ಮುಖವಾಡ

ನಾವೇಕೆ ಹೀಗೆ ಮುಖವಾಡಧಾರಿಗಳು
ಎದುರಿನಲ್ಲಿ ಹೊಗಳಿಕೆ-ಹೊನ್ನಶೂಲದ ತಿಮಿತ
ಹಿಂದೆ-ವ್ಯಂಗ್ಯಕಟಕಿ ಕುಹಕ
ಪವಿತ್ರ ಸ್ನೇಹಕ್ಕೆ ಕೊರತೆಯೇ?

ನಮ್ಮ ನಗುವೇಕೆ ಹೀಗೆ?
ತುಟಿ ತೆರೆದು, ಹಲ್ಲು ತೋರಿಸಿ ವಕ್ರ
ನಗೆ ಬಿರಿದು, ಸ್ನೇಹಸ್ಮಿತವಲ್ಲ ಅದು
ಅಣಕು ನಗುವೇ?

ನಮ್ಮ ಮನಸ್ಸೇಕೆ ಹೀಗೆ?
ಪಾಚಿಗಟ್ಟಿದ ಹೊಲಸು ನೀರಿನ ಹಾಗೆ
ರೊಚ್ಚೆ ತುಂಬಿದ ಕೊಚ್ಚೆಯ ಹಾಗೆ
ದ್ವೇಷದಿಂದ ಮೆರೆಯುತ್ತ
ಪ್ರೀತಿ, ಅಭಿಮಾನ ಕೊಲ್ಲುತ್ತ
ನೆರೆಹೊರೆಗೆ ಸಹಕರಿಸದೆ
ಬದುಕು ಸವೆಸುತ್ತಾ
ಸದ್ಭಾವನೆಯ ಕೊರತೆಯೇ?

ನಾವೇಕೆ ಹೀಗೆ ಪರಿಚತರಾದರೂ
ಪರಸ್ಪರ ಅಪರಿಚಿತರಂತೆ?
ಸಂಬಂಧಗಳನ್ನೇ ಮರೆತವರಂತೆ
ಕಟ್ಟಿಕೊಳ್ಳುತ್ತಿದ್ದೇವೆ ಕೋಟೆ
ಸುತ್ತಲೂ ಜೇಡನಂತೆ
ಸಾಮರಸ್ಯದ ಕೊರತೆಯೇ?

ಆಗಬಾರದೇ ನಾವೆಲ್ಲ
ನಮ್ಮ ಪೂರ್ವಿಕರಂತೆ
ಆದರ್ಶಗಳ ಪಾಲಕರಂತೆ
ಅತಿಥಿಗಳ ಪೂಜಿಸಿ,
ಸ್ನೇಹಿತರ ಆಧರಿಸಿ
ದೀನರಿಗೆ ಬೆಂಬಲಿಸಿ
ಎಲ್ಲರೊಳಗೊಂದಾಗಿ-ಮುಖವಾಡ ಸರಿಸಿ
ನಿಜವಾದ ಮನುಜರಂತೆ

*****

Previous post ಯಾಕೆ ಬರಲಿಲ್ಲ?
Next post ಮರಗಳು

ಸಣ್ಣ ಕತೆ

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…