ದೀಕ್ಷೆ

ಸಂಪಿಗೆಯ ವೃಕ್ಷದ ಕೆಳಗೆ ಕುಳಿತ ಗುರುವಿನ ಸಾನಿಧ್ಯಕ್ಕೆ, ಒಬ್ಬ ಸಾಧಕ ಬಂದು ‘ದೀಕ್ಷೆ’ ಕೊಡಲು ಕೇಳಿಕೊಂಡ.

ಗುರು ಹೇಳಿದರು- “ಅರಳಿದ ಸ್ವರ್ಣ ಸಂಪಿಗೆ, ಬುದ್ಧದೇವನ ಸಂದೇಶವ ಸಾರುತ್ತಿದೆ. ಗಿಡವು ಗುರುವಾಗಿರುವಾಗ, ನೀನು ದೀಕ್ಷೆ ಕೊಡುವ ಗುರುವನ್ನು ಏಕೆ ಹುಡುಕುತ್ತಿರುವೆ?”

“ಇಲ್ಲಿ ನೋಡು, ಈ ಮಲ್ಲಿಗೆ ಬಳ್ಳಿ. ಮೆಲ್ಲಗೆ ಬಳಿಯಲ್ಲಿ ಕುಳಿತುಕೊ. ಈ ಬಳ್ಳಿ ಮಲ್ಲಿಗೆ ಗಂಧ ನಿನ್ನ ಸುತ್ತಿ ಬಳಿಸುತ್ತದೆ. ನಿನಗೆ ದೀಕ್ಷೆ ಕೊಡುತ್ತದೆ.” ಮಲ್ಲಿಗೆಯ ಮುಗಳನ್ನು ನೋಡುತ್ತ ಶಿಷ್ಯನ ಮೊಗದಲ್ಲಿ ಮುಗಳ ಮಲ್ಲಿಗೆ ಅರಳಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಂದೇನು? ಇಂದೆಲ್ಲ ತಿಂದು ಮುಗಿಸಿದರೆ?
Next post ಸಾಹಿತ್ಯ-ಕೇಳಿ

ಸಣ್ಣ ಕತೆ

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…