ಆವೇದನ

ಜೀವದ ಹಕ್ಕಿ ಪಲ್ಲವಿಸುತಿದೆ
ಬಿರಿ ಬಿರಿದ ಕೊರಳಿನಿಂದ,
ಅಲೆವ ಮೋಡಗಳ ಕೈ ಬೀಸಿ ತಡೆಯುತಿದೆ
ಅನುಪಲ್ಲವಿಗೆ ದೈನ್ಯದಿಂದ ||ಪ||

ಮೌನ ಮೌನದ
ಮಾತಿನ ಮಾತನು ಮೀರಿನಿಂತ ಕೂಗು,
ನಿನದ ನಿನದದ
ಬಾಳ ತರಂಗದ ತಂತುತಂತಿನಾ ಕೊರಗು |

ಚಿಂದಿ ಚಿಂದಿಯ
ಹಸಿರು ವಸನದಾ ತಾಯಗೊರಳ ಕೂಗು,
ಬಸಿರ ಚಗುರಿಗೋ
ಅವನಿಯಾಸೆಯ ಜೀವದುಸಿರ ಕೊರಗು |

ಕಣ್ಣ ಕಾಂತಿಯು
ಮುರುಟಿಸಿ ತಲ್ಲಣಗೊಂಡ ಜೀವದಾ ಕೂಗು,
ಬಣ್ಣದ ಭ್ರಾಂತಿಯ
ಬದುಕಲಿ ಸೋತ ಕಣ್ತೆರೆದು ನಿಂತವರ ಕೊರಗು |

ನಾಳೆ-ನಾಳೆಯ
ಕಣ್ಣ-ಕಣ್ಣುಗಳಲ್ಲಿ ಹೊತ್ತ ಕಂದಗಳ ಕೂಗು,
ಇಂದು-ಇಂದಿನಾ
ಬವಣೆ-ಬವಣೆಗಳ ತೊತ್ತಿನ ಜನಗಳ ಕೊರಗು |
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿನ್ನ ನೆನಪಿನಲಿ
Next post ಬೂಮ್‌ರಾಂಗ್

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…