Home / ಕವನ / ಕವಿತೆ / ಅಹಲ್ಯೆ

ಅಹಲ್ಯೆ

ಕನಸುಗಳು ಕತ್ತಲಲ್ಲಿ ಕರಗಿ ಹೋಗಿ
ಕಣ್ಣು ಮುಚ್ಚಿ ಕುಳಿತಾಗ ಉತ್ತರವಾಗಿ
ಮೆಲ್ಲಗೆ ನಿನ್ನ ಹೆಜ್ಜೆಯ ಸಪ್ಪಳಗಳು
ಇರುವೆಗಳಂತೆ ಸದ್ದು ಮಾಡದೇ
ಮುಚ್ಚಿದ ಬಾಗಿಲುಗಳ ಸಂದಿಯಿಂದ
ಹರಿದು ಬಂದಾಗ ಕಣ್ಣುಗಳ ತುದಿಯಿಂದ
ಹನಿಗಳು ಜಾರಿ ಬಿದ್ದವು ಮಂಕಾದಳು ಅಹಲ್ಯೆ

ಕಾಲುದಾರಿ ರಸ್ತೆರಹದಾರಿ ಏನೊಂದೂ ಆಗದ
ನನ್ನ ಪ್ರೇಮದ ನಡುಗೆ ಬರೀ
ಅವರಿವರ ಕಣ್ಣುಗಳ ನೋಟಗಳ ಅರೆಸುವಿಕೆ
ನೆನೆಪುಗಳು ತೂತು ತೂತಾದ ಜಾಲರಿಯ
ಭಂಗಿಗಳು ಸೋರಿಹೋದ ಕಣಗಳ ನೆನಪು
ಗೋಡೆ ಮೇಲಿನ ಗಡಿಯಾರ ಸುಮ್ಮನೆ
ಬಾರಿಸುತ್ತದೆ. ಗಂಟೆಗಳ ಕಾಯುತ್ತಾ ಕುಳಿತ ಅಹಲ್ಯೆ.

ಸ್ಪರ್ಶದಲಿ ಚಿಗುರಿನಲಿ ಮೌನದಲಿ
ಬೆರಗು ವಿಸ್ಮಯಗಳ ಹಾದಿ ಪಯಣದಲಿ
ಒಂಟಿ ಕಂದೀಲು ಹಿಡಿದು ಕಲ್ಲಾದ ಉಸಿರು
ಓಣಿಯ ತುಂಬೆಲ್ಲಾ ಬರೀ ಕೆಸರು ಯಾವ
ಸೂಚನೆಗಳು ಯೋಚನೆಗಳು ಗಾಳಿಯಲಿ
ನೀಲಿಯಲಿ ನದಿಯಲಿ ಹರಿದು ಬರೆಯಲು
ಕನಸುಗಳ ಬಣ್ಣದ ಎಳೆಗಳ ನೇಯ್ಗೆ, ಎದೆಯ ಮಗ್ಗದಲಿ
ಸ್ಪರ್ಶ ಸುಖದ ಕಾವು ಹರಡುವ ಸೂರ್ಯನಿಗಾಗಿ,
ಕಾಯುತ್ತಾ ಕುಳಿತ ಅಹಲ್ಯೆ ಇವಳು.

ಮೂಡಿಸಿದ ಮೂಡಲಲಿ ಕೆಂಪುಹಿತ
ಬಣ್ಣದೋಕುಳಿ ಆಡಿದ ಸಂಜೆಯ
ಬಾನಿನ ತುಂಬಾ ರೆಕ್ಕೆಗಳ ಬಿಚ್ಚಿ ಹಾರಾಡಿ
ಸಾಗಿದ ಬೆಳ್ಳಕ್ಕಿ ಹಿಂಡು, ಚಂದ್ರನಿಲ್ಲದ
ಇರುಳಲ್ಲಿ ನಕ್ಷತ್ರಗಳ ಲೋಕಗಳ ಚುಕ್ಕಿಗಳು
ಮಿನುಗಿ ಊರೆಲ್ಲಾ ನಿಶ್ಯಬ್ದ ಬಂದೇ ಬರುವ
ಅವನ ಹೆಜ್ಜೆ ಸಪ್ಪಳದಲ್ಲಿ ಕಲ್ಲಾಗಿ ಪವಡಿಸಿದ
ನಾಳೆಯ ಆಗಮಕೆ ಕಾದ ಅಹಲ್ಯೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...