ಹಿಮ ಮಾನವ

ನೀರಿಲ್ಲ ನೆರಳಿಲ್ಲ
ಹೊರಗೆ ಕಾಲಿಡುವಂತಿಲ್ಲ
ಅಂಥ ಕಡು ಬೇಸಗೆಯಲ್ಲಿ
ಹಿಮಾಲಯದಿಂದೊಬ್ಬ ಹಿಮ ಮಾನವ
ಹೈದರಾಬಾದಿಗೆ ಬಂದು ಕುಳಿತನು
ಒಂದು ದೊಡ್ಡ ಬಂಡೆಯ ಮೇಲೆ

ಅದೇನು ವಿಚಿತ್ರ!
ತಣ್ಣಗಾಯಿತು ಹವೆ ಒಮ್ಮೆಲೆ
ಹುಲ್ಲು ಕಮರಿದಲ್ಲಿ
ನೆಲ ಬಿರಿದಲ್ಲಿ
ಎದ್ದವು ನೀರ ಬುಗ್ಗೆಗಳು
ತುಂಬಿತು ಕೆರೆ ಹಳ್ಳ
ಒದ್ದೆಯಾಯಿತು ರಸ್ತೆ

ಇನ್ನೇನು ಪರವಾಯಿಲ್ಲಿವೆಂದು
ಜನ ನಿಟ್ಟುಸಿರು ಬಿಟ್ಟರು

ಇತ್ತ ಹಿಮಮಾನವ ಮಾತ್ರ
ನೆಟ್ಟ ದೃಷ್ಟಿಯಲಿ ಕುಳಿತಿದ್ದವನು
ಕರಗುತ್ತಲೇ ಇದ್ದನು
ಮೊದಲವನ ಕೈಕಾಲುಗಳು ಕರಗಿದುವು
ಕಣ್ಣುಗಳು ಕರಗಿದುವು
ತಲೆ ಕರಗಿತು ಹೊಟ್ಟೆ ಕರಗಿತು

ಶಿಶ್ನ ಕರಗಿತು
ಕೊನೆಗುಳಿಯಿತೊಂದು ಬರ್ಫದ ತುಂಡು
ಆಮೇಲೆ ಅದೂ ಕರಗಿತು

ಬಂಡೆಯೊಂದೇ ಉಳಿದುದು
ಖೈರತಾಬಾದಿನಲಿ ಕರಗದೆ
ಇನ್ನೊಂದು ಬೇಸಿಗೆಗೆ
ಇನ್ನೊಬ್ಬ ಹಿಮಮಾನವನು
ಬರುವನೇ ಬಾರನೆ
ಕವಿಯೇ ಹೇಳು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಕ್ಕಳೆಂದರೆ
Next post ಸಂಚಕಾರ

ಸಣ್ಣ ಕತೆ

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

cheap jordans|wholesale air max|wholesale jordans|wholesale jewelry|wholesale jerseys