Home / ಕಥೆ / ಕಿರು ಕಥೆ / ಪ್ರಶ್ನೆ ಚಿನ್ಹೆ – ಉತ್ತರ

ಪ್ರಶ್ನೆ ಚಿನ್ಹೆ – ಉತ್ತರ

ಒಬ್ಬ ಸಂಸಾರಿಕನಲ್ಲಿ ಒಂದು ವಿಚಿತ್ರ ವರ್ತನೆ ಇತ್ತು. ದಿನವೂ, ಎದ್ದ ಕೂಡಲೆ, ಮನಸ್ಸಿನಲ್ಲಿ ಪಿಸು ಗುಟ್ಟಿಕೊಂಡು, ಗೋಡೆಯ ಮೇಲೆ ಒಂದು ಪ್ರಶ್ನಾರ್ಥ ಚಿನ್ಹೆ ಹಾಕುತಿದ್ದ. ಸಂಜೆಯ ವೇಳೆಗೆ ಗೋಡೆ ಎದುರಿನ ಕಿಟಕಿಯಲ್ಲಿ ದಿಟ್ಟಿಸಿ, ದೂರದ ದಾರಿ, ದೂರದ ಬೆಟ್ಟ, ಆಗಸ, ಹರಿಯುವ ನದಿ, ತೇಲುವ ಮೋಡ, ಬಿರಿಯುವ ಹೂವು, ಹಾಡುವ ದುಂಬಿ, ಆಡುವ ಮಕ್ಕಳು, ಮತ್ತೇ ಏಕೆ ಇಡೀ ಜಗತ್ತಿನ ಚಲನವಲನವನ್ನು ಗಮನಿಸಿ, ಕೊನೆಗೆ ಮಲುಗುವ ಮುನ್ನ, ಪ್ರಶಾಂತ ಚಿತ್ತನಾಗಿ, ಆ ಪ್ರಶ್ನಾರ್ಥಕವನ್ನು ಅಳಸಿ, ಅರಿವಿನ ಚಿನ್ಹೆ ಹಾಕಿ ಸುಖ ನಿದ್ರೆ ಗೈಯುತ್ತಿದ್ದ.

ಇದನ್ನು ದಿನವೂ ನೋಡಿದ ಅವನ ಹೆಂಡತಿ, ಒಂದು ದಿನ ಇದರ ಗುಟ್ಟೇನು ಎಂದು ಕೇಳಿದಳು. ರಾತ್ರಿಯ ಕತ್ತಲೆ ಕೊಡುವ ಮನದ ಪ್ರಶ್ನೆ ಗೋಡೆಯಂತೆ ಎದ್ದು ನಿಲ್ಲುತ್ತದೆ. ಅದಕ್ಕೆ ಪ್ರಶ್ನೆ ಚಿನ್ಹೆ ಗೋಡೆಯ ಮೇಲೆ ಬರಿಯುವೆ. ಮತ್ತೆ ಬೆಳಗಿನ ಕಿರಣ ಹೊತ್ತು ತರುವ ಕಿಡಿಕಿಯಲ್ಲಿ ಸಂಜೆಯ ವೇಳೆಗೆ ನನಗೆ ಉತ್ತರ ಸಿಗುತ್ತದೆ. ಅದಕ್ಕೆ ಪ್ರಶ್ನೆ ಅಳಿಸಿ ಅರಿವಿನ ಚಿನ್ಹೆ ಹಾಕುತ್ತೇನೆ.” ಎಂದ.

ಇದೆಂತಹ ಸುಲಭಸೂತ್ರ ಎಂದು ಪತ್ನಿ ಪತಿಗೆ ನಮಸ್ಕರಿಸಿ ಅಭಿನಂದಿಸಿದಳು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...