Home / ಕವನ / ಕವಿತೆ / ಅಪ್ಪ ಕೊಡಿಸಿದ ಅಂಗಿ

ಅಪ್ಪ ಕೊಡಿಸಿದ ಅಂಗಿ

ಅದು ನನ್ನದಲ್ಲದ ಅಂಗಿ
ಅದರೆ ಇಂಚಿಂಚೂ ಮೆಚ್ಚುಗೆ ಆದದ್ದು ಸುಳ್ಳಲ್ಲ.
ಬಯಸಿದ್ದು ಕನವರಿಸಿದ್ದು ಅದಕ್ಕಾಗೇ
ಇಲ್ಲ, ಬಿಟ್ಟುಬಿಡು, ನಿನ್ನ ಮೈಬಣ್ಣಕ್ಕೆ ಒಪ್ಪಿಗೆಯಾಗದು
ಅಮ್ಮನ ತಕರಾರು.
ಮುನಿಸಿಕೊಂಡೆ, ಮಾತು ಬಿಟ್ಟೆ, ಮತ್ತೆ ಮತ್ತೆ ನೋಡಿಬಂದೆ.
ಕಿವಿಗಿಳಿದರೂ ಕಾದ ಸೀಸ.

ಬಣ್ಣದ ಅಂಗಿಯ ಮೋಹ ಬೇಡ
ಎನ್ನುತ್ತ ಲಗುಬಗೆಯಿಂದ ಅಪ್ಪ ನನಗೆಂದೇ
ಒಂದಂಗಿ ಕೊಡಿಸಿಬಿಟ್ಟರು.
ಬಾಳಿಕೆಗೆ ಬರವಿಲ್ಲ
ಕಾಲಕ್ಕೂ ಕಷ್ಟಕ್ಕೂ ಜೊತೆಯಾಗಿ
ನನ್ನ ಮೈಗಂಟಿಕೊಂಡೆ ಕಾಯುತ್ತದೆ ಎಂದೆನ್ನುತ.

ಬರಬರುತ್ತ ಅಂಗಿ ಮೇಲೆ ಆಸೆ ತಾನೆ ತಾನೆ ನನಗೂ
ಒಮ್ಮೆ ತೊಟ್ಟರೂ ಮತ್ತೆ ಮತ್ತೆ ತೊಡುವಾಸೆ
ಆ ಅಂಗಿ ಬಿಟ್ಟರೆ ಬೇರೆ ಗತಿಯಿಲ್ಲ
ನನ್ನ ತೊಗಲಿಗೆ ಅಂಟಿಕೊಂಡಂತೆ ಅಂಗಿ.

ಅಂಗಿಗೂ ನಾನೆಂದರೆ ಅಷ್ಟಕಷ್ಟೆ ಮೊದಮೊದಲು
ದಿಕ್ಕೆಟ್ಟ ದರ್ಪದ ಧಿಮಾಕು
ಕಳಚಿ ಇಟ್ಟಾಗಲೆಲ್ಲ ಸ್ವಚ್ಛಂದ ಹಾರಾಟ.

ಈಗೀಗ ಅದಕ್ಕೂ ಏನೋ ಅನುಬಂಧ
ನನ್ನ ಮೈಗಂಟಿಕೊಂಡೆ ಇರುತ್ತದೆ
ಒಳಗೊಳಗೆ ಕಚಗುಳಿ ಇಡುತ್ತ, ನನ್ನನ್ನೆ ಮೆಚ್ಚುತ್ತ
ಅಂಗಿಗೆ ನನ್ನೆಲ್ಲವನ್ನೂ ಒಳಗೊಳ್ಳುವ ತಾಕತ್ತಿದೆ.
ಒಳಹರವು ಚೆನ್ನಾಗಿದೆ. ಸಣ್ಣಪುಟ್ಟ ಮಳೆಗೆ ಧೃತಿಗೆಡದು.
ಬಿಸಿಲಿಗೆ ಬಣ್ಣಗೆಡದು.

ಕಾಯ್ದುಕೋ ಕಾಳಜಿಯಿಂದ
ಅಸಡ್ಡೆ ಮಾಡಿದರೆ, ಬೇಕೆಂದರಲ್ಲಿ ಕಳಚಿ ಇಟ್ಟರೆ
ಹಾರಿಹೋದೀತು ಎಚ್ಚರಿಸಿದ್ದಳು ಅಮ್ಮ
ಈಗ ನಾನೂ ಅಷ್ಟೇ
ಬೆಲೆಬಾಳುವ ಬಣ್ಣದ ಅಂಗಿಗಳಿಗಿಂತ
ದೀರ್ಘಬಾಳಿಕೆಯ ಇಂತಹ ಅಂಗಿಯ
ಹುಡುಕಾಟದಲ್ಲಿದ್ದೇನೆ ನನ್ನ ಮಗಳಿಗೂ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...