Home / ಕವನ / ಕವಿತೆ / ತುತಂಖಮನ್

ತುತಂಖಮನ್

ಲಕ್ಸರಿನ ಬೀದಿಯಲ್ಲಿ
ಪೋಲೀಸರು ಒಬ್ಬ ಕಳ್ಳನನ್ನು
ಬಿಡದೇ ಮರ್ದಿಸುತ್ತಿದ್ದಾರೆ
ಅವನ ದವಡೆ ಒಡೆದು
ರಕ್ತ ನಿರಂತರ ಸೋರುತ್ತಿದೆ.

ಕೈರೊದ ಕ್ಲಬ್ಬಿನಲ್ಲಿ ಒಬ್ಬಾಕೆ
ಎಲ್ಲರನ್ನೂ ಕೇಳುತ್ತಿದ್ದಾಳೆ:
ಹಿಂದಾದುದನ್ನು ನಾನು ಕಂಡಿದ್ದೇನೆ
ಮುಂದಾಗುವುದು ನನಗೆ ಗೊತ್ತು-
ಹಾಗಂದರೇನು?

ಚರಿತ್ರೆಯ ಏಕಾಂತವನ್ನು ಮುರಿದವರು
ಮಾತಿಗೆ ಹೊಣೆಯಾಗುವರು
ಆದರೆ ಚರಿತ್ರೆ ಯಾರಿಗೂ ಹೊಣೆಯಲ್ಲ.

ಇಲ್ಲಿ ಹಿಂದೆ ಸೂರ್ಯನು
ದೇವರಾಗಿದ್ದ ಎಂದು ಹೇಳುತ್ತಾರೆ-
ಈ ಕಠಿಣ ಶಿಲೆಗಳಿಗೆ ಅಲ್ಲದಿದ್ದರೆ
ಇನ್ನೇನರ್ಥ- ?
ಆತನ ಚಿನ್ನದ ಕಣ್ಣುಗಳ ಮೇಲಿಂದ
ನೈಲ್ ನದಿಯ ನೆರೆ ನೀರು
ಅನೇಕ ಬಾರಿ
ಹರಿದು ಹೋಯಿತು.

ನಿಮಗೆ ಭೂತ ಪ್ರೇತಗಳಲ್ಲಿ
ಸದಾಚಾರದಲ್ಲಿ ಆತ್ಮದ
ಅಭಿಮಾನದಲ್ಲಿ ಪರಲೋಕದ
ನದೀತೀರಗಳಲ್ಲಿ ಹಾಗೂ
ಸತ್ತವರ ಶಾಪಗಳಲ್ಲಿ
ನಂಬಿಕೆಯಿಂದೆಯೇ?

ನಿಜ-
ವಿಷಯ ತುತಂಖಮನ್: ನಾನು ಮರೆತಿಲ್ಲ
ನನ್ನ ಮಾತುಗಳು ತಡವಿದರೆ
ಕ್ಷಮೆಯಿರಲಿ!
ನಿಮ್ಮ ಮುಖದಲ್ಲಿ ನನಗೆ
ನನ್ನ ಹಿಂದೆ ನಿಂತವರು
ಕಾಣಿಸುತ್ತಿದ್ದಾರೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...