Home / ಕವನ / ಕವಿತೆ / ಕರ್ಪುರದಾರುತಿ ಬೆಳಗಿರೆ ಹರಗೆ

ಕರ್ಪುರದಾರುತಿ ಬೆಳಗಿರೆ ಹರಗೆ

ಕರ್ಪುರದಾತಿ ಬೆಳಗಿರೆರ ಹರಗೆ
ಕಾಮಿನಿಯಿರೆಲ್ಲಾ ಕರುಣಸಾಗರಗೆ || ಪ ||

ಅಪ್ಸರ ಸ್ತ್ರೀಯರು ಹರುಷಮನಸದಿ
ರೂಪ ಲಕ್ಷಣವಂತರೆಲ್ಲರು
ಮುಪ್ಪರ ಮನ ಮುಂದಿಟ್ಟು ಮಹಾಗುರು
ಸರ್ಪಭೂಷಣ ಸಾಂಬಗೆ || ಅ. ಪ. ||

ವಾರಿನೋಟದ ವನಜಾಕ್ಷಿಯರು
ಚಾರುತರದ ಚನ್ನಿಗ ಪ್ರಾಯದವರು
ತೋರುತಿರ್ಪ ಒಳ್‍ಕಮಲಗಂಧಿಯರು
ಸಾರಸಾಕ್ಷಿಯರು ಮದಗಜಗಮನಿಯರು
ನಾರಿಯರು ನಯನದಿಂದ ನಿರ್ಮಲಾಕಾರ
ಕಣ್ಮನ ದಣಿಯದೆ ನಿಜ ರಾಗದಲಿ
ಸರಿಗಮವ ಪಾಡುತ ಮಾರಮಹೇಶನಿಗೆ || ೦ ||

ಬಾಲಕೀರ ವಾಣಿಯರು ಭಕ್ತಿಯಲಿ
ನೀಳಕುಂತಳೆಯರು ನಿರುತದಲಿ
ವಾಲಿ ಬುಗುಡಿ ಬಾವುಲಿ ಕರ್ಣದಲಿ
ಮೇಲು ಮುತ್ತಿನ ಹಾರ ಕೊರಳಿನಲಿ
ಕೀಲಗಡಗವು ಹರಡಿ ಹಸ್ತದಿ
ಮೇಳೈಸಿ ಕೊಂಡಾರುತಿಯ ಪಿಡಿದು ಶುಭ
ಸಾಲ ದೀವಿಗಿ ಬೆಳಕಿನೊಳು
ಸುಶೀಲೆಯರು ಪ್ರಭುಲಿಂಗಗೆ || ೨ ||

ಚೆನ್ನಚಲುವ ಚಿತ್ರದ ಗೊಬೆಯ ತೆರದಿ
ಕನ್ನೆಯರು ಕೂಡಿ ವತ್ತರದಿ
ರನ್ನ ಕಲಶಗಿಂಡಿಗಳ ವಿಸ್ತರದಿ
ಹೊನ್ನು ತಳಗಿಗಳ ಪಿಡಿದೆತ್ತಿ ಕರದಿ
ಎನ್ನೊಡೆಯ ಶಿಶುನಾಳಕೊಪ್ಪುವ
ಶೂನ್ಯ ಸಿಂಹಾಸನದಿ ಸದ್ಗುರು
ಸನ್ನಿಧಾನಕೆ ಬಂದು ಸಖಿಯರು
ಓಂ ನಮಃ ಶಿವ ಎನ್ನುತಲಿ || ೩ ||
*****

 

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...