ತುತಂಖಮನ್

ಲಕ್ಸರಿನ ಬೀದಿಯಲ್ಲಿ
ಪೋಲೀಸರು ಒಬ್ಬ ಕಳ್ಳನನ್ನು
ಬಿಡದೇ ಮರ್ದಿಸುತ್ತಿದ್ದಾರೆ
ಅವನ ದವಡೆ ಒಡೆದು
ರಕ್ತ ನಿರಂತರ ಸೋರುತ್ತಿದೆ.

ಕೈರೊದ ಕ್ಲಬ್ಬಿನಲ್ಲಿ ಒಬ್ಬಾಕೆ
ಎಲ್ಲರನ್ನೂ ಕೇಳುತ್ತಿದ್ದಾಳೆ:
ಹಿಂದಾದುದನ್ನು ನಾನು ಕಂಡಿದ್ದೇನೆ
ಮುಂದಾಗುವುದು ನನಗೆ ಗೊತ್ತು-
ಹಾಗಂದರೇನು?

ಚರಿತ್ರೆಯ ಏಕಾಂತವನ್ನು ಮುರಿದವರು
ಮಾತಿಗೆ ಹೊಣೆಯಾಗುವರು
ಆದರೆ ಚರಿತ್ರೆ ಯಾರಿಗೂ ಹೊಣೆಯಲ್ಲ.

ಇಲ್ಲಿ ಹಿಂದೆ ಸೂರ್ಯನು
ದೇವರಾಗಿದ್ದ ಎಂದು ಹೇಳುತ್ತಾರೆ-
ಈ ಕಠಿಣ ಶಿಲೆಗಳಿಗೆ ಅಲ್ಲದಿದ್ದರೆ
ಇನ್ನೇನರ್ಥ- ?
ಆತನ ಚಿನ್ನದ ಕಣ್ಣುಗಳ ಮೇಲಿಂದ
ನೈಲ್ ನದಿಯ ನೆರೆ ನೀರು
ಅನೇಕ ಬಾರಿ
ಹರಿದು ಹೋಯಿತು.

ನಿಮಗೆ ಭೂತ ಪ್ರೇತಗಳಲ್ಲಿ
ಸದಾಚಾರದಲ್ಲಿ ಆತ್ಮದ
ಅಭಿಮಾನದಲ್ಲಿ ಪರಲೋಕದ
ನದೀತೀರಗಳಲ್ಲಿ ಹಾಗೂ
ಸತ್ತವರ ಶಾಪಗಳಲ್ಲಿ
ನಂಬಿಕೆಯಿಂದೆಯೇ?

ನಿಜ-
ವಿಷಯ ತುತಂಖಮನ್: ನಾನು ಮರೆತಿಲ್ಲ
ನನ್ನ ಮಾತುಗಳು ತಡವಿದರೆ
ಕ್ಷಮೆಯಿರಲಿ!
ನಿಮ್ಮ ಮುಖದಲ್ಲಿ ನನಗೆ
ನನ್ನ ಹಿಂದೆ ನಿಂತವರು
ಕಾಣಿಸುತ್ತಿದ್ದಾರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಳೆ ಮತ್ತು ಮಗು
Next post ವಿಷಯ

ಸಣ್ಣ ಕತೆ

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…