ ಕಂದೀಲು ಹಿಡಿದು ಕಲ್ಲಾದ ಉಸಿರು
ಓಣಿಯ ತುಂಬೆಲ್ಲಾ ಬರೀ ಕೆಸರು ಯಾವ
ಸೂಚನೆಗಳು ಯೋಚನೆಗಳು ಗಾಳಿಯಲಿ
ನೀಲಿಯಲಿ ನದಿಯಲಿ ಹರಿದು ಬರೆಯಲು
ಕನಸುಗಳ ಬಣ್ಣದ ಎಳೆಗಳ ನೇಯ್ಗೆ, ಎದೆಯ ಮಗ್ಗದಲಿ
ಸ್ಪರ್ಶ ಸುಖದ ಕಾವು ಹರಡುವ ಸೂರ್ಯನಿಗಾಗಿ,
ಕಾಯುತ್ತಾ ಕುಳಿತ ಅಹಲ್ಯೆ ಇವಳು.

ಮೂಡಿಸಿದ ಮೂಡಲಲಿ ಕೆಂಪುಹಿತ
ಬಣ್ಣದೋಕುಳಿ ಆಡಿದ ಸಂಜೆಯ
ಬಾನಿನ ತುಂಬಾ ರೆಕ್ಕೆಗಳ ಬಿಚ್ಚಿ ಹಾರಾಡಿ
ಸಾಗಿದ ಬೆಳ್ಳಕ್ಕಿ ಹಿಂಡು, ಚಂದ್ರನಿಲ್ಲದ
ಇರುಳಲ್ಲಿ ನಕ್ಷತ್ರಗಳ ಲೋಕಗಳ ಚುಕ್ಕಿಗಳು
ಮಿನುಗಿ ಊರೆಲ್ಲಾ ನಿಶ್ಯಬ್ದ ಬಂದೇ ಬರುವ
ಅವನ ಹೆಜ್ಜೆ ಸಪ್ಪಳದಲ್ಲಿ ಕಲ್ಲಾಗಿ ಪವಡಿಸಿದ
ನಾಳೆಯ ಆಗಮಕೆ ಕಾದ ಅಹಲ್ಯೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...