ಅವಳು ಕಾದಳು

ತಂಗಾಳಿ ಸೂಸಿ ಹಾಡಿದ ಜೋಗುಳ
ನಿಶ್ಶಬ್ದ ರಾತ್ರಿಯಲಿ ಜುಳು ಜುಳು
ನದಿಯೊಡಲ ತುಂಬ ಅವನ ಧ್ಯಾನ
ಬಾನ ಬುಡದಲಿ ಚಂದಿರನ ಬೆಳಕು
ಅವಳು ಕಾದಳು ಅವನ ಕೊಳಲನಾದಕ್ಕಾಗಿ.

ಹೂವಿನ ಪಕಳೆ ತುಂಬ ಗಂಧ
ವಲಸೆ ಹೋದ ಹಕ್ಕಿಗಳ ನೆರಳು
ತೆನೆ ತೂಗಿದ ಬಯಲ ಆಲಯ
ಮೌನವರಿಸಿದೆ ಕನವರಿಸಿದ ಕನಸುಗಳು
ಅವಳು ಕಾದಳು ಅವನ ಬಾಹು ಬಂಧನಕೆ.

ಮರೆಯದ ನೆನಪಿನ ಜಾಲ
ಬಳ್ಳಿಯಲಿ ಅರಳಿದ ದುಂಡು ಮಲ್ಲಿಗೆ
ದುಂಬಿಯ ಹಾರಾಟಕೆ ಮುದ
ಹೂ ತೋಟದ ತುಂಬ ಏಕಾಂತ ಸಂಜೆ
ಅವಳು ಕಾದಳು ಸಖ್ಯ ಸಖ್ಯ ಅನುಪಮದಲಿ.

ಅಂತರಾತ್ಮದ ಪಿಸುಗುಡುವ ಹಾಡು
ಅಂತರ್ಯವ ಕಲುಕಿ ಕರಗಿ
ಕಪ್ಪಿನ ಮೌನ ಕತ್ತಲೆ ರಾತ್ರಿ ಸರಿದು
ಸೂರ್ಯ ಉದಯಿಸಿದ ಉನ್ಮಾದದಲಿ
ಅವಳು ಕಾದಳು ಮನ್ವಂತರದ ಮರುಸೃಷ್ಟಿಗೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಓ ಮಧುರ ಮಾರುನುಡಿ !
Next post ಆಶ್ಚರ್ಯ

ಸಣ್ಣ ಕತೆ

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys