ಹುಲಿ

ಹುಲಿ ನಮ್ಮ ದೇಶದ ರಾಷ್ಟ್ರೀಯ ಪ್ರಾಣಿ. ಮೇಲಾಗಿ ಇದು “ವನ ರಾಜ”. ಇದು ಬೆಕ್ಕಿನ ವರ್‍ಗಕ್ಕೆ ಸೇರಿದೆ. ಇದರ ಮೈ ಬಣ್ಣ ಕಂದು. ಅದರ ಮೇಲೆ ಕಪ್ಪು ಪಟ್ಟೆಗಳು. ಇದು ಬಲಯುತವೂ, ಚುರುಕೂ ಆದ ಸ್ನಾಯುಖಂಡಗಳನ್ನು ಹೊಂದಿದೆ. ಇದರ ಹಿಂಗಾಲು ಮುಂಗಾಲುಗಳು ದೇಹಕ್ಕೆ ತಕ್ಕಂತೆ ಬಲಿಷ್ಠವಾಗಿವೆ. ಇದು ತನ್ನ ದೇಹದ ಭಾರವನ್ನು ಹೆಚ್ಚಾಗಿ ಮುಂಗಾಲುಗಳ ಮೇಲೆಯೇ ಹಾಕಿ ನಡೆಯುತ್ತದೆ. ಸದ್ದಿಲ್ಲದೆ ನಡೆಯಬೇಕಾದಾಗ ಇದು ತನ್ನ ವಕ್ರವಾದ ಉಗುರುಗಳನ್ನು ಒಳಗೆ ಎಳೆದುಕೊಳ್ಳುತ್ತದೆ.

ಹೆಣ್ಣು ಹುಲಿ ತನ್ನ ಮರಿಗಳನ್ನು ಬಹಳ ಪ್ರೀತಿಯಿಂದ ಸಾಕುತ್ತದೆ. ಹುಲಿ ಧೈರ್‍ಯ ಮತ್ತು ಸ್ಥೈರ್‍ಯಕ್ಕೆ ಹೆಸರಾದ ಪ್ರಾಣಿ. ಹುಲಿಗಳು ಸರಾಗವಾಗಿ ನೀರಿನಲ್ಲಿ ಈಜಬಲ್ಲವು ಮತ್ತು ಮರವನ್ನು ಹತ್ತಬಲ್ಲವು. ಸಾಮಾನ್ಯವಾಗಿ ಹುಲಿಗಳು ೧೬ ರಿಂದ ೨೦ ವರ್‍ಷಗಳವರೆಗೆ ಜೀವಿಸುತ್ತವೆ.

ತುಲನೆ ಮಾಡಿ ನೋಡಿದರೆ ಸಿಂಹಕ್ಕಿಂತ ಹುಲಿಯೇ ಬಲಿಷ್ಠ. ಹುಲಿಗೂ ಸಿಂಹಕ್ಕೂ ಕಾದಾಟವಾದರೆ ಹುಲಿಯೇ ಗೆಲ್ಲುತ್ತದೆ.

ಹುಲಿಗಳು ಹೆಚ್ಚಾಗಿ ಏಷಿಯಾ ಖಂಡದ ಮಂಚೋರಿಯಾ ದೇಶದಿಂದ ಹಿಡಿದು ಚೀನಾ, ಭಾರತ, ಜಾವಾ ಮತ್ತು ಬೋರ್‍ನಿಯಾ ದೇಶಗಳ ಕಾಡುಗಳಲ್ಲಿ ವಾಸಿಸುತ್ತವೆ. ಭಾರತದಲ್ಲಿ ಹುಲಿಗಳು ಹೆಚ್ಚಾಗಿ ಬಂಗಾಲ, ಬಿಹಾರ, ಪಶ್ಚಿಮ ಘಟ್ಟದ ಮಲೆನಾಡಿನ ಕಾಡು, ನೇಪಾಳ ಮತ್ತು ಹಿಮಾಲಯದ ತೆರಾಂ ಮುಂತಾದ ಸ್ಥಳಗಳಲ್ಲಿ ವಾಸಿಸುತ್ತವೆ. ಮಂಚೋರಿಯಾ ದೇಶದ ಹುಲಿಗಳು ನಮ್ಮ ದೇಶದ ಹುಳಿಗಳಿಗಿಂತಲೂ ದೊಡ್ಡದಾಗಿವೆ. ಅವುಗಳ ಮೈ ಬಣ್ಣ ಕಂದು ಮತ್ತು ಕಿತ್ತಳೆ.

ವಿನಾಶದ ಅಂಚಿನಲ್ಲಿ

ಭಾರತದಲ್ಲಿರುವಷ್ಟು ಹುಲಿಗಳು ಬೇರೆಲ್ಲೂ ಇಲ್ಲ. ನಮ್ಮಲ್ಲಿರುವ ಹುಲಿಗಳ ಸಂಖ್ಯೆ ಸುಮಾರು ೪,೦೦೦. ಚೀನಾದಲ್ಲಿ ಹುಲಿಗಳ ಮೂಳೆಗಳನ್ನು ಉಪಯೋಗಿಸಿ ಅದ್ಭುತ ಗುಣಗಳಿರುವ “ಟೈಗರ್‍ ವೈನ್” ತಯಾರಿಸುತ್ತಿದ್ದಾರೆ. ಆದ್ದರಿಂದ ಚೀನಾದ ೧೧೦ ಕಾರ್‍ಖಾನೆಗಳಿಗೆ ಕಳ್ಳತನದಿಂದ ಭಾರತದ ಹುಲಿಗಳ ಮೂಳೆ ಸರಬರಾಜು. ೧ ಕಿಲೋ ಮೂಳೆಯ ಬೆಲೆ ೨,೪೦೦ ರೂಪಾಯಿ. ಒಂದು ಹುಲಿಯಲ್ಲಿರುವ ಮೂಳೆ ತೂಕ ೧೮ ಕಿಲೋ. ಹಾಗಾಗಿ ಒಂದು ಹುಲಿಯನ್ನು ಕೊಂದರೆ ೪೨,೦೦೦ ರೂಪಾಯಿ ಸಂಪಾದನೆ! ಅದರ ಚರ್‍ಮಕ್ಕೆ ೨ ಲಕ್ಷಕ್ಕೂ ಮೀರಿ ಬೆಲೆಯಿದೆ. ಹೀಗಾಗಿ ಒಂದು ಸತ್ತ ಹುಲಿಯಿಂದ ಒಟ್ಟು ಸುಮಾರು ೩ ಲಕ್ಷ ರೂಪಾಯಿ ಆದಾಯವಿದೆ.

ಹೀಗೆಯೇ ಈ ಬೇಟೆಯು ಮುಂದುವರಿದರೆ ನಾಳಿನ ಜನಾಂಗ ಹುಲಿಗಳನ್ನು ಕೇವಲ ಕಥೆಗಳಲ್ಲಿ ಅಥವಾ ಚಿತ್ರಗಳಲ್ಲಿ ಕಾಣಬೇಕಾಗುತ್ತದೆ. ರಾಷ್ಟ್ರೀಯ ಪ್ರಾಣಿ ಹುಲಿಯನ್ನು ರಕ್ಷಿಸುವುದು ಇಂದು ಅಗತ್ಯವಾಗಿದೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...