ಒಮ್ಮೊಮ್ಮೆ ಹೀಗೂ ಆಗುವುದು

ಹಿಂದೊಮ್ಮೆ ಕೂಡಾ ಹೀಗೆ ಆಗಿತ್ತಲ್ಲ.
ಗಂಟುಗಂಟಾಗಿ ಸಿಕ್ಕು ಬಿದ್ದು ಅ-
ಕ್ಷರದ ತಾರೆಗಳೆಲ್ಲ ನೆಲಕ್ಕೆ ಚೆಲ್ಲಿದಂತೆ
ಜ್ಞಾನಪಾತ್ರೆಯ ಎದುರು ಹಸಿದ ಕಂಗಳು
ಮೂರ್‍ಚೆಗೊಂಡ ಮನಸ್ಸು
ನಗ್ನವಾಗಿ ನಿಂತುಬಿಟ್ಟವು
ಕಾಲ ಚಲಿಸಲಿಲ್ಲ.

ಆದರೆ ಮಜ್ಜಿಗೆಯೂಡಿದ
ಮರುಗಳಿಗೆ
ಅಮಲು ಇಳಿಯುವುದು
ಕಣ್ಣುಗಳ ಮಂಜು ಮಬ್ಬು ಕರಗುವುದು.
ಒಳದೃಷ್ಟಿ ಬೆಳಗುವುದು
ಹೆಚ್ಚು ಹೆಚ್ಚು ವ್ಯಾಖ್ಯಾನಿಸಿದಷ್ಟು
ಒಳಾರ್ಥದ ಕುದಿ
ಕಂದಿಹೋಗುವುದು ಮಿತಿಯ ಗತಿ
ಸೆಳೆದಷ್ಟು ಮರ್‍ಮ ಬೆಳೆಯುವುದು.

ಭವದ ಬಲೆಯಲ್ಲಿ ತೂಗುತ್ತ
ಹಾಲಾಹಲ ಚೂರು ಚೂರೇ
ಸಂಗಾತಕ್ಕೆ ಸರಿಗಟ್ಟಿತು.
ಜೀವ ನಿಲ್ಲುವುದಿಲ್ಲ
ನೆಲ ನೀರು ಕೂಡಿತೆಂದರೆ
ಬರಡು ಮಲೆಯಾಯಿತು.
ಕಾಷ್ಠದ ತೊಗಲಿಗೂ ಮಿಂಚುಹುಳುಗಳು
ಮುಕುರಿ ಜಗ್ಗನೇ ಹೊಳಪು ಹೊದ್ದ
ಮನ ಮಿರುಗಿತು.
ಶಮನಗೊಂಡಿತು ಉರಿ.
ಹೊಲದ ಅಂಚು ಹೊದ್ದ
ಬೇಲಿಗಂಬವನ್ನು ಬಿಡದೆ
ಅಂಟಿಕೊಂಡರೂ ಗೆದ್ದಲು
ಚಿಗುರುಕ್ಕಿ ನಸುನಕ್ಕಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಖರ್ಬೂಜದ ಗಾಡಿ
Next post ವಿಜಯ ವಿಲಾಸ – ಪಂಚಮ ತರಂಗ

ಸಣ್ಣ ಕತೆ

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…