ಪ್ರತೀಕ್ಷೆ

ಅವೊತ್ತು ಆಗಸದ ತುಂಬ
ಮೋಡಗಳು ನೇತಾಡುತ್ತಿದ್ದವು.
ಕಪ್ಪು ಹೊದ್ದು ಮಲಗಿದ್ದ ರಸ್ತೆಗಳಷ್ಟೇ
ಕೈ ಬೀಸುತ್ತಿದ್ದವು.
ನಿನ್ನ ಹೆಜ್ಜೆ ಹಾರಿಸಿದ ಧೂಳೊಂದಿಗೆ
ಮಸುಕಾಗಿ ಮರೆಯಾದ ಬೆನ್ನ
ಕಣ್ತುಂಬಿಕೊಂಡು ನಿಂತಿದ್ದೆ,
ಮಾತು ಮರೆತವಳಂತೆ.

ಇವೊತ್ತು ಮೈ ತುಂಬ ಕಣ್ಣುಕಿವಿ
ಬರೆದುಕೊಂಡು ನಿಂತಿದ್ದೇನೆ,
ಬೀಸಿ ಕರೆಯಬಹುದಾಗಿದ್ದ ಕೈಗಳಿಂದ
ನೆನಪ ತಬ್ಬುತ್ತಿರುವ ಹುತ್ತ
ಕೆಡುವುತ್ತಾ ಕಾದಿದ್ದೇನೆ.
ಮರೆತ ಮಾತ ದಿಕ್ಕು ದಿಕ್ಕಿಗೆ ತೂರುತ್ತಾ
ಇನ್ನೂ… ಕಾಯಲೆ ಸಖ?

ಮತ್ತೆ ನೀ ಮರಳಿ ಬಂದೆಯಾದರೆ
ನೆನಪಿನ ಬಳ್ಳಿಗಳು ಜಗ್ಗಿ
ನಿನ್ನನ್ನು ಬಂಧಿಸಲಿ.
ಮಣ್ಣೊಳಗೆ ಮಣ್ಣಾದ ಕಣ್ಣ ಕೊನೆಗಳು
ಸ್ವಾಗತಿಸಲಿ, ಕಿವಿಗಳು ಆಲಿಸಲಿ.
ತುಟಿಗಳು ಬಿಚ್ಚಿ ಮಾತನಾಡಲಿ.
ಹೃದಯ ಸಂತೈಸಲಿ.


Previous post ರಾಮಾಯಣ ಮಹಾಭಾರತ
Next post ಪರಂಪರೆ

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

cheap jordans|wholesale air max|wholesale jordans|wholesale jewelry|wholesale jerseys