ತುತಂಖಮನ್

ಲಕ್ಸರಿನ ಬೀದಿಯಲ್ಲಿ
ಪೋಲೀಸರು ಒಬ್ಬ ಕಳ್ಳನನ್ನು
ಬಿಡದೇ ಮರ್ದಿಸುತ್ತಿದ್ದಾರೆ
ಅವನ ದವಡೆ ಒಡೆದು
ರಕ್ತ ನಿರಂತರ ಸೋರುತ್ತಿದೆ.

ಕೈರೊದ ಕ್ಲಬ್ಬಿನಲ್ಲಿ ಒಬ್ಬಾಕೆ
ಎಲ್ಲರನ್ನೂ ಕೇಳುತ್ತಿದ್ದಾಳೆ:
ಹಿಂದಾದುದನ್ನು ನಾನು ಕಂಡಿದ್ದೇನೆ
ಮುಂದಾಗುವುದು ನನಗೆ ಗೊತ್ತು-
ಹಾಗಂದರೇನು?

ಚರಿತ್ರೆಯ ಏಕಾಂತವನ್ನು ಮುರಿದವರು
ಮಾತಿಗೆ ಹೊಣೆಯಾಗುವರು
ಆದರೆ ಚರಿತ್ರೆ ಯಾರಿಗೂ ಹೊಣೆಯಲ್ಲ.

ಇಲ್ಲಿ ಹಿಂದೆ ಸೂರ್ಯನು
ದೇವರಾಗಿದ್ದ ಎಂದು ಹೇಳುತ್ತಾರೆ-
ಈ ಕಠಿಣ ಶಿಲೆಗಳಿಗೆ ಅಲ್ಲದಿದ್ದರೆ
ಇನ್ನೇನರ್ಥ- ?
ಆತನ ಚಿನ್ನದ ಕಣ್ಣುಗಳ ಮೇಲಿಂದ
ನೈಲ್ ನದಿಯ ನೆರೆ ನೀರು
ಅನೇಕ ಬಾರಿ
ಹರಿದು ಹೋಯಿತು.

ನಿಮಗೆ ಭೂತ ಪ್ರೇತಗಳಲ್ಲಿ
ಸದಾಚಾರದಲ್ಲಿ ಆತ್ಮದ
ಅಭಿಮಾನದಲ್ಲಿ ಪರಲೋಕದ
ನದೀತೀರಗಳಲ್ಲಿ ಹಾಗೂ
ಸತ್ತವರ ಶಾಪಗಳಲ್ಲಿ
ನಂಬಿಕೆಯಿಂದೆಯೇ?

ನಿಜ-
ವಿಷಯ ತುತಂಖಮನ್: ನಾನು ಮರೆತಿಲ್ಲ
ನನ್ನ ಮಾತುಗಳು ತಡವಿದರೆ
ಕ್ಷಮೆಯಿರಲಿ!
ನಿಮ್ಮ ಮುಖದಲ್ಲಿ ನನಗೆ
ನನ್ನ ಹಿಂದೆ ನಿಂತವರು
ಕಾಣಿಸುತ್ತಿದ್ದಾರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಳೆ ಮತ್ತು ಮಗು
Next post ವಿಷಯ

ಸಣ್ಣ ಕತೆ

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…