ಭಾರತೀಯತೆ

ಎಲ್ಲಾದರೂ ಇರು
ಎಂತಾದರೂ ಇರು
ನೀ ಎಂದೆಂದಿಗೂ ಭಾರತೀಯನಾಗಿರು
ಭಾರತೀಯತೆ ಸತ್ಯ ಭಾರತೀಯತೆ ನಿತ್ಯ

ಭಾರತಾಂಬೆ ಓ ಮುದ್ದಿನ ಮಗು
ಭಾರತೀಯತೆ ನಿನ್ನಲ್ಲಿದರೆ
ಭಾರತಾಂಬೆಯ ಹೆಮ್ಮಯ ಪುತ್ರ
ಭಾರತಾಂಬೆಗೆ ನೀ ಕಲ್ಪತರು

ನೀ ನಡೆದಾಡುವ ನೆಲವೆಲ್ಲ ಭಾರತೀಯತೆ
ನೀ ಉಸಿರಾಡುವ ಗಾಳಿಯಲ್ಲ ಭಾರತೀಯತೆ
ರಾಮ ಸೀತೆಯರಿಗಾಗಿ ಎರಗೂವ ಮನ
ಹರಿದು-ಹಂಚಿಹೋದ ಭಾರತಕ್ಕೆ ಕೊರಗುವ ಮನ

ನೀ ಮುಟ್ಟುವ ಮರ
ಅದೇ ಶ್ರೀಗಂಧದ ಮರ
ನೀ ಕುಡಿಯುವ ನೀರು
ಗಂಗಾ-ಯಮುನ-ಬ್ರಹ್ಮಪುತ್ರ ಕಾವೇರಿ ನೀರು

ಜಾತಿ-ಮತ-ಭೇದ
ಅಳಿಸಿದಂತ ಮನ
ಭಾರತಾಂಬೆಯ ಮಕ್ಕಳೆಂದು
ಸಾರಿ ನುಡಿಯುವ ಮನ ತನುಮನ

ತಾ ಜಾಣಕೆ ಗಿಳಿ ಕೋಗಿಲೆ ಇಂಪಿಗೆ
ಮಲ್ಲಿಗೆ ಸಂಪಿಗೆ ಭಾರತೀಯತೆ
ಹಿತ ನುಡಿಯುವ ಮಾತಿಗೆ
ರೋಮಾಂಚನವಾಗುವ ತನುಮನ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಲ್ಲಿ ಹೋದಳು ಕತೀಜ?
Next post ಆರೋಪ – ೧೧

ಸಣ್ಣ ಕತೆ

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…