ತುತಂಖಮನ್

ಲಕ್ಸರಿನ ಬೀದಿಯಲ್ಲಿ
ಪೋಲೀಸರು ಒಬ್ಬ ಕಳ್ಳನನ್ನು
ಬಿಡದೇ ಮರ್ದಿಸುತ್ತಿದ್ದಾರೆ
ಅವನ ದವಡೆ ಒಡೆದು
ರಕ್ತ ನಿರಂತರ ಸೋರುತ್ತಿದೆ.

ಕೈರೊದ ಕ್ಲಬ್ಬಿನಲ್ಲಿ ಒಬ್ಬಾಕೆ
ಎಲ್ಲರನ್ನೂ ಕೇಳುತ್ತಿದ್ದಾಳೆ:
ಹಿಂದಾದುದನ್ನು ನಾನು ಕಂಡಿದ್ದೇನೆ
ಮುಂದಾಗುವುದು ನನಗೆ ಗೊತ್ತು-
ಹಾಗಂದರೇನು?

ಚರಿತ್ರೆಯ ಏಕಾಂತವನ್ನು ಮುರಿದವರು
ಮಾತಿಗೆ ಹೊಣೆಯಾಗುವರು
ಆದರೆ ಚರಿತ್ರೆ ಯಾರಿಗೂ ಹೊಣೆಯಲ್ಲ.

ಇಲ್ಲಿ ಹಿಂದೆ ಸೂರ್ಯನು
ದೇವರಾಗಿದ್ದ ಎಂದು ಹೇಳುತ್ತಾರೆ-
ಈ ಕಠಿಣ ಶಿಲೆಗಳಿಗೆ ಅಲ್ಲದಿದ್ದರೆ
ಇನ್ನೇನರ್ಥ- ?
ಆತನ ಚಿನ್ನದ ಕಣ್ಣುಗಳ ಮೇಲಿಂದ
ನೈಲ್ ನದಿಯ ನೆರೆ ನೀರು
ಅನೇಕ ಬಾರಿ
ಹರಿದು ಹೋಯಿತು.

ನಿಮಗೆ ಭೂತ ಪ್ರೇತಗಳಲ್ಲಿ
ಸದಾಚಾರದಲ್ಲಿ ಆತ್ಮದ
ಅಭಿಮಾನದಲ್ಲಿ ಪರಲೋಕದ
ನದೀತೀರಗಳಲ್ಲಿ ಹಾಗೂ
ಸತ್ತವರ ಶಾಪಗಳಲ್ಲಿ
ನಂಬಿಕೆಯಿಂದೆಯೇ?

ನಿಜ-
ವಿಷಯ ತುತಂಖಮನ್: ನಾನು ಮರೆತಿಲ್ಲ
ನನ್ನ ಮಾತುಗಳು ತಡವಿದರೆ
ಕ್ಷಮೆಯಿರಲಿ!
ನಿಮ್ಮ ಮುಖದಲ್ಲಿ ನನಗೆ
ನನ್ನ ಹಿಂದೆ ನಿಂತವರು
ಕಾಣಿಸುತ್ತಿದ್ದಾರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಳೆ ಮತ್ತು ಮಗು
Next post ವಿಷಯ

ಸಣ್ಣ ಕತೆ

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…