ಭಾರತೀಯತೆ

ಎಲ್ಲಾದರೂ ಇರು
ಎಂತಾದರೂ ಇರು
ನೀ ಎಂದೆಂದಿಗೂ ಭಾರತೀಯನಾಗಿರು
ಭಾರತೀಯತೆ ಸತ್ಯ ಭಾರತೀಯತೆ ನಿತ್ಯ

ಭಾರತಾಂಬೆ ಓ ಮುದ್ದಿನ ಮಗು
ಭಾರತೀಯತೆ ನಿನ್ನಲ್ಲಿದರೆ
ಭಾರತಾಂಬೆಯ ಹೆಮ್ಮಯ ಪುತ್ರ
ಭಾರತಾಂಬೆಗೆ ನೀ ಕಲ್ಪತರು

ನೀ ನಡೆದಾಡುವ ನೆಲವೆಲ್ಲ ಭಾರತೀಯತೆ
ನೀ ಉಸಿರಾಡುವ ಗಾಳಿಯಲ್ಲ ಭಾರತೀಯತೆ
ರಾಮ ಸೀತೆಯರಿಗಾಗಿ ಎರಗೂವ ಮನ
ಹರಿದು-ಹಂಚಿಹೋದ ಭಾರತಕ್ಕೆ ಕೊರಗುವ ಮನ

ನೀ ಮುಟ್ಟುವ ಮರ
ಅದೇ ಶ್ರೀಗಂಧದ ಮರ
ನೀ ಕುಡಿಯುವ ನೀರು
ಗಂಗಾ-ಯಮುನ-ಬ್ರಹ್ಮಪುತ್ರ ಕಾವೇರಿ ನೀರು

ಜಾತಿ-ಮತ-ಭೇದ
ಅಳಿಸಿದಂತ ಮನ
ಭಾರತಾಂಬೆಯ ಮಕ್ಕಳೆಂದು
ಸಾರಿ ನುಡಿಯುವ ಮನ ತನುಮನ

ತಾ ಜಾಣಕೆ ಗಿಳಿ ಕೋಗಿಲೆ ಇಂಪಿಗೆ
ಮಲ್ಲಿಗೆ ಸಂಪಿಗೆ ಭಾರತೀಯತೆ
ಹಿತ ನುಡಿಯುವ ಮಾತಿಗೆ
ರೋಮಾಂಚನವಾಗುವ ತನುಮನ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಲ್ಲಿ ಹೋದಳು ಕತೀಜ?
Next post ಆರೋಪ – ೧೧

ಸಣ್ಣ ಕತೆ

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…