Home / ಕಥೆ / ಕಿರು ಕಥೆ / ಪ್ರಶ್ನೆ ಚಿನ್ಹೆ – ಉತ್ತರ

ಪ್ರಶ್ನೆ ಚಿನ್ಹೆ – ಉತ್ತರ

ಒಬ್ಬ ಸಂಸಾರಿಕನಲ್ಲಿ ಒಂದು ವಿಚಿತ್ರ ವರ್ತನೆ ಇತ್ತು. ದಿನವೂ, ಎದ್ದ ಕೂಡಲೆ, ಮನಸ್ಸಿನಲ್ಲಿ ಪಿಸು ಗುಟ್ಟಿಕೊಂಡು, ಗೋಡೆಯ ಮೇಲೆ ಒಂದು ಪ್ರಶ್ನಾರ್ಥ ಚಿನ್ಹೆ ಹಾಕುತಿದ್ದ. ಸಂಜೆಯ ವೇಳೆಗೆ ಗೋಡೆ ಎದುರಿನ ಕಿಟಕಿಯಲ್ಲಿ ದಿಟ್ಟಿಸಿ, ದೂರದ ದಾರಿ, ದೂರದ ಬೆಟ್ಟ, ಆಗಸ, ಹರಿಯುವ ನದಿ, ತೇಲುವ ಮೋಡ, ಬಿರಿಯುವ ಹೂವು, ಹಾಡುವ ದುಂಬಿ, ಆಡುವ ಮಕ್ಕಳು, ಮತ್ತೇ ಏಕೆ ಇಡೀ ಜಗತ್ತಿನ ಚಲನವಲನವನ್ನು ಗಮನಿಸಿ, ಕೊನೆಗೆ ಮಲುಗುವ ಮುನ್ನ, ಪ್ರಶಾಂತ ಚಿತ್ತನಾಗಿ, ಆ ಪ್ರಶ್ನಾರ್ಥಕವನ್ನು ಅಳಸಿ, ಅರಿವಿನ ಚಿನ್ಹೆ ಹಾಕಿ ಸುಖ ನಿದ್ರೆ ಗೈಯುತ್ತಿದ್ದ.

ಇದನ್ನು ದಿನವೂ ನೋಡಿದ ಅವನ ಹೆಂಡತಿ, ಒಂದು ದಿನ ಇದರ ಗುಟ್ಟೇನು ಎಂದು ಕೇಳಿದಳು. ರಾತ್ರಿಯ ಕತ್ತಲೆ ಕೊಡುವ ಮನದ ಪ್ರಶ್ನೆ ಗೋಡೆಯಂತೆ ಎದ್ದು ನಿಲ್ಲುತ್ತದೆ. ಅದಕ್ಕೆ ಪ್ರಶ್ನೆ ಚಿನ್ಹೆ ಗೋಡೆಯ ಮೇಲೆ ಬರಿಯುವೆ. ಮತ್ತೆ ಬೆಳಗಿನ ಕಿರಣ ಹೊತ್ತು ತರುವ ಕಿಡಿಕಿಯಲ್ಲಿ ಸಂಜೆಯ ವೇಳೆಗೆ ನನಗೆ ಉತ್ತರ ಸಿಗುತ್ತದೆ. ಅದಕ್ಕೆ ಪ್ರಶ್ನೆ ಅಳಿಸಿ ಅರಿವಿನ ಚಿನ್ಹೆ ಹಾಕುತ್ತೇನೆ.” ಎಂದ.

ಇದೆಂತಹ ಸುಲಭಸೂತ್ರ ಎಂದು ಪತ್ನಿ ಪತಿಗೆ ನಮಸ್ಕರಿಸಿ ಅಭಿನಂದಿಸಿದಳು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...