Home / ಕಥೆ / ಕಿರು ಕಥೆ / ಸತ್ಯದ ವಿಳಾಸ

ಸತ್ಯದ ವಿಳಾಸ

ಒಮ್ಮೆ ಶಿಷ್ಯ ಗುರುಗಳಲ್ಲಿ ಬಂದು “ಸತ್ಯದ ವಿಳಾಸ ನಿಮಗೆ ಗೊತ್ತೇ?” ಎಂದ. “ನನಗೆ ಹಲವು ವಿಳಾಸಗಳು ಗೊತ್ತು, ಅದನ್ನು ಬೇಕಾದರೆ ಹೇಳುತ್ತೇನೆ. ಅದನ್ನು ಹಿಡಿದು ನೀ ಸತ್ಯವನ್ನು ಹುಡುಕು” ಎಂದರು ಗುರುಗಳು.

“ಹೇಳಿ ಗುರುಗಳೇ’ ಎಂದ ಶಿಷ್ಯ.

“ಎಲ್ಲಾ ಪರ್‍ವತಗಳನ್ನು ಹತ್ತುತ್ತ ಹೋಗು ಕೊನೆಗೆ ಒಂದು ಪರ್ವತದ ಶಿಖರದಲ್ಲಿ ನಕ್ಷತ್ರದ ಬೆಳಕಿನಲ್ಲಿ ಸತ್ಯದ ವಿಳಾಸ ಸಿಗುತ್ತದೆ.” ಎಂದರು ಗುರುಗಳು.

“ಇದು ಬಹಳ ಕಷ್ಟ ಗುರುಗಳೆ” ಎಂದ ಶಿಷ್ಯ.

“ಹಾಗಾದರೆ ಒಂದು ಕೆಲಸ ಮಾಡು. ಸಪ್ತ ಸಮುದ್ರವನ್ನು ದಾಟುವಾಗ ಬಹಳ ಜಾಗರೂಕತೆ ಇಂದ ಕಣ್ತೆರದು ನೋಡುತ್ತಿರು. ಅಲೆ ಅಲೆಗಳ ಲಿಪಿ ಕೊರತದಲ್ಲಿ ಸತ್ಯದ ಸ್ಪಷ್ಟ ವಿಳಾಸ ಸಿಗುತ್ತದೆ” ಎಂದರು ಗುರುಗಳು. “ಗುರುಗಳೇ! ಇದು ಬಹಳ ಕಷ್ಟ ಸಾಧ್ಯ” ಎಂದ ಶಿಷ್ಯ.

“ಹೋಗಲಿ ಬಿಡಪ್ಪಾ. ಒಂದು ಕೆಲಸ ಮಾಡು, ಹೂವು ಬಿರಿದ ಎಡೆಯಲೆಲ್ಲ ಹೋಗುವ ದುಂಬಿಯ ಹಿಂದೆ ನೀನು ಓಡುತ್ತಿರು. ದುಂಬಿ ಝೇಂಕಾರದಲ್ಲಿ ಸತ್ಯದ ವಿಳಾಸ ಹೇಳುತ್ತಿರುತ್ತದೆ. ಅದನ್ನು ಅರ್‍ಥವಿಸಿ ತಿಳಿದುಕೊ.”

“ಗುರುಗಳೇ! ಹೂವಿನಿಂದ ಹೂವಿಗೆ ಹಾರುವ ದುಂಬಿಯ ಹಿಂದೆ ಹಾರಾಡಲು ಸಾಧ್ಯವಿಲ್ಲ. ಏನಾದರು ಬೇರೆ ಸುಲಭೋಪಾಯವಿಲ್ಲವೆ, ಗುರುಗಳೇ?”. “ಸತ್ಯದ ವಿಳಾಸ
ಯಾವುದಾದರೂ ಓಣೀಲಿ ಸಿಕ್ಕೊಲ್ಲವೇ?” ಎಂದ.

ಅದಕ್ಕೆ ಗುರುಗಳೆಂದರು ನನಗೆ ಗೊತ್ತಿರುವ ಓಣಿ ಆಕಾಶದಲ್ಲಿ ಇದೆ. ಅದಕ್ಕೆ ನೀನು ಏಣಿ ಹತ್ತಿ ಹೋಗಬೇಕು. ಆಗಸದ ನೀಲಿ ಓಣಿಯ ಗೋಡೆಯ ಮೇಲೆ ಸತ್ಯದ ವಿಳಾಸ ಇರುತ್ತದೆ. ಆದರೆ ಮೋಡ ಮುಚ್ಚಿರುತ್ತದೆ. ಅದು ಮಳೆ ಬರೋತನಕ ಕಾಯಬೇಕು. ಮಿಂಚು ಬಂದಾಗ ಓದಿಕೋಬೇಕು” ಎಂದರು ಗುರುಗಳು.

“ಗುರುಗಳೇ! ನನಗೆ ಸತ್ಯದ ವಿಳಾಸವು ಬೇಡ, ನಿತ್ಯದ ವಿಳಾಸವೇ ಸಾಕು” ಎಂದು ನಮಸ್ಕರಿಸಿ ಶಿಷ್ಯ ಕಾಲು ಕಿತ್ತಿದ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...