ಬಸವಣ್ಣ

ಹೃದಯ ಕಾಡಿನಲಿಹ ಹುಲಿಯ ನಾಡಿ ಮಿಡಿಸುತಲಿ
ಅಂತರಂಗದ ವೀಣೆ ನುಡಿಸ ಬಾ ಬಸವಣ್ಣ
ಕಾಡು ಈ ದೇಹದಲಿ ನಾಡ ಮೂಡಿಸುತ ತೀಡುತಲಿ
ಬೀಡು ಮಾಡ ಬಾ ಬೇಗ ಓ ನಮ್ಮೆಲ್ಲರಣ್ಣ !

ಹುಲಿತನದ ಛಲವಿದ್ದು ಇಲಿಯಾಗಿ ಇದ್ದಿಹೆವು
ಭಯದಿ ಮರೆತಿಹೆವು ನೈಜ ತೇಜವನ್ನು
ಮಿನುಗು ಮೆರಗಿನ ವರ್ಣ ವೈಚಿತ್ರ್ಯ ಮಾಯಪಾಶವು
ಗುಡುಗಿ ಘರ್ಜಿಸುತಿದೆ; ಬದುಕಲಾರೆವಿನ್ನು

ನಿನ್ನ ಸಾತ್ವಿಕತೆಯ ಓಜಸ್ಸು ಹೊಮ್ಮಿ ತೇಜಸ್ಸು ಮೂಡಿ
ಮುಗಿಲಿನಾಚೆಯ ರವಿಯು ಮುಂದಾದನು
ಹಿಂದೊಮ್ಮೆ ನಿನ್ನ ವಚನ ವೃಷ್ಟಿ ನಮ್ಮೊಡಲ ಕೂಡಿ
ಓಡಿಸಿತು ಕವಿದ ಕಾರ್ಮೋಡಗಳನು

ದಿವ್ಯ ಜ್ಯೋತಿಯ ಹೊಲವು ಶರಣ ಛಲವು
ಸತ್ವ ಸಾತ್ವಿಕತೆಯ ನಾಂದಿ ಬಲದ ಮಂದಿರ ಭೇರಿ
ಮುಗಿಲು ಇಲ್ಲದ ಗಗನ ತಿಂಗಳನ ಇರವು
ಮಾಯೆ ಹೊದ್ದದ ಮನವು ವಿಶ್ವಾತ್ಮಿ ಪರಮಾತ್ಮನಕೇರಿ

ಶರಣ ಚರಣದ ವರ್ಣ ಬಸವಣ್ಣ ಹೇಳಿ
ಭವವೇಶ ಪಾಶವನು ನಾಶಮಾಡೆಮ್ಮ ತಂದನಿಲ್ಲಿ
ಸವಿ ತಿರುಳ ವಿಷ ಒಡಲ ವೈಚಿತ್ರ ಹೇಳಿ
ನೈಜ ಜ್ಯೋತಿಯನಿತ್ತು ಬಾ ಇತ್ತ ಎಂದು ಕರೆದನಲ್ಲಿ

ಕಿರಿ ಹೃದಯ ಕಲ್ಮಿಷ ಘೋರ ಗವಿಯಲಿ
ನುಸುಳಿ ಬಂದೆಮ್ಮ ಕಿವಿಯೊಳುಸುರಿದ ವಚನವ
ಬಲ ಬಂಧನ ವ್ಯೂಹ ಝಾಡ್ಯದಲಿ
ಮೌಢ್ಯತೆಯ ಮುರಿದೊತ್ತಿ ಎತ್ತುವನೆನ್ನ ಬಸವ

ಹಗಲು ಶಖೆಯಾಗಿ ಇರುಳು ಭಯವಾಗಿ
ಮಾಗದಾ ಘಾಯ ಮಾಡಿಹುದು ಕಾಯಕಾಮಾಯ
ಮದ್ದು ಇನ್ನೆಲ್ಲಿ ? ಓ ಕಾಣದಾ ಯೋಗಿ
ಇಹುದು ಬಾರಲ್ಲಿ; ಬಸವ ನುಡಿಯಲ್ಲಿ ನೈಜ ಧೈಯ !

ಚುಕ್ಕೆ ಲತೆಯಾಗಿ, ರವಿಯ ಫಲವಾಗಿ
ಹೂವು ಚಂದಿರನಾಗಿ, ನೆಲನೀರು ಶಾಮ ಮುಗಿಲಾಗಿ
ಮಿನುಗು ಮರುಗು ಜೀವನವು ಮಿಂಚಾಗಿ
ಹೊಂಚಿ ಸಿಡಿಲನು ಹೊಡೆಯುವದದೋ ಮಾಯ ಕೂಗಿ

ರೇಗಿ ಎದ್ದಿಹ ರುಚಿಗೆ ನೀಗಿ ಬಿದ್ದಿದೆ ಶಕ್ತಿ
ಬಲವಾಗು ಬಾ ಮೊದಲು ಹೃದಯ ಹದವಾಗಿ ಮಾಡು
ಜನ್ಮ ಸಾರ್ಥಕತೆಯ ನೈಜ ಮುಕ್ತಿ
ಆ ಮಾರ್ಗ ಬಸವಣ್ಣ ನುಡಿದ ವಚನ ನೋಡು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚುನಾವಣೆ
Next post ಬಿರಿಯಾನಿ

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

cheap jordans|wholesale air max|wholesale jordans|wholesale jewelry|wholesale jerseys