ಎಲ್ಲಮ್ಮನ ಜಾತ್ರೆಗೆ ಬಲ್ಲವರು ಹೋಗಿ

ಎಲ್ಲಮ್ಮನ ಜಾತ್ರೆಗೆ ಬಲ್ಲವರು ಹೋಗಿ ನೋಡಿಲಿಬೇಕು
ಅಲ್ಲಮಪ್ರಭುವಿನ ಮೇಲಡಿ ದಟ್ಟಿನ ಚಳ್ಳುಗುರ್ಕೊಳ್ಳದ
ಕಲ್ಲೊಳು ಜನಿಸಿ ಬಲು ಚಲುವೆ ಎನಿಸಿ ಕಲಿಯುಗದೊಳು ಮರೆದ
ಸಲ್ಲಲಿತದಿ ಶರ್ವಾಣಿಯ ಜಾತ್ರೆಗೆ ||೧||

ಏಳುಕೊಳ್ಳ ಸರೋವರ ಒಂದು ಅಲ್ಲಿಳಿದಳೋ ಬಂದು
ತಾಳ ಜಾಗುಟಿ ಗೋಳಿಡುತಲಿ ಚೌಡಿಕೆ
ಮೇಳ ಸಹಿತ ಉಧೋ ಎಂಬುವ ಗಾನಕೆ
ಬಾಳ ವಿಲಾಸದಿ ಮೈಮೇಲೆ ರೋಮಾಂಚನವೇಳುವ ಮಹಾಂ-
ಕಾಳಿಯ ಜಾತ್ರೆಗೆ ಬಲ್ಲವರು ಹೋಗಿ ನೋಡಲಿ ಬೇಕು ||೨||

ಮಂಡಲ ಹೊತ್ತು ಮೆರದಂಥಾಕಿ ಬ್ರ-
ಹ್ಮಾಂಡಕ ಸೊಕ್ಕಿ ನವಖಂಡ ಅ-
ಜಾಂಡಕ ತಾಕಿ ಜಗತ್ಪಂಡಿತರಿಗೆ ಪಾವನಾತ್ಮಳಾಗಿ ಸುಖ
ತಾಂಡವ ತೇಜ ಕರಂಡಿ ಎನಿಸಿ ತಾ
ಗೊಂಡು ತಾಳಿ ಮುತ್ತೈದಿ ಹುಣ್ಣಿವೆ ||೩||

ರೇಣುಕಾತ್ಮಜೆಯಾಗಿ ಜನಿಸಿ
ತನು ಮನಗಳಿಂದ ತೋಷವ ಪಡಿಸಿ
ಕ್ಷೋಣಿಯೊಳು ಜಮದಗ್ನಿ ವರಿಸಿ
ಗೋಣಕೊಯಿಸಿ ಕುಣಿಸುತ ಲೋಕದಿ
ಮಾಣದೆ ಮುನಿಗಳ ಮೌನಗೊಳಿಸಿದಿ
ಜಾಣಗಳೆಣಿಪ ಜಗದಂಬೆಯ ಜಾತ್ರೆಗೆ ||೪||

ಹಡೆದ ಮಗನೊಳು ಹಗೆಯವ ತಾಳಿ
ಕಡು ಹರುಷದಿ ಎಕ್ಕಯ್ಯಗ ಪೇಳಿ
ಒಡಗೂಡಿದ ಋಷಿಗಳಿಗೆಲ್ಲ ಬಂಗಿ
ಪುಡಿ ರಸವನು ಕುಡಿಸಿ ಜಗವನು ಸಲುಹಿದ
ಒಡೆಯ ಶಿಶುನಾಳಧೀಶನ ಮಡದಿಯ ಜಾತ್ರೆಗೆ ||೫||

* * * *

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಾಲಿಸಯ್ಯ ಪಾರ್ವತಿಪತಿ
Next post ಎಲ್ಲೀ ಕಾಣೆ ಎಲ್ಲೀ ಕಾಣೆ

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…