ಗಾಜಿನ ಅರಮನೆ

ತೋಟದಲ್ಲಿ ತಿರುಗುವಾಗ ಭುಜವೇರಿ ಬಂದಿತ್ತು ಒಂದು ಕಂಬಳಿ ಹುಳು. ಮೈ ನವೆ ತಡೆಯಲಾರದೆ ಸಿಟ್ಟಿನಿಂದ ಕಂಬಳಿ ಹುಳುವನ್ನು ಒಂದು ಸೀಸೆಯಲ್ಲಿ ಹಾಕಿ ಬಂಧಿಸಿಟ್ಟ ತೋಟದ ಮಾಲಿ. ಗಿಡಗಳಿಗೆ ನೀರು ಹಾಕುವಾಗ ಕನಿಕರ ಗೊಂಡು ನಾಲಕ್ಕು ಎಲೆ ಆಹಾರ ಹಾಕಿ ದಿನವೂ ನೋಡುತ್ತಿದ್ದ. ಹಲವು ದಿನದೊಳಗೆ ಕಂಬಳಿ ಹುಳು ಚಿಟ್ಟೆಯಾಯಿತು. ಕಪ್ಪು ಕಂಬಳಿಯ ಬಿಟ್ಟು ರಂಗುರಂಗಿನ ರೆಕ್ಕೆ ಹೊದ್ದಿತು. ಪಟಪಟ ರೆಕ್ಕೆ ಬಡಿಯಿತು. ತನ್ನ ರೆಕ್ಕೆ ಸಾಗರ ಭೂಮಿ ಮುಟ್ಟಿದೆ ಎಂದು ಸಂತಸ ಪಟ್ಟಿತು. ತಾನಿರುವಲ್ಲಿಗೆ ಸೂರ್‍ಯ, ಚಂದ್ರ, ಗಾಳಿ, ಆಗಸ ಎಲ್ಲವೂ ಬರುತ್ತಿದೆ, ಎಂಬ ಭ್ರಮೆಯಲ್ಲಿತ್ತು. ಗಾಜಿನ ಮನೆಯ ಬಂಧನದ ಅರಿವು ಅದಕ್ಕೆ ಇರಲಿಲ್ಲ.

ಗಾಜಿನ ಬಾಟಲಿನಲ್ಲಿ ಹಾರುತ್ತಿದ್ದ ಚಿಟ್ಟೆಯನ್ನು ನೋಡಿ ತೋಟದ ಮಾಲಿ ಅದರ ಬಾಯಿಗೆ ಬಿರಟೆ ಇಟ್ಟ. ಚಿಟ್ಟೆ ಚೀರಿತು.

“ಇದೇನು ನಾ ಕಂಡ ಆಗಸ, ಭೂಮಿ, ಸೂರ್‍ಯ ಚಂದ್ರರೆ ನನ್ನ ಉಸುರು ಕಟ್ಟಿಸುತ್ತಿದ್ದಾರೆ” ಎಂದುಕೊಂಡಿತು. ಉಸುರು ಕಟ್ಟಿ ಸಾಯುವಾಗ ಮಾಲಿ ಮಾತು ಕೇಳಿಸಿತು.

“ಗಾಜಿನ ಅರಮನೆ ಹೇಗಿದೆ?” ಎಂದು. ಆಗ ಚಿಟ್ಟೆಗೆ ಜ್ಞಾನೋದಯವಾಯಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಂಗಾರು
Next post ಐರಿಷ್ ವೈಮಾನಿಕನ ಹಾಡು

ಸಣ್ಣ ಕತೆ

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…