ಹಿಮ ಮಾನವ

ನೀರಿಲ್ಲ ನೆರಳಿಲ್ಲ
ಹೊರಗೆ ಕಾಲಿಡುವಂತಿಲ್ಲ
ಅಂಥ ಕಡು ಬೇಸಗೆಯಲ್ಲಿ
ಹಿಮಾಲಯದಿಂದೊಬ್ಬ ಹಿಮ ಮಾನವ
ಹೈದರಾಬಾದಿಗೆ ಬಂದು ಕುಳಿತನು
ಒಂದು ದೊಡ್ಡ ಬಂಡೆಯ ಮೇಲೆ

ಅದೇನು ವಿಚಿತ್ರ!
ತಣ್ಣಗಾಯಿತು ಹವೆ ಒಮ್ಮೆಲೆ
ಹುಲ್ಲು ಕಮರಿದಲ್ಲಿ
ನೆಲ ಬಿರಿದಲ್ಲಿ
ಎದ್ದವು ನೀರ ಬುಗ್ಗೆಗಳು
ತುಂಬಿತು ಕೆರೆ ಹಳ್ಳ
ಒದ್ದೆಯಾಯಿತು ರಸ್ತೆ

ಇನ್ನೇನು ಪರವಾಯಿಲ್ಲಿವೆಂದು
ಜನ ನಿಟ್ಟುಸಿರು ಬಿಟ್ಟರು

ಇತ್ತ ಹಿಮಮಾನವ ಮಾತ್ರ
ನೆಟ್ಟ ದೃಷ್ಟಿಯಲಿ ಕುಳಿತಿದ್ದವನು
ಕರಗುತ್ತಲೇ ಇದ್ದನು
ಮೊದಲವನ ಕೈಕಾಲುಗಳು ಕರಗಿದುವು
ಕಣ್ಣುಗಳು ಕರಗಿದುವು
ತಲೆ ಕರಗಿತು ಹೊಟ್ಟೆ ಕರಗಿತು

ಶಿಶ್ನ ಕರಗಿತು
ಕೊನೆಗುಳಿಯಿತೊಂದು ಬರ್ಫದ ತುಂಡು
ಆಮೇಲೆ ಅದೂ ಕರಗಿತು

ಬಂಡೆಯೊಂದೇ ಉಳಿದುದು
ಖೈರತಾಬಾದಿನಲಿ ಕರಗದೆ
ಇನ್ನೊಂದು ಬೇಸಿಗೆಗೆ
ಇನ್ನೊಬ್ಬ ಹಿಮಮಾನವನು
ಬರುವನೇ ಬಾರನೆ
ಕವಿಯೇ ಹೇಳು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಕ್ಕಳೆಂದರೆ
Next post ಸಂಚಕಾರ

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…