ವೇಸ್ಟ್‌ ಬಾಡೀಸ್

ಇದ್ದರು ಒಂದೇ ಇಲ್ಲದಿದ್ದರು ಒಂದೇ||

ಮುದಿ ತಂದೆ-ತಾಯಿ ಏಳಲು ಬಾರದೆ
ಹಾಸಿಗೆ ಹಿಡಿದು ನರಳಾಡುತಿರಲು
ಬಂದು ನೋಡದೆ ತಂದು ಉಣಿಸದೆ
ದೂರವಾದ ಈ ಮಕ್ಕಳೆಲ್ಲರು || ಇದ್ದರು ||

ಮಕ್ಕಳಿಲ್ಲವೆಂದನೇಕ ದೇವರ
ಹರಕೆ ಹೊತ್ತು ಪಡೆದವರಿಗೆ ಉಣಿಸಿ
ಬೆಳೆಸಿ ದೊಡ್ಡವರ ಮಾಡಿ ಓದಿಸಿ
ಬಾಳಿಗೆ ಮಾರ್ಗವ ಹಿಡಿಸಿ ದುಡಿದವರ
ಕಾಲಲ್ಲಿ ಒದ್ದು ಬಯ್ಯುವ ಸಂತಾನ

ಓದಲು ಕಲಿಸಲು ದಾರಿಯು ತಪ್ಪಿ
ಅಡ್ಡದಾರಿಗಳ ಹಿಡಿದು ಓಡುವ
ಕಳ್ಳರ ಸುಳ್ಳರ ಪುಂಡುತನದಲಿ
ಮನೆಗೂ ಊರಿಗೂ ಭಾರವಾದವರು

ಬದುಕಿನ ಬಂಡಿಯನೆಳೆದೂ ಎಳೆದು
ಕೀಲು ಕೀಲುಗಳು ಕಿರ್‌ರೆನುತಿರಲು
ಮಾಸಿದ ಬಟ್ಟೆಯ ಮಾಸಿದ ಮುಖಗಳ
ಹೇವರಿಸುತ ಕಡೆಗಣ್ಣಲಿ ನೋಡುವವರು

ದೇವರು ಜಾತಿಗಳನ್ನವ ಹಾಕವು
ಜನತೆ ಬದುಕುವುದು ದುಡಿಮೆಯನ್ನದಲಿ
ಕೋಮುವಾದದಲಿ ಜನಗಳ ಛಿದ್ರಿಸಿ
ದೇಶ ದೇಶಗಳ ಬೆಂಕಿ ಹಚ್ಚುವಾ

ದೇಶ ದ್ರೋಹಿಗಳು ಜನರ ದ್ರೋಹಿಗಳು
ಕಣ್ಣಲಿ ಕುಣಿಯುವ ಕನಸುಗಳಾಸೆಗೆ
ಮಣ್ಣಿನ ಸಿರಿಯನು ಕಾಲಲಿ ತುಳಿಯುವ
ಬೇರನು ಮರತೇ ಚಿಗುರು ಹೂಗಳಿಗೆ
ಜೋತಾಡುವ ಈ ಜೋಲ್ಬಾವಲಿಗಳು

ಕಷ್ಟ ನಷ್ಟ ಬಾಳುವೆಯ ದೂರುವ
ಬಾಳ ಸಾಗರದ ಬುರುಗು ಜೀವಿಗಳು
ದುಡಿವ ಕೈಗಳನು ಮರೆತ ದರಿದ್ರರು
ತಗಣಿ ಸೊಳ್ಳೆಗಳು ಕಿಲುಬು ಹುಳುಗಳು

ಬಿಸಿಲಿಗೆ ಬಾಡುವ ಜಳಕ್ಕೆ ಮುರುಟುವ
ಚಳಿಗೆ ಸೆಟೆದು ನಿರ್ಜೀವವಾಗುವ
ಗುಡ್ಡವನೇರದೆ ಕೆಳಕ್ಕೆ ಜಾರುವ
ಮೈಗಳ್ಳರು ಈ ಹೇಡಿ ಜೀವಿಗಳು

ಏಣಿಯ ಸೇರುತ ಮೇಲಕ್ಕೆ ಹತ್ತಿ
ಏಣಿಯ ಕಾಲಲ್ಲಿ ಒದೆಯುವ ಖೂಳರು
ತಿಳಿವಿನ ಹೊಳೆಯಲಿ ಹೊಲಸು ರಾಡಿಯ
ಕಲೆಸಿ ಮಲೆತು ವಿಷ ಬೀಜವಾದವರು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾವ
Next post ನಮ್ಮೂರ ಹುಡುಗ

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…