ಕೊಳಲು

ಅಂತ ಕರಣ ಒಸರಿಸಿದ
ರಸಪದದ ರಾಗ ಹರಿವ
ನದಿಯ ಜುಳು ಜುಳು
ಸಪ್ತಸ್ವರವಾದ ಸಪ್ತರ್ಷಿಮಂಡಲ
ಮಿನುಗು ಮಿಂಚು ರಸಭಾವ
ಎಲ್ಲ ತಲ್ಲಣಗಳ ದಾಟಿ
ಒಡಲಿಂದ ಒಡಲಿಗೆ ಸೇರುವ
ಅಂತರಂಗದ ಸಮುದ್ರ.

ವೃಷ್ಠಿ ಸಮಷ್ಠಿಯ ಮಂಗಳ ಹಾಸು
ಬೀಸಿದ ಹೃದಯದಲಿ ಶೀವನ ನಟುವಾಂಗ
ತಿಳಿಗಾಳಿಯ ಗುಂಟ ಹರಡಿ ಹಾಸಿ ಗಂಧ
ಪ್ರಣೀತ ಊದಿದ ಕೊಳಲು ಗಾನ ಹರಸಿ
ಸನ್ಮಾರ್ಗ ತುಂಬ ಚಿನ್ನದ ಗರಿಗಳು
ಹಸಿರು ಹಬ್ಬಿದ ಸಿರಿಬೋಗ ಮಳೆಹರಿದು
ಇಳಿದು ಬಂತು ಮೇಲಿನಿಂದ ಜೀವ ರಾಗ.

ಮನದೊಳಗೆ ಸೆಲೆಒಡೆದ ತೀವ್ರರಾಗ
ಹನಿಹನಿ ಇಬ್ಬನಿ ಮನದನಿಯಲಿ ಇಳಿದು
ಎದೆಯಿಂದ ಎದೆಗೆ ಕೊರಳಿನಿಂದ ಕೊರಳಿಗೆ
ಬಣ್ಣದೋಕುಳಿಯಾಡಿ ಮರಳಿ ಮುರಳಿಗಾನ
ಪ್ರೀತಿ ಹರಿದ ಹಕ್ಕಿಕೊರಳ ತುಂಬ ಇನಿಧ್ವನಿ
ಬಯಲು ತುಂಬ ಗಂಧರ್ವಲೋಕ ತನತನ
ಆತ್ಮಪರಮಾತ್ಮನ ಲೀನ ನಿವೇದನೆ ನಿನ್ನ ಹರವಿನಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹುಲಿ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೫೮

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

cheap jordans|wholesale air max|wholesale jordans|wholesale jewelry|wholesale jerseys