ಬಹುರೂಪಿ

“ಇವರು ಯಾರು” ಎಂದು ಗಾಂಧಿಯವರ ಕುರಿತು ಬಗೆವರೆ
ಅವರು ಒಬ್ಬರಲ್ಲ, ಹಲವು ರೂಪಿನವರು ಕಾಣರೇ ?

ರಾಟಿಕಾಮಧೇನುವಿರುವ ತವಸಿ ವರವಸಿಷ್ಠನು
ಕೋಟಿ ವಿಘ್ನಗಳಲಿ ಸತ್ಯಬಿಡದ ಹರಿಶ್ಚಂದ್ರನು ||
ಘೋರಸಾಸದಿಂದ ಸೃಷ್ಟಿ ಗೈದ ವಿಶ್ವಾಮಿತ್ರನು
ಘೋರಹಿಂಸೆ ಕರುಣೆಯಿಂದ ಮುರಿಯನಿಂತ ಬುದ್ಧನು ||
ದನುಜಬಲವ ದೈವಶಕ್ತಿಯಿಂದ ಮುರಿದಕೃಷ್ಣನು
ಮನುಜಕುಲವ ಪ್ರೇಮದಿಂದ ಗೆಲಲುನಿಂತ ಕ್ರಿಸ್ತನು ||
ತಂದೆಯಾಜ್ಞೆಯಂತೆ ಮನಸಿನೊಲವ ತೊರೆದ ರಾಮನು
ಒಂದುಘೋರ ಆಣೆಯಿಟ್ಟು ಕೊಂಡು ನಡೆದ ಭೀಷ್ಮನು ||
ದಿವ್ಯ ನೆರವಿನಿಂದ ಗುರಿಯ ಹೊಡೆವ ಇಂದ್ರತನುಜನು
ಭವ್ಯ ಕರ್ಮಯೋಗನಿರತ ದಿವ್ಯ ತೇಜ ಸೂರ್ಯನು ||
ಮರಣಹಿಂಸೆಯಲ್ಲು ಭಕ್ತಿ ಬಿಡದ ಪ್ರಹ್ಲಾದನು
ಪರಮಸೇವೆಗಸ್ಥಿ ಬಿಡುವ ಆ ದಧೀಚಿವರ್ಯನು ||
ನಲ್ಲೆಯಲ್ಲಿ ದೈವರೂಪಕಂಡ ರಾಮಕೃಷ್ಣನು
ಹೊಲೆಯರನ್ನು ಹರಿಯಜನರಗೈದ ಪುಣ್ಯವಂಶನು ||
ಬಗೆದರಷ್ಟು ಬಗೆಯಭಾವ ಬೆಳಗುವಾ ಮಹಾತ್ಮನು
ಜಗದಜನ್ಮ ಸುಟ್ಟ ಯುಗದ ಜೀವನಾ ದ್ವಿಜಾತ್ಮನು ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಮ್ಮ ಬಾಪೂ
Next post ಉಗುರು ೩

ಸಣ್ಣ ಕತೆ

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…