ಸಣ್ಣ ಬಾಲಕರೋ ಹನೀಪಸಾಹೇಬರೋ

ಸಣ್ಣ ಬಾಲಕರೋ ಮಹಮ್ಮದ ಹನೀಪಸಾಹೇಬರೋ || ಪ ||
ತಾಯಿ ದೂತನು ಕೇಳಲಿಲ್ಲ
ಊಟ-ಉಡುಗರಿ ಮಾಡಲಿಲ್ಲ
ನಿತ್ಯ ಕುಡಿವರೋ ಹಾಲ
ಮಹಮ್ಮದ ಹನೀಪಸಾಹೇಬರೋ || ೧ ||

ತೋಟದೊಳಗಿನ ಕಲ್ಲು ತೆಗದು
ನೀರು ಕುಡಿದು ಕೆಡಿಸ್ಯಾರಲ್ಲ
ಸುದ್ದಿಕೇಳಿ ಬಂದು ಮೌಲಾ
ವಾದಹಾಕ್ಯಾರು ಧೀರಶರಣ || ೨ ||

ತೋಟದೊಳಗೆ ತಂದೆ ಮಗನು
ಕುಸ್ತಿಯನ್ನು ಹಿಡಿದಾರಲ್ಲಾ
ಎತ್ತಿ ಒಗದಾನೋ ಹಜರತ್ ಆಲಿ ಮೌಲಾ
ಮಹಮ್ಮದ ಹನೀಪಸಾಹೇಬರೋ || ೩ ||

ಕೈಯ ಒಳಗಿನ ಸಿಖವನೋಡಿ
ಮಗನು ಆಂತ ತಿಳಿದರಲ್ಲಾ
ಒಪ್ಪಿಕೊಂಡಾನೋ ಹಜರತ್ ಅಲಿ ಮೌಲಾ
ಮಹಮ್ಮದ ಹನೀಪಸಾಹೇಬರೋ || ೪ ||

ವಸುಧಿಯೊಳಗ ಶಿಶುವಿನಾಳ-
ಧೀಶನ ಕರುಣ ಇವರ ಮ್ಯಾಲ
ನಿತ್ಯಮಾಡುವೆ ಅವರ ಧ್ಯಾಸ
ಮಹಮ್ಮದ ಹ್ಲನೀಪಸಾಹೇಬರೋ || ೫ ||

*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಈ ಮಾತು ಕೇಳರಿ ಐಸುರ
Next post ಮಳೆಬಿಲ್ಲು ಹಾಗೂ ಹಿತ್ತಲ ಮೋಕ್ಷ

ಸಣ್ಣ ಕತೆ

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

cheap jordans|wholesale air max|wholesale jordans|wholesale jewelry|wholesale jerseys