ಎರಡು ಹಕ್ಕಿಗಳ ವಾದ

ಒಂದು ಸುಂದರ ಸರೋವರ. ಅದರ ಸನಿಹದಲ್ಲಿ ಹಸಿರು ಸೊಂಪಿನಿಂದ ಕಂಗೊಳಿಸುವ ಒಂದು ದೊಡ್ಡ ಮರ. ಅದರಲ್ಲಿ ಇದ್ದ ಎರಡು ಹಕ್ಕಿಗಳಲ್ಲಿ ವಿವಾದ ಬಂದಿತು. ಒಂದು ಹಕ್ಕಿ ಹೇಳಿತು- “ಪ್ರಾರ್ಥನೆಯೇ ಶ್ರೇಷ್ಠವಾದುದು” ಎಂದು. ಇನ್ನೊಂದು ಹಕ್ಕಿ ಹೇಳಿತು “ಧ್ಯಾನವೇ ಪರಮ ಶ್ರೇಷ್ಠವಾದುದು” ಎಂದಿತು. ಎರಡೂ ವಿವಾದ ಮಾಡಿ ಕೊನೆಗೆ ಸರೋವರದಲ್ಲಿ ಅರಳಿದ ಕಮಲದ ಬಳಿ ಬಂದು ಕೇಳಿದವು.

ಕಮಲ ಹೇಳಿತು- “ನಾನು ಮೊಗ್ಗಾಗಿ ಇರುವಾಗ ದಳಗಳನ್ನು ಜೋಡಿಸಿ ಪ್ರಾರ್ಥಿಸುವೆ. ನಾನು ಅರಳಿ ಧ್ಯಾನಸ್ತವಾದಾಗ ನನಗೆ ಸೂರ್ಯನ ಸತ್ಯ ದರ್ಶನ ವಾಗುವುದು. ಪ್ರಾರ್ಥನೆ, ಧ್ಯಾನ ಇವೆರಡರಿಂದ ನಾನು ಪೂರ್ಣತೆ ಪಡೆದಿರುವೆ” ಎಂದಿತು. ಹಕ್ಕಿಗಳು ವಿವಾದ ನಿಲ್ಲಿಸಿ ಅರಿವು ಪಡೆದು ಹಾರಿ ಹೋದವು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಳಿಗೆಬಟ್ಟಲ ತಿರುವುಗಳಲ್ಲಿ – ೭೮
Next post ಫಂಟರ್‌

ಸಣ್ಣ ಕತೆ

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…