ಎಲ್ಲಾ ಜಾತಿಯವರೂ ಸಲೀಸಾಗಿ
ಕೋಳಿ ತಿನ್ನೋಕೆ ಶುರು ಮಾಡಿದ್ದು ನೋಡಿ,
ಅರ್ಜೆಂಟಾಗಿ ಆಂಟಿ ಬಿರಿಯಾನಿ ಕಾನ್ಫರೆನ್ಸ್ ಕರೆದು, ಹೀಗೆ
ಆದರೆ ಒಂದಲ್ಲ ಒಂದು ದಿನ ಕೂಗೋದಕ್ಕೆ ಕೋಳಿ ಇಲ್ದೇ
ಬೆಳಗೇ ಆಗದೆ ಜಗತ್ತನ್ನು ಕತ್ತಲೆ ಆವರಿಸಬಹುದೂಂತ ನಿರ್ಣಯ
ಮಾಡಿ
ಕೋಳಿಗಳು ಮನುಷ್ಯರಿಗೆ ಎಚ್ಚರಿಕೆ ನೀಡಿದವಂತೆ. ಆದರೆ
ನಿಷೇದಾಜ್ಞೆ ಉಲ್ಲಂಘಿಸಿ ಕಾನ್ಪರೆನ್ಸ್ ಮಾಡಿದ ಕೋಳಿಗಳ ಮೇಲೆ
ಏಕ್ದಂ ದಾಳೀ ಮಾಡಿದ ಪೋಲಿಸ್ನೋರು
ಲಾಠಿಚಾರ್ಜು ಮಾಡಿ ಎಲ್ಲ ಕೋಳೀನು ಸಾಯಿಸಿ
ಬಿರಿಯಾನಿ ಮಾಡಿ, ಕುಡಿದು ತಿಂದು ತೇಗಿ ಬೆಳಗಾದರೆಷ್ಟು ಬಿಟ್ಟರೆಷ್ಟು
ಹೋಗ್ರೋ ನನ್ಮಕ್ಳಾಂತ ಹೋಗಿ ಗಡದ್ದು ನಿದ್ದೆ ಹೊಡೆದ್ರಂತೆ.
*****
Related Post
ಸಣ್ಣ ಕತೆ
-
ಬಲಿ
ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…
-
ಬಿರುಕು
ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್ತಿ ಬೆಚ್ಚಿ… Read more…
-
ಹನುಮಂತನ ಕಥೆ
ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…
-
ನಾಗನ ವರಿಸಿದ ಬಿಂಬಾಲಿ…
ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…
-
ಪ್ರಕೃತಿಬಲ
ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…