Home / ಕವನ / ಕವಿತೆ / ದುಃಖದಲಾವಿ ಐಸುರ

ದುಃಖದಲಾವಿ ಐಸುರ

ದುಃಖದಲಾವಿ ಏ ಐಸುರ ಪೇಳುವ ಸುದ್ಧಿ
ಮಕ್ಕಾಮದೀನ ವಿಸ್ತಾರ || ಪ್ರ ||

ಲಕ್ಷವಿಟ್ಟು ಕಥಿಗಳ ಕೇಳರಿ ಸರ್ವರು
ಸಿಕ್ಕಾರ ಯಜೀದನ ಗಡಿಯಲ್ಲಿ ತಾವು ಹೋಗಿ
ಶೇಷಧರ ಗಿರಿಜೇಶ ನಿತ್ಯ ಪಾರೇಶಗೋಕುಲ ಹಾಸ್ಯ ಎನ್ನುತ ಜನ
ಭಾಷೆ ಬಲ್ಮೆ ಹಾಸ್ಯನರವರ ದಾಸರಲ್ಲವು ಕರುಣ ಶರಧಿ || ೧ ||

ಯಂಥಾ ಕೆಡಕ ಯಜೀದ
ಪಂಥಾ ಹ್ಯಾವ ಬಹಳ ಪಿತೂರಿ ನಡಸಿದ
ಅಂತರಂಗದಿ ಪತ್ರಬರೆದು ಬೇಗನೆ ಕಳಿಸಿ
ತಂತ್ರ ತಿಳಿಯದೆ ಜಲ್ಮ ಕೊಲಿಸ್ಯಾನೋ ಕ್ಷಣದಲ್ಲಿ
ರಂಗ ಮಾಣಿಕ ಹಾರ ಕೊರಳೊಳು
ಮಂಗಲಾತ್ಮಕ ಮಹಿಮ ತಿಳಿದು ಪೂರ
ಯಂಕಟ ರಿಗಮ ಗರಿ ಗರಿ
ಪಮ ಗರಿ ಗರಿ ರಿಗಮ ಪದಾ || ೨ ||

ಪಡಿದಾ ಶಿವ ಶಿವ ಎನ್ನುತ
ಒಡಿಯಸ್ವಾಮಿ ಮುನಿದಾನು ಶ್ರೀ ಗುರುನಾಥ
ಕಡಲಶಯನ ಕಾಲ ಸಾಂಬನೆ ಗತಿಯೆಂದು
ಬಿಡದೆಯೆಂದು ಮುಕ್ತಿ ಪಡೆದಾನು ಕರ್ಬಲದಿ
ಗೋಪುರ ಪಂಚಮ ಹರಿವರ
ದೀಪ ಸಂಪನ್ನ ತಾಳಿ ಉದರದಿ
ರೂಪ ಮೀರಿದ ಶಶಿಯು ದ್ರೌಪದಿ
ಆಳಿದವನು ಧರ್ಮನು || ೩ ||

ನೀಗಿತು ಮಾಯಾಮಥನ
ಮೋಸದಲಿ ಮೂಲಾತು ಕಬ೯ಲ ಸದನ
ತೂಗಿ ಹಾಡುವೆ ಗ್ರಾಮ ಶಿಶುನಾಳಧೀಶನ
ತೂಗಿ ಆಡು ಅಲಾವಿ ನೀನ || ೪ ||
*****

 

Tagged:

Leave a Reply

Your email address will not be published. Required fields are marked *

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...