Home / ಕವನ / ಕವಿತೆ / ವೇಸ್ಟ್‌ ಬಾಡೀಸ್

ವೇಸ್ಟ್‌ ಬಾಡೀಸ್

ಇದ್ದರು ಒಂದೇ ಇಲ್ಲದಿದ್ದರು ಒಂದೇ||

ಮುದಿ ತಂದೆ-ತಾಯಿ ಏಳಲು ಬಾರದೆ
ಹಾಸಿಗೆ ಹಿಡಿದು ನರಳಾಡುತಿರಲು
ಬಂದು ನೋಡದೆ ತಂದು ಉಣಿಸದೆ
ದೂರವಾದ ಈ ಮಕ್ಕಳೆಲ್ಲರು || ಇದ್ದರು ||

ಮಕ್ಕಳಿಲ್ಲವೆಂದನೇಕ ದೇವರ
ಹರಕೆ ಹೊತ್ತು ಪಡೆದವರಿಗೆ ಉಣಿಸಿ
ಬೆಳೆಸಿ ದೊಡ್ಡವರ ಮಾಡಿ ಓದಿಸಿ
ಬಾಳಿಗೆ ಮಾರ್ಗವ ಹಿಡಿಸಿ ದುಡಿದವರ
ಕಾಲಲ್ಲಿ ಒದ್ದು ಬಯ್ಯುವ ಸಂತಾನ

ಓದಲು ಕಲಿಸಲು ದಾರಿಯು ತಪ್ಪಿ
ಅಡ್ಡದಾರಿಗಳ ಹಿಡಿದು ಓಡುವ
ಕಳ್ಳರ ಸುಳ್ಳರ ಪುಂಡುತನದಲಿ
ಮನೆಗೂ ಊರಿಗೂ ಭಾರವಾದವರು

ಬದುಕಿನ ಬಂಡಿಯನೆಳೆದೂ ಎಳೆದು
ಕೀಲು ಕೀಲುಗಳು ಕಿರ್‌ರೆನುತಿರಲು
ಮಾಸಿದ ಬಟ್ಟೆಯ ಮಾಸಿದ ಮುಖಗಳ
ಹೇವರಿಸುತ ಕಡೆಗಣ್ಣಲಿ ನೋಡುವವರು

ದೇವರು ಜಾತಿಗಳನ್ನವ ಹಾಕವು
ಜನತೆ ಬದುಕುವುದು ದುಡಿಮೆಯನ್ನದಲಿ
ಕೋಮುವಾದದಲಿ ಜನಗಳ ಛಿದ್ರಿಸಿ
ದೇಶ ದೇಶಗಳ ಬೆಂಕಿ ಹಚ್ಚುವಾ

ದೇಶ ದ್ರೋಹಿಗಳು ಜನರ ದ್ರೋಹಿಗಳು
ಕಣ್ಣಲಿ ಕುಣಿಯುವ ಕನಸುಗಳಾಸೆಗೆ
ಮಣ್ಣಿನ ಸಿರಿಯನು ಕಾಲಲಿ ತುಳಿಯುವ
ಬೇರನು ಮರತೇ ಚಿಗುರು ಹೂಗಳಿಗೆ
ಜೋತಾಡುವ ಈ ಜೋಲ್ಬಾವಲಿಗಳು

ಕಷ್ಟ ನಷ್ಟ ಬಾಳುವೆಯ ದೂರುವ
ಬಾಳ ಸಾಗರದ ಬುರುಗು ಜೀವಿಗಳು
ದುಡಿವ ಕೈಗಳನು ಮರೆತ ದರಿದ್ರರು
ತಗಣಿ ಸೊಳ್ಳೆಗಳು ಕಿಲುಬು ಹುಳುಗಳು

ಬಿಸಿಲಿಗೆ ಬಾಡುವ ಜಳಕ್ಕೆ ಮುರುಟುವ
ಚಳಿಗೆ ಸೆಟೆದು ನಿರ್ಜೀವವಾಗುವ
ಗುಡ್ಡವನೇರದೆ ಕೆಳಕ್ಕೆ ಜಾರುವ
ಮೈಗಳ್ಳರು ಈ ಹೇಡಿ ಜೀವಿಗಳು

ಏಣಿಯ ಸೇರುತ ಮೇಲಕ್ಕೆ ಹತ್ತಿ
ಏಣಿಯ ಕಾಲಲ್ಲಿ ಒದೆಯುವ ಖೂಳರು
ತಿಳಿವಿನ ಹೊಳೆಯಲಿ ಹೊಲಸು ರಾಡಿಯ
ಕಲೆಸಿ ಮಲೆತು ವಿಷ ಬೀಜವಾದವರು
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್