ಬಹುರೂಪಿ

“ಇವರು ಯಾರು” ಎಂದು ಗಾಂಧಿಯವರ ಕುರಿತು ಬಗೆವರೆ
ಅವರು ಒಬ್ಬರಲ್ಲ, ಹಲವು ರೂಪಿನವರು ಕಾಣರೇ ?

ರಾಟಿಕಾಮಧೇನುವಿರುವ ತವಸಿ ವರವಸಿಷ್ಠನು
ಕೋಟಿ ವಿಘ್ನಗಳಲಿ ಸತ್ಯಬಿಡದ ಹರಿಶ್ಚಂದ್ರನು ||
ಘೋರಸಾಸದಿಂದ ಸೃಷ್ಟಿ ಗೈದ ವಿಶ್ವಾಮಿತ್ರನು
ಘೋರಹಿಂಸೆ ಕರುಣೆಯಿಂದ ಮುರಿಯನಿಂತ ಬುದ್ಧನು ||
ದನುಜಬಲವ ದೈವಶಕ್ತಿಯಿಂದ ಮುರಿದಕೃಷ್ಣನು
ಮನುಜಕುಲವ ಪ್ರೇಮದಿಂದ ಗೆಲಲುನಿಂತ ಕ್ರಿಸ್ತನು ||
ತಂದೆಯಾಜ್ಞೆಯಂತೆ ಮನಸಿನೊಲವ ತೊರೆದ ರಾಮನು
ಒಂದುಘೋರ ಆಣೆಯಿಟ್ಟು ಕೊಂಡು ನಡೆದ ಭೀಷ್ಮನು ||
ದಿವ್ಯ ನೆರವಿನಿಂದ ಗುರಿಯ ಹೊಡೆವ ಇಂದ್ರತನುಜನು
ಭವ್ಯ ಕರ್ಮಯೋಗನಿರತ ದಿವ್ಯ ತೇಜ ಸೂರ್ಯನು ||
ಮರಣಹಿಂಸೆಯಲ್ಲು ಭಕ್ತಿ ಬಿಡದ ಪ್ರಹ್ಲಾದನು
ಪರಮಸೇವೆಗಸ್ಥಿ ಬಿಡುವ ಆ ದಧೀಚಿವರ್ಯನು ||
ನಲ್ಲೆಯಲ್ಲಿ ದೈವರೂಪಕಂಡ ರಾಮಕೃಷ್ಣನು
ಹೊಲೆಯರನ್ನು ಹರಿಯಜನರಗೈದ ಪುಣ್ಯವಂಶನು ||
ಬಗೆದರಷ್ಟು ಬಗೆಯಭಾವ ಬೆಳಗುವಾ ಮಹಾತ್ಮನು
ಜಗದಜನ್ಮ ಸುಟ್ಟ ಯುಗದ ಜೀವನಾ ದ್ವಿಜಾತ್ಮನು ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಮ್ಮ ಬಾಪೂ
Next post ಉಗುರು ೩

ಸಣ್ಣ ಕತೆ

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

cheap jordans|wholesale air max|wholesale jordans|wholesale jewelry|wholesale jerseys