ಮಳೆ ಮಳೆ ಮುದ್ದು ಮಳೆ
ನೀನು ಬಂದರಲ್ಲಾ ಕೊಳೆ
ಯಾಕೆ ಬರುವೆ ಇಲ್ಲಿಗೆ?
ಕೇಳಿತೊಂದು ಮಗುವು
ಸುರಿವ ವರ್ಷ ಧಾರೆಗೆ
ಮುದ್ದು ಮಗುವೇ, ಕೇಳು ಇಲ್ಲಿ
ನಾನು ಬರದೆ ಇದ್ದರಿಲ್ಲಿ
ಎಲ್ಲ ಬರಡು ಚಿಗುರು ಕೊರಡು
ಅಂತೆ ಹಾಗೆ ಬರುವೆ ನಾನು
ಹನಿಸಿ ನೀರ ಬರಿಸಿ ಚಿಗುರ
ತಣಿಸಿ ನಲಿವೆ ಭೂಮಿಯ
ತೃಪ್ತಿ ನಗೆಯ ನಕ್ಕ ಮಳೆ
ನೀಡಿತದಕೆ ಉತ್ತರ
ಮಳೆ ಮಳೆ ಮುದ್ದು ಮಳೆ
ವರ್ಷಕ್ಕೊಮ್ಮೆ ನಿನ್ನ ಕಳೆ
ಭೂಮಿಯಲ್ಲಾ ನೀರ ಹೊಳೆ
ಮತ್ತೆ ಪಯಣ ಎಲ್ಲಿಗೆ?
ಮುದ್ದು ಮಗುವೇ ಕೇಳು ಇಲ್ಲಿ
ಮಳೆಯ ಕಾಲ ನನ್ನ ಸರಸ
ತಂಪು ತಣಿವು ಭೂಮಿ ಹರುಷ
ಬಿಸಿಲ ಧಗೆ ನನ್ನ ಹಗೆಯು
ಮೋಡದೊಳಗೆ ನನ್ನ ಮನೆಯು
ಎಂದು ಮಳೆಯು ನಕ್ಕಿತು
ತುಂತುರಾಗಿ ಹಾರಿತು
*****
ಆಂಗ್ಲಭಾಷಾ ಉಪನ್ಯಾಸಕಿ
ಪ್ರಕಟಿತ ಕೃತಿಗಳು: ಏಣಿ ಮತ್ತು ಪದಗಳೊಂದಿಗೆ ನಾನು[ ಕವನ ಸಂಕಲನಗಳು,] ಪಾಶ್ಚಿಮಾತ್ಯ ಸಾಹಿತ್ಯ ಲೋಕ [ಅಂಕಣಬರಹ ಕೃತಿ]
ಪ್ರಶಸ್ತಿಗಳು: ಏಣಿ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ,
ಸಂಕ್ರಮಣ ಕಾವ್ಯ ಪ್ರಶಸ್ತಿ ೨೦೧೬, ರವಿಕಿರಣ ಸಾಹಿತ್ಯ ಪ್ರತಿಷ್ಠಾನ ಬೆಂಗಳೂರು ಪ್ರಥಮ ಕಥಾ ಬಹುಮಾನ ೨೦೧೮ , ತುಷಾರ ಮಾಸ ಪತ್ರಿಕೆಯ ಕ್ಯಾಲಿಫೋನರ್ಿಯಾ ಕಾವ್ಯಾಂಜಲಿ ತೃತೀಯ ಕಥಾ ಬಹುಮಾನ ೨೦೧೮ ಇತ್ಯಾದಿ ಬಹುಮಾನ ಬಂದಿದೆ.ಮೊಗವೀರ ಮಾಸಪತ್ರಿಕೆ ಮುಂಬಯಿ ೨೦೧೭ರ ಸಮಾಧಾನಕರ ಕಥಾ ಬಹುಮಾನ, ಕರಾವಳಿ ಮುಂಜಾವು ದಿನಪತ್ರಿಕೆಯ ದೀಪಾವಳಿ ಕಥಾ ಸ್ಪಧರ್ೆಗಳಲ್ಲಿ ಬಹುಮಾನ ಇತ್ಯಾದಿ ಬಂದಿರುತ್ತವೆ.