Home / ಕಥೆ / ಕಿರು ಕಥೆ / ಸತ್ಯದ ವಿಳಾಸ

ಸತ್ಯದ ವಿಳಾಸ

ಒಮ್ಮೆ ಶಿಷ್ಯ ಗುರುಗಳಲ್ಲಿ ಬಂದು “ಸತ್ಯದ ವಿಳಾಸ ನಿಮಗೆ ಗೊತ್ತೇ?” ಎಂದ. “ನನಗೆ ಹಲವು ವಿಳಾಸಗಳು ಗೊತ್ತು, ಅದನ್ನು ಬೇಕಾದರೆ ಹೇಳುತ್ತೇನೆ. ಅದನ್ನು ಹಿಡಿದು ನೀ ಸತ್ಯವನ್ನು ಹುಡುಕು” ಎಂದರು ಗುರುಗಳು.

“ಹೇಳಿ ಗುರುಗಳೇ’ ಎಂದ ಶಿಷ್ಯ.

“ಎಲ್ಲಾ ಪರ್‍ವತಗಳನ್ನು ಹತ್ತುತ್ತ ಹೋಗು ಕೊನೆಗೆ ಒಂದು ಪರ್ವತದ ಶಿಖರದಲ್ಲಿ ನಕ್ಷತ್ರದ ಬೆಳಕಿನಲ್ಲಿ ಸತ್ಯದ ವಿಳಾಸ ಸಿಗುತ್ತದೆ.” ಎಂದರು ಗುರುಗಳು.

“ಇದು ಬಹಳ ಕಷ್ಟ ಗುರುಗಳೆ” ಎಂದ ಶಿಷ್ಯ.

“ಹಾಗಾದರೆ ಒಂದು ಕೆಲಸ ಮಾಡು. ಸಪ್ತ ಸಮುದ್ರವನ್ನು ದಾಟುವಾಗ ಬಹಳ ಜಾಗರೂಕತೆ ಇಂದ ಕಣ್ತೆರದು ನೋಡುತ್ತಿರು. ಅಲೆ ಅಲೆಗಳ ಲಿಪಿ ಕೊರತದಲ್ಲಿ ಸತ್ಯದ ಸ್ಪಷ್ಟ ವಿಳಾಸ ಸಿಗುತ್ತದೆ” ಎಂದರು ಗುರುಗಳು. “ಗುರುಗಳೇ! ಇದು ಬಹಳ ಕಷ್ಟ ಸಾಧ್ಯ” ಎಂದ ಶಿಷ್ಯ.

“ಹೋಗಲಿ ಬಿಡಪ್ಪಾ. ಒಂದು ಕೆಲಸ ಮಾಡು, ಹೂವು ಬಿರಿದ ಎಡೆಯಲೆಲ್ಲ ಹೋಗುವ ದುಂಬಿಯ ಹಿಂದೆ ನೀನು ಓಡುತ್ತಿರು. ದುಂಬಿ ಝೇಂಕಾರದಲ್ಲಿ ಸತ್ಯದ ವಿಳಾಸ ಹೇಳುತ್ತಿರುತ್ತದೆ. ಅದನ್ನು ಅರ್‍ಥವಿಸಿ ತಿಳಿದುಕೊ.”

“ಗುರುಗಳೇ! ಹೂವಿನಿಂದ ಹೂವಿಗೆ ಹಾರುವ ದುಂಬಿಯ ಹಿಂದೆ ಹಾರಾಡಲು ಸಾಧ್ಯವಿಲ್ಲ. ಏನಾದರು ಬೇರೆ ಸುಲಭೋಪಾಯವಿಲ್ಲವೆ, ಗುರುಗಳೇ?”. “ಸತ್ಯದ ವಿಳಾಸ
ಯಾವುದಾದರೂ ಓಣೀಲಿ ಸಿಕ್ಕೊಲ್ಲವೇ?” ಎಂದ.

ಅದಕ್ಕೆ ಗುರುಗಳೆಂದರು ನನಗೆ ಗೊತ್ತಿರುವ ಓಣಿ ಆಕಾಶದಲ್ಲಿ ಇದೆ. ಅದಕ್ಕೆ ನೀನು ಏಣಿ ಹತ್ತಿ ಹೋಗಬೇಕು. ಆಗಸದ ನೀಲಿ ಓಣಿಯ ಗೋಡೆಯ ಮೇಲೆ ಸತ್ಯದ ವಿಳಾಸ ಇರುತ್ತದೆ. ಆದರೆ ಮೋಡ ಮುಚ್ಚಿರುತ್ತದೆ. ಅದು ಮಳೆ ಬರೋತನಕ ಕಾಯಬೇಕು. ಮಿಂಚು ಬಂದಾಗ ಓದಿಕೋಬೇಕು” ಎಂದರು ಗುರುಗಳು.

“ಗುರುಗಳೇ! ನನಗೆ ಸತ್ಯದ ವಿಳಾಸವು ಬೇಡ, ನಿತ್ಯದ ವಿಳಾಸವೇ ಸಾಕು” ಎಂದು ನಮಸ್ಕರಿಸಿ ಶಿಷ್ಯ ಕಾಲು ಕಿತ್ತಿದ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...