ಕೊಳಲು

ಅಂತ ಕರಣ ಒಸರಿಸಿದ
ರಸಪದದ ರಾಗ ಹರಿವ
ನದಿಯ ಜುಳು ಜುಳು
ಸಪ್ತಸ್ವರವಾದ ಸಪ್ತರ್ಷಿಮಂಡಲ
ಮಿನುಗು ಮಿಂಚು ರಸಭಾವ
ಎಲ್ಲ ತಲ್ಲಣಗಳ ದಾಟಿ
ಒಡಲಿಂದ ಒಡಲಿಗೆ ಸೇರುವ
ಅಂತರಂಗದ ಸಮುದ್ರ.

ವೃಷ್ಠಿ ಸಮಷ್ಠಿಯ ಮಂಗಳ ಹಾಸು
ಬೀಸಿದ ಹೃದಯದಲಿ ಶೀವನ ನಟುವಾಂಗ
ತಿಳಿಗಾಳಿಯ ಗುಂಟ ಹರಡಿ ಹಾಸಿ ಗಂಧ
ಪ್ರಣೀತ ಊದಿದ ಕೊಳಲು ಗಾನ ಹರಸಿ
ಸನ್ಮಾರ್ಗ ತುಂಬ ಚಿನ್ನದ ಗರಿಗಳು
ಹಸಿರು ಹಬ್ಬಿದ ಸಿರಿಬೋಗ ಮಳೆಹರಿದು
ಇಳಿದು ಬಂತು ಮೇಲಿನಿಂದ ಜೀವ ರಾಗ.

ಮನದೊಳಗೆ ಸೆಲೆಒಡೆದ ತೀವ್ರರಾಗ
ಹನಿಹನಿ ಇಬ್ಬನಿ ಮನದನಿಯಲಿ ಇಳಿದು
ಎದೆಯಿಂದ ಎದೆಗೆ ಕೊರಳಿನಿಂದ ಕೊರಳಿಗೆ
ಬಣ್ಣದೋಕುಳಿಯಾಡಿ ಮರಳಿ ಮುರಳಿಗಾನ
ಪ್ರೀತಿ ಹರಿದ ಹಕ್ಕಿಕೊರಳ ತುಂಬ ಇನಿಧ್ವನಿ
ಬಯಲು ತುಂಬ ಗಂಧರ್ವಲೋಕ ತನತನ
ಆತ್ಮಪರಮಾತ್ಮನ ಲೀನ ನಿವೇದನೆ ನಿನ್ನ ಹರವಿನಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹುಲಿ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೫೮

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…