ಸತ್ಯದ ವಿಳಾಸ

ಒಮ್ಮೆ ಶಿಷ್ಯ ಗುರುಗಳಲ್ಲಿ ಬಂದು “ಸತ್ಯದ ವಿಳಾಸ ನಿಮಗೆ ಗೊತ್ತೇ?” ಎಂದ. “ನನಗೆ ಹಲವು ವಿಳಾಸಗಳು ಗೊತ್ತು, ಅದನ್ನು ಬೇಕಾದರೆ ಹೇಳುತ್ತೇನೆ. ಅದನ್ನು ಹಿಡಿದು ನೀ ಸತ್ಯವನ್ನು ಹುಡುಕು” ಎಂದರು ಗುರುಗಳು.

“ಹೇಳಿ ಗುರುಗಳೇ’ ಎಂದ ಶಿಷ್ಯ.

“ಎಲ್ಲಾ ಪರ್‍ವತಗಳನ್ನು ಹತ್ತುತ್ತ ಹೋಗು ಕೊನೆಗೆ ಒಂದು ಪರ್ವತದ ಶಿಖರದಲ್ಲಿ ನಕ್ಷತ್ರದ ಬೆಳಕಿನಲ್ಲಿ ಸತ್ಯದ ವಿಳಾಸ ಸಿಗುತ್ತದೆ.” ಎಂದರು ಗುರುಗಳು.

“ಇದು ಬಹಳ ಕಷ್ಟ ಗುರುಗಳೆ” ಎಂದ ಶಿಷ್ಯ.

“ಹಾಗಾದರೆ ಒಂದು ಕೆಲಸ ಮಾಡು. ಸಪ್ತ ಸಮುದ್ರವನ್ನು ದಾಟುವಾಗ ಬಹಳ ಜಾಗರೂಕತೆ ಇಂದ ಕಣ್ತೆರದು ನೋಡುತ್ತಿರು. ಅಲೆ ಅಲೆಗಳ ಲಿಪಿ ಕೊರತದಲ್ಲಿ ಸತ್ಯದ ಸ್ಪಷ್ಟ ವಿಳಾಸ ಸಿಗುತ್ತದೆ” ಎಂದರು ಗುರುಗಳು. “ಗುರುಗಳೇ! ಇದು ಬಹಳ ಕಷ್ಟ ಸಾಧ್ಯ” ಎಂದ ಶಿಷ್ಯ.

“ಹೋಗಲಿ ಬಿಡಪ್ಪಾ. ಒಂದು ಕೆಲಸ ಮಾಡು, ಹೂವು ಬಿರಿದ ಎಡೆಯಲೆಲ್ಲ ಹೋಗುವ ದುಂಬಿಯ ಹಿಂದೆ ನೀನು ಓಡುತ್ತಿರು. ದುಂಬಿ ಝೇಂಕಾರದಲ್ಲಿ ಸತ್ಯದ ವಿಳಾಸ ಹೇಳುತ್ತಿರುತ್ತದೆ. ಅದನ್ನು ಅರ್‍ಥವಿಸಿ ತಿಳಿದುಕೊ.”

“ಗುರುಗಳೇ! ಹೂವಿನಿಂದ ಹೂವಿಗೆ ಹಾರುವ ದುಂಬಿಯ ಹಿಂದೆ ಹಾರಾಡಲು ಸಾಧ್ಯವಿಲ್ಲ. ಏನಾದರು ಬೇರೆ ಸುಲಭೋಪಾಯವಿಲ್ಲವೆ, ಗುರುಗಳೇ?”. “ಸತ್ಯದ ವಿಳಾಸ
ಯಾವುದಾದರೂ ಓಣೀಲಿ ಸಿಕ್ಕೊಲ್ಲವೇ?” ಎಂದ.

ಅದಕ್ಕೆ ಗುರುಗಳೆಂದರು ನನಗೆ ಗೊತ್ತಿರುವ ಓಣಿ ಆಕಾಶದಲ್ಲಿ ಇದೆ. ಅದಕ್ಕೆ ನೀನು ಏಣಿ ಹತ್ತಿ ಹೋಗಬೇಕು. ಆಗಸದ ನೀಲಿ ಓಣಿಯ ಗೋಡೆಯ ಮೇಲೆ ಸತ್ಯದ ವಿಳಾಸ ಇರುತ್ತದೆ. ಆದರೆ ಮೋಡ ಮುಚ್ಚಿರುತ್ತದೆ. ಅದು ಮಳೆ ಬರೋತನಕ ಕಾಯಬೇಕು. ಮಿಂಚು ಬಂದಾಗ ಓದಿಕೋಬೇಕು” ಎಂದರು ಗುರುಗಳು.

“ಗುರುಗಳೇ! ನನಗೆ ಸತ್ಯದ ವಿಳಾಸವು ಬೇಡ, ನಿತ್ಯದ ವಿಳಾಸವೇ ಸಾಕು” ಎಂದು ನಮಸ್ಕರಿಸಿ ಶಿಷ್ಯ ಕಾಲು ಕಿತ್ತಿದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಲಲಾ ಸೃಜನ ಶೀಲತೆಯೆಂದೊಡೇಂ?
Next post ಅದೃಷ್ಟ

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…