Home / ಕವನ / ಕವಿತೆ / ವೇಸ್ಟ್‌ ಬಾಡೀಸ್

ವೇಸ್ಟ್‌ ಬಾಡೀಸ್

ಇದ್ದರು ಒಂದೇ ಇಲ್ಲದಿದ್ದರು ಒಂದೇ||

ಮುದಿ ತಂದೆ-ತಾಯಿ ಏಳಲು ಬಾರದೆ
ಹಾಸಿಗೆ ಹಿಡಿದು ನರಳಾಡುತಿರಲು
ಬಂದು ನೋಡದೆ ತಂದು ಉಣಿಸದೆ
ದೂರವಾದ ಈ ಮಕ್ಕಳೆಲ್ಲರು || ಇದ್ದರು ||

ಮಕ್ಕಳಿಲ್ಲವೆಂದನೇಕ ದೇವರ
ಹರಕೆ ಹೊತ್ತು ಪಡೆದವರಿಗೆ ಉಣಿಸಿ
ಬೆಳೆಸಿ ದೊಡ್ಡವರ ಮಾಡಿ ಓದಿಸಿ
ಬಾಳಿಗೆ ಮಾರ್ಗವ ಹಿಡಿಸಿ ದುಡಿದವರ
ಕಾಲಲ್ಲಿ ಒದ್ದು ಬಯ್ಯುವ ಸಂತಾನ

ಓದಲು ಕಲಿಸಲು ದಾರಿಯು ತಪ್ಪಿ
ಅಡ್ಡದಾರಿಗಳ ಹಿಡಿದು ಓಡುವ
ಕಳ್ಳರ ಸುಳ್ಳರ ಪುಂಡುತನದಲಿ
ಮನೆಗೂ ಊರಿಗೂ ಭಾರವಾದವರು

ಬದುಕಿನ ಬಂಡಿಯನೆಳೆದೂ ಎಳೆದು
ಕೀಲು ಕೀಲುಗಳು ಕಿರ್‌ರೆನುತಿರಲು
ಮಾಸಿದ ಬಟ್ಟೆಯ ಮಾಸಿದ ಮುಖಗಳ
ಹೇವರಿಸುತ ಕಡೆಗಣ್ಣಲಿ ನೋಡುವವರು

ದೇವರು ಜಾತಿಗಳನ್ನವ ಹಾಕವು
ಜನತೆ ಬದುಕುವುದು ದುಡಿಮೆಯನ್ನದಲಿ
ಕೋಮುವಾದದಲಿ ಜನಗಳ ಛಿದ್ರಿಸಿ
ದೇಶ ದೇಶಗಳ ಬೆಂಕಿ ಹಚ್ಚುವಾ

ದೇಶ ದ್ರೋಹಿಗಳು ಜನರ ದ್ರೋಹಿಗಳು
ಕಣ್ಣಲಿ ಕುಣಿಯುವ ಕನಸುಗಳಾಸೆಗೆ
ಮಣ್ಣಿನ ಸಿರಿಯನು ಕಾಲಲಿ ತುಳಿಯುವ
ಬೇರನು ಮರತೇ ಚಿಗುರು ಹೂಗಳಿಗೆ
ಜೋತಾಡುವ ಈ ಜೋಲ್ಬಾವಲಿಗಳು

ಕಷ್ಟ ನಷ್ಟ ಬಾಳುವೆಯ ದೂರುವ
ಬಾಳ ಸಾಗರದ ಬುರುಗು ಜೀವಿಗಳು
ದುಡಿವ ಕೈಗಳನು ಮರೆತ ದರಿದ್ರರು
ತಗಣಿ ಸೊಳ್ಳೆಗಳು ಕಿಲುಬು ಹುಳುಗಳು

ಬಿಸಿಲಿಗೆ ಬಾಡುವ ಜಳಕ್ಕೆ ಮುರುಟುವ
ಚಳಿಗೆ ಸೆಟೆದು ನಿರ್ಜೀವವಾಗುವ
ಗುಡ್ಡವನೇರದೆ ಕೆಳಕ್ಕೆ ಜಾರುವ
ಮೈಗಳ್ಳರು ಈ ಹೇಡಿ ಜೀವಿಗಳು

ಏಣಿಯ ಸೇರುತ ಮೇಲಕ್ಕೆ ಹತ್ತಿ
ಏಣಿಯ ಕಾಲಲ್ಲಿ ಒದೆಯುವ ಖೂಳರು
ತಿಳಿವಿನ ಹೊಳೆಯಲಿ ಹೊಲಸು ರಾಡಿಯ
ಕಲೆಸಿ ಮಲೆತು ವಿಷ ಬೀಜವಾದವರು
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...