ಎರಡು ಹಕ್ಕಿಗಳ ವಾದ

ಒಂದು ಸುಂದರ ಸರೋವರ. ಅದರ ಸನಿಹದಲ್ಲಿ ಹಸಿರು ಸೊಂಪಿನಿಂದ ಕಂಗೊಳಿಸುವ ಒಂದು ದೊಡ್ಡ ಮರ. ಅದರಲ್ಲಿ ಇದ್ದ ಎರಡು ಹಕ್ಕಿಗಳಲ್ಲಿ ವಿವಾದ ಬಂದಿತು. ಒಂದು ಹಕ್ಕಿ ಹೇಳಿತು- “ಪ್ರಾರ್ಥನೆಯೇ ಶ್ರೇಷ್ಠವಾದುದು” ಎಂದು. ಇನ್ನೊಂದು ಹಕ್ಕಿ ಹೇಳಿತು “ಧ್ಯಾನವೇ ಪರಮ ಶ್ರೇಷ್ಠವಾದುದು” ಎಂದಿತು. ಎರಡೂ ವಿವಾದ ಮಾಡಿ ಕೊನೆಗೆ ಸರೋವರದಲ್ಲಿ ಅರಳಿದ ಕಮಲದ ಬಳಿ ಬಂದು ಕೇಳಿದವು.

ಕಮಲ ಹೇಳಿತು- “ನಾನು ಮೊಗ್ಗಾಗಿ ಇರುವಾಗ ದಳಗಳನ್ನು ಜೋಡಿಸಿ ಪ್ರಾರ್ಥಿಸುವೆ. ನಾನು ಅರಳಿ ಧ್ಯಾನಸ್ತವಾದಾಗ ನನಗೆ ಸೂರ್ಯನ ಸತ್ಯ ದರ್ಶನ ವಾಗುವುದು. ಪ್ರಾರ್ಥನೆ, ಧ್ಯಾನ ಇವೆರಡರಿಂದ ನಾನು ಪೂರ್ಣತೆ ಪಡೆದಿರುವೆ” ಎಂದಿತು. ಹಕ್ಕಿಗಳು ವಿವಾದ ನಿಲ್ಲಿಸಿ ಅರಿವು ಪಡೆದು ಹಾರಿ ಹೋದವು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಳಿಗೆಬಟ್ಟಲ ತಿರುವುಗಳಲ್ಲಿ – ೭೮
Next post ಫಂಟರ್‌

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

cheap jordans|wholesale air max|wholesale jordans|wholesale jewelry|wholesale jerseys