ಅವಳು ಕಾದಳು

ತಂಗಾಳಿ ಸೂಸಿ ಹಾಡಿದ ಜೋಗುಳ
ನಿಶ್ಶಬ್ದ ರಾತ್ರಿಯಲಿ ಜುಳು ಜುಳು
ನದಿಯೊಡಲ ತುಂಬ ಅವನ ಧ್ಯಾನ
ಬಾನ ಬುಡದಲಿ ಚಂದಿರನ ಬೆಳಕು
ಅವಳು ಕಾದಳು ಅವನ ಕೊಳಲನಾದಕ್ಕಾಗಿ.

ಹೂವಿನ ಪಕಳೆ ತುಂಬ ಗಂಧ
ವಲಸೆ ಹೋದ ಹಕ್ಕಿಗಳ ನೆರಳು
ತೆನೆ ತೂಗಿದ ಬಯಲ ಆಲಯ
ಮೌನವರಿಸಿದೆ ಕನವರಿಸಿದ ಕನಸುಗಳು
ಅವಳು ಕಾದಳು ಅವನ ಬಾಹು ಬಂಧನಕೆ.

ಮರೆಯದ ನೆನಪಿನ ಜಾಲ
ಬಳ್ಳಿಯಲಿ ಅರಳಿದ ದುಂಡು ಮಲ್ಲಿಗೆ
ದುಂಬಿಯ ಹಾರಾಟಕೆ ಮುದ
ಹೂ ತೋಟದ ತುಂಬ ಏಕಾಂತ ಸಂಜೆ
ಅವಳು ಕಾದಳು ಸಖ್ಯ ಸಖ್ಯ ಅನುಪಮದಲಿ.

ಅಂತರಾತ್ಮದ ಪಿಸುಗುಡುವ ಹಾಡು
ಅಂತರ್ಯವ ಕಲುಕಿ ಕರಗಿ
ಕಪ್ಪಿನ ಮೌನ ಕತ್ತಲೆ ರಾತ್ರಿ ಸರಿದು
ಸೂರ್ಯ ಉದಯಿಸಿದ ಉನ್ಮಾದದಲಿ
ಅವಳು ಕಾದಳು ಮನ್ವಂತರದ ಮರುಸೃಷ್ಟಿಗೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಓ ಮಧುರ ಮಾರುನುಡಿ !
Next post ಆಶ್ಚರ್ಯ

ಸಣ್ಣ ಕತೆ

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…