ಇರುಳಾಗಲೆ ಕವಿದಿದೆ ಗೆಳತಿ

ದಾರಿಯು ಇನಿತಾದರು ಕಳೆದಿಲ್ಲ,
ದೂರದ ಊರಿನ ಸುಳಿವೇ ಇಲ್ಲ,
ಹಸುರು ಬಯಲುಗಳೊ ಬಾಳಿನೊಳಿಲ್ಲ,
ಇರುಳಾಗಲೆ ಕವಿದಿದೆ, ಗೆಳತಿ!

ರವಿ ಮುಳುಗಿದನದೋ ದುಗುಡದ ಕಡಲಲಿ,
ಮೋಡದ ದಿಬ್ಬಣ ಆಗಸದೊಡಲಲಿ
ಅಬ್ಬರಿಸಿದೆ, ಭಯ ತುಂಬುತ ಸಿಡಿಲಲಿ
ಇರುಳಾಗಲೆ ಕವಿದಿದೆ, ಗೆಳತಿ!

ಇರುಳಿತ್ತಿದೆ ಮರುಳಿನ ಆಹ್ವಾನ,
ದೂರದಿ ಒರಲಿದೆ ಯಾವುದೋ ಶ್ವಾನ,
ಮರಮರ ಮರುಗಿದೆ ತರಗೆಲೆ ತಾನ,
ಇರುಳಾಗಲೆ ಕವಿದಿದೆ, ಗೆಳತಿ!

ಕಾಲು ತೊಡರುತಿದೆ, ಮುನ್ನಡೆಯುವ ದೆಸೆ
ದಿಕ್ಕುಗಾಣದೆಯೆ ನಾಳಿನ ಭರವಸೆ
ಬಿಕ್ಕಿ ಅಳುತಲಿರೆ, ಚಿರದುಃಖದ ಹಸೆ
ಇರುಳಾಗಲೆ ಕವಿದಿದೆ, ಗೆಳತಿ!

ದಾರಿ ತಪ್ಪಿಹುದು, ನೀನೆಲ್ಲಿ ನಡೆದೆ.
ಹಾಳು ಅಪ್ಪಿಹುದು, ನಾನಿಲ್ಲಿಯೆ ಉಳಿದೆ.
ಗೋಳು ಒಪ್ಪಿಹುದು, ಬಾಳು ನನ್ನದಿದೆ.
ಇರುಳಾಗಲೆ ಕವಿದಿದೆ, ಗೆಳತಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೌನವು ಮುದ್ದಿಗಾಗಿ!
Next post ಒಂದು ಕ್ಷಣ

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…