ಬಿಳಿಯ ಗೋಡೆಯಲಿ

ಬಿಳಿಯ ಗೋಡೆಯಲಿ ಬರೆದ ಅಕ್ಷರಗಳು
ಮಾಯುವುದಿಲ್ಲ ಬೇಗನೆ
ದಾರಿಯಲಿ ನಡೆವವರನ್ನು ನೋಡುತ್ತ
ಕುಳಿತುಕೊಳ್ಳುತ್ತವೆ ಸುಮ್ಮನೆ
ಒಬ್ಬೊಬ್ಬರಿಗೆ ಒಂದೊಂದು ರೀತಿ
ಅರ್ಥವಾಗುತ್ತ ಹೊಗುತ್ತವೆ
ಅರ್ಥವಾಗದಿದ್ದಾಗ ಪ್ರಶ್ನೆಗಳ ರೂಪದಲಿ
ಬಹುಕಾಲ ಕಾಡುತ್ತವೆ
ಕಾಲ ಸರಿದಂತೆ ಮಹಾಪ್ರಾಣಗಳು
ಪ್ರಾಣವನ್ನೆ ಕಳೆದುಕೊಳ್ಳುತ್ತವೆ
ಎಲ್ಲ ಅಕ್ಷರಗಳೂ ಕಾಗುಣಿತ ತಪ್ಪಿ
ಮಾಯವಾಗುತ್ತವೆ

ಎಲ್ಲಿ ಹೋದುವು ಅವು? ಗೋಡೆಯೊಳಗೆ
ಸೇರಿದುವೆ? ಮಳೆಗೆ ಕೊಚ್ಚಿದುವೆ ?
ನೋಡಿದವರ ಮನವ ಹೊಕ್ಕು ಹೊರ
ಬರದೆ ಉಳಿದುವೆ? ಕವಿಯೊಬ್ಬನು
ಈ ದಾರಿ ಬಂದವನು ಹೆಕ್ಕಿಕೊಂಡನೆ
ಒಂದೊಂದಾಗಿ ಬಿದ್ದ ಹೂವುಗಳನ್ನು
ಹೆಕ್ಕಿಕೊಳ್ಳುವಂತೆ? ಯಾತಕ್ಕೆ?
ಏನ ಮಾಡಿದನು? ಏನ ಕೇಳಿದನು?
ಚೈನಾದ ಗೋಡೆಯೆ ಬೆಬಿಲೋನದ
ಗೋಡೆಯೆ ಕೆಂಪುಕೋಟೆಯ ಗೋಡೆಯೆ
ಪ್ಯಾಲೆಸ್ತಿನದ ಅಳುವ ಗೋಡೆಯೆ
ಅತ್ತರೆಷ್ಟು ಜನ ಇಲ್ಲಿ ಬ೦ದು
ಸತ್ತರಿನ್ನೆಷ್ಟು? ಕವಿಯೆ ಎಚ್ಚರಿಸು ಎಲ್ಲರನು
ಎಚ್ಚರಿಸು ಅವರ ಭಾಷೆಯನು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಳಕು
Next post ಪವಾಡ

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…