ಮುಖವಾಡ

ನಾವೇಕೆ ಹೀಗೆ ಮುಖವಾಡಧಾರಿಗಳು
ಎದುರಿನಲ್ಲಿ ಹೊಗಳಿಕೆ-ಹೊನ್ನಶೂಲದ ತಿಮಿತ
ಹಿಂದೆ-ವ್ಯಂಗ್ಯಕಟಕಿ ಕುಹಕ
ಪವಿತ್ರ ಸ್ನೇಹಕ್ಕೆ ಕೊರತೆಯೇ?

ನಮ್ಮ ನಗುವೇಕೆ ಹೀಗೆ?
ತುಟಿ ತೆರೆದು, ಹಲ್ಲು ತೋರಿಸಿ ವಕ್ರ
ನಗೆ ಬಿರಿದು, ಸ್ನೇಹಸ್ಮಿತವಲ್ಲ ಅದು
ಅಣಕು ನಗುವೇ?

ನಮ್ಮ ಮನಸ್ಸೇಕೆ ಹೀಗೆ?
ಪಾಚಿಗಟ್ಟಿದ ಹೊಲಸು ನೀರಿನ ಹಾಗೆ
ರೊಚ್ಚೆ ತುಂಬಿದ ಕೊಚ್ಚೆಯ ಹಾಗೆ
ದ್ವೇಷದಿಂದ ಮೆರೆಯುತ್ತ
ಪ್ರೀತಿ, ಅಭಿಮಾನ ಕೊಲ್ಲುತ್ತ
ನೆರೆಹೊರೆಗೆ ಸಹಕರಿಸದೆ
ಬದುಕು ಸವೆಸುತ್ತಾ
ಸದ್ಭಾವನೆಯ ಕೊರತೆಯೇ?

ನಾವೇಕೆ ಹೀಗೆ ಪರಿಚತರಾದರೂ
ಪರಸ್ಪರ ಅಪರಿಚಿತರಂತೆ?
ಸಂಬಂಧಗಳನ್ನೇ ಮರೆತವರಂತೆ
ಕಟ್ಟಿಕೊಳ್ಳುತ್ತಿದ್ದೇವೆ ಕೋಟೆ
ಸುತ್ತಲೂ ಜೇಡನಂತೆ
ಸಾಮರಸ್ಯದ ಕೊರತೆಯೇ?

ಆಗಬಾರದೇ ನಾವೆಲ್ಲ
ನಮ್ಮ ಪೂರ್ವಿಕರಂತೆ
ಆದರ್ಶಗಳ ಪಾಲಕರಂತೆ
ಅತಿಥಿಗಳ ಪೂಜಿಸಿ,
ಸ್ನೇಹಿತರ ಆಧರಿಸಿ
ದೀನರಿಗೆ ಬೆಂಬಲಿಸಿ
ಎಲ್ಲರೊಳಗೊಂದಾಗಿ-ಮುಖವಾಡ ಸರಿಸಿ
ನಿಜವಾದ ಮನುಜರಂತೆ

*****

Previous post ಯಾಕೆ ಬರಲಿಲ್ಲ?
Next post ಮರಗಳು

ಸಣ್ಣ ಕತೆ

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…