ಪ್ರತೀಕ್ಷೆ

ಅವೊತ್ತು ಆಗಸದ ತುಂಬ
ಮೋಡಗಳು ನೇತಾಡುತ್ತಿದ್ದವು.
ಕಪ್ಪು ಹೊದ್ದು ಮಲಗಿದ್ದ ರಸ್ತೆಗಳಷ್ಟೇ
ಕೈ ಬೀಸುತ್ತಿದ್ದವು.
ನಿನ್ನ ಹೆಜ್ಜೆ ಹಾರಿಸಿದ ಧೂಳೊಂದಿಗೆ
ಮಸುಕಾಗಿ ಮರೆಯಾದ ಬೆನ್ನ
ಕಣ್ತುಂಬಿಕೊಂಡು ನಿಂತಿದ್ದೆ,
ಮಾತು ಮರೆತವಳಂತೆ.

ಇವೊತ್ತು ಮೈ ತುಂಬ ಕಣ್ಣುಕಿವಿ
ಬರೆದುಕೊಂಡು ನಿಂತಿದ್ದೇನೆ,
ಬೀಸಿ ಕರೆಯಬಹುದಾಗಿದ್ದ ಕೈಗಳಿಂದ
ನೆನಪ ತಬ್ಬುತ್ತಿರುವ ಹುತ್ತ
ಕೆಡುವುತ್ತಾ ಕಾದಿದ್ದೇನೆ.
ಮರೆತ ಮಾತ ದಿಕ್ಕು ದಿಕ್ಕಿಗೆ ತೂರುತ್ತಾ
ಇನ್ನೂ… ಕಾಯಲೆ ಸಖ?

ಮತ್ತೆ ನೀ ಮರಳಿ ಬಂದೆಯಾದರೆ
ನೆನಪಿನ ಬಳ್ಳಿಗಳು ಜಗ್ಗಿ
ನಿನ್ನನ್ನು ಬಂಧಿಸಲಿ.
ಮಣ್ಣೊಳಗೆ ಮಣ್ಣಾದ ಕಣ್ಣ ಕೊನೆಗಳು
ಸ್ವಾಗತಿಸಲಿ, ಕಿವಿಗಳು ಆಲಿಸಲಿ.
ತುಟಿಗಳು ಬಿಚ್ಚಿ ಮಾತನಾಡಲಿ.
ಹೃದಯ ಸಂತೈಸಲಿ.


Previous post ರಾಮಾಯಣ ಮಹಾಭಾರತ
Next post ಪರಂಪರೆ

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…