ಹುಲಿ

ಹುಲಿ ನಮ್ಮ ದೇಶದ ರಾಷ್ಟ್ರೀಯ ಪ್ರಾಣಿ. ಮೇಲಾಗಿ ಇದು “ವನ ರಾಜ”. ಇದು ಬೆಕ್ಕಿನ ವರ್‍ಗಕ್ಕೆ ಸೇರಿದೆ. ಇದರ ಮೈ ಬಣ್ಣ ಕಂದು. ಅದರ ಮೇಲೆ ಕಪ್ಪು ಪಟ್ಟೆಗಳು. ಇದು ಬಲಯುತವೂ, ಚುರುಕೂ ಆದ ಸ್ನಾಯುಖಂಡಗಳನ್ನು ಹೊಂದಿದೆ. ಇದರ ಹಿಂಗಾಲು ಮುಂಗಾಲುಗಳು ದೇಹಕ್ಕೆ ತಕ್ಕಂತೆ ಬಲಿಷ್ಠವಾಗಿವೆ. ಇದು ತನ್ನ ದೇಹದ ಭಾರವನ್ನು ಹೆಚ್ಚಾಗಿ ಮುಂಗಾಲುಗಳ ಮೇಲೆಯೇ ಹಾಕಿ ನಡೆಯುತ್ತದೆ. ಸದ್ದಿಲ್ಲದೆ ನಡೆಯಬೇಕಾದಾಗ ಇದು ತನ್ನ ವಕ್ರವಾದ ಉಗುರುಗಳನ್ನು ಒಳಗೆ ಎಳೆದುಕೊಳ್ಳುತ್ತದೆ.

ಹೆಣ್ಣು ಹುಲಿ ತನ್ನ ಮರಿಗಳನ್ನು ಬಹಳ ಪ್ರೀತಿಯಿಂದ ಸಾಕುತ್ತದೆ. ಹುಲಿ ಧೈರ್‍ಯ ಮತ್ತು ಸ್ಥೈರ್‍ಯಕ್ಕೆ ಹೆಸರಾದ ಪ್ರಾಣಿ. ಹುಲಿಗಳು ಸರಾಗವಾಗಿ ನೀರಿನಲ್ಲಿ ಈಜಬಲ್ಲವು ಮತ್ತು ಮರವನ್ನು ಹತ್ತಬಲ್ಲವು. ಸಾಮಾನ್ಯವಾಗಿ ಹುಲಿಗಳು ೧೬ ರಿಂದ ೨೦ ವರ್‍ಷಗಳವರೆಗೆ ಜೀವಿಸುತ್ತವೆ.

ತುಲನೆ ಮಾಡಿ ನೋಡಿದರೆ ಸಿಂಹಕ್ಕಿಂತ ಹುಲಿಯೇ ಬಲಿಷ್ಠ. ಹುಲಿಗೂ ಸಿಂಹಕ್ಕೂ ಕಾದಾಟವಾದರೆ ಹುಲಿಯೇ ಗೆಲ್ಲುತ್ತದೆ.

ಹುಲಿಗಳು ಹೆಚ್ಚಾಗಿ ಏಷಿಯಾ ಖಂಡದ ಮಂಚೋರಿಯಾ ದೇಶದಿಂದ ಹಿಡಿದು ಚೀನಾ, ಭಾರತ, ಜಾವಾ ಮತ್ತು ಬೋರ್‍ನಿಯಾ ದೇಶಗಳ ಕಾಡುಗಳಲ್ಲಿ ವಾಸಿಸುತ್ತವೆ. ಭಾರತದಲ್ಲಿ ಹುಲಿಗಳು ಹೆಚ್ಚಾಗಿ ಬಂಗಾಲ, ಬಿಹಾರ, ಪಶ್ಚಿಮ ಘಟ್ಟದ ಮಲೆನಾಡಿನ ಕಾಡು, ನೇಪಾಳ ಮತ್ತು ಹಿಮಾಲಯದ ತೆರಾಂ ಮುಂತಾದ ಸ್ಥಳಗಳಲ್ಲಿ ವಾಸಿಸುತ್ತವೆ. ಮಂಚೋರಿಯಾ ದೇಶದ ಹುಲಿಗಳು ನಮ್ಮ ದೇಶದ ಹುಳಿಗಳಿಗಿಂತಲೂ ದೊಡ್ಡದಾಗಿವೆ. ಅವುಗಳ ಮೈ ಬಣ್ಣ ಕಂದು ಮತ್ತು ಕಿತ್ತಳೆ.

ವಿನಾಶದ ಅಂಚಿನಲ್ಲಿ

ಭಾರತದಲ್ಲಿರುವಷ್ಟು ಹುಲಿಗಳು ಬೇರೆಲ್ಲೂ ಇಲ್ಲ. ನಮ್ಮಲ್ಲಿರುವ ಹುಲಿಗಳ ಸಂಖ್ಯೆ ಸುಮಾರು ೪,೦೦೦. ಚೀನಾದಲ್ಲಿ ಹುಲಿಗಳ ಮೂಳೆಗಳನ್ನು ಉಪಯೋಗಿಸಿ ಅದ್ಭುತ ಗುಣಗಳಿರುವ “ಟೈಗರ್‍ ವೈನ್” ತಯಾರಿಸುತ್ತಿದ್ದಾರೆ. ಆದ್ದರಿಂದ ಚೀನಾದ ೧೧೦ ಕಾರ್‍ಖಾನೆಗಳಿಗೆ ಕಳ್ಳತನದಿಂದ ಭಾರತದ ಹುಲಿಗಳ ಮೂಳೆ ಸರಬರಾಜು. ೧ ಕಿಲೋ ಮೂಳೆಯ ಬೆಲೆ ೨,೪೦೦ ರೂಪಾಯಿ. ಒಂದು ಹುಲಿಯಲ್ಲಿರುವ ಮೂಳೆ ತೂಕ ೧೮ ಕಿಲೋ. ಹಾಗಾಗಿ ಒಂದು ಹುಲಿಯನ್ನು ಕೊಂದರೆ ೪೨,೦೦೦ ರೂಪಾಯಿ ಸಂಪಾದನೆ! ಅದರ ಚರ್‍ಮಕ್ಕೆ ೨ ಲಕ್ಷಕ್ಕೂ ಮೀರಿ ಬೆಲೆಯಿದೆ. ಹೀಗಾಗಿ ಒಂದು ಸತ್ತ ಹುಲಿಯಿಂದ ಒಟ್ಟು ಸುಮಾರು ೩ ಲಕ್ಷ ರೂಪಾಯಿ ಆದಾಯವಿದೆ.

ಹೀಗೆಯೇ ಈ ಬೇಟೆಯು ಮುಂದುವರಿದರೆ ನಾಳಿನ ಜನಾಂಗ ಹುಲಿಗಳನ್ನು ಕೇವಲ ಕಥೆಗಳಲ್ಲಿ ಅಥವಾ ಚಿತ್ರಗಳಲ್ಲಿ ಕಾಣಬೇಕಾಗುತ್ತದೆ. ರಾಷ್ಟ್ರೀಯ ಪ್ರಾಣಿ ಹುಲಿಯನ್ನು ರಕ್ಷಿಸುವುದು ಇಂದು ಅಗತ್ಯವಾಗಿದೆ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...