ಮಕ್ಕಳಾಟ

ದಿನಕ್ಕೊಂದು ಆಟ ಮರದ ತುಂಬ ಮಿಡಿ
ಮಿಡಿತದ ಹಕ್ಕಿ ಹಾರಾಟ ಗಾಳಿ ಮಾತು
ಹೊಳೆದಾಟಿ ಬೇಲಿದಾಟಿ ಹಿಡಿದ ಚಿಟ್ಟೆ
ಕೈಗೆ ಅಂಟದ ಬಣ್ಣಗಳು ಆಚೆ ಕಾಮನ ಬಿಲ್ಲು.

ದೊಡ್ಡ ರೆಂಬೆಯ ಹಿಡಿದ ಎಳೆದ ಎಲೆ
ಬೆರಳುಗಳು ಚೀಪಿ ಚೀಪಿ ರಸಪಾಕ
ಹಕ್ಕಿ ರೆಕ್ಕೆ ತುಂಬ ಹಾರಿದ ತೇಲುಪಟ
ಜೋಕಾಲಿ ಜೀಕೀದ ಹಾಯಿ ಎದೆಯ ಹಾಡು.

ಯಾವ ಸಂಘರ್ಷಗಳಿಲ್ಲದ ಧರ್ಮದ ಗೂಡು
ಎದೆಯಿಂದ ಎದೆಗೆ ಹರಡಿದ ಪ್ರೀತಿ ಸ್ನೇಹ
ಅಂಗೈಯ ಮೃದು ಸೋಕಿದ ಕ್ಷಣಗಳು
ಚಲಿಸುವ ಸೂರ್ಯ ಹೊಳೆದಂಡೆಯಲಿ ನಿಂತುಬಿಟ್ಟ.

ಪರಿವರ್ತನೆಯ ಕನಸುಗಳ ಮೇಲೆ
ದಾಟಿ ಮನಸ್ಸು ಹೃದಯ ಒಂದಾದ ನಾದ
ಬಿಳಿ ನುಣುಪ ಮರಳು ಕಪ್ಪೇಗೂಡಿನಲಿ
ಅಂಗೈತುಂಬ ಸಂಜೇ ಮಲ್ಲಿಗೆ ರಂಗುಮದರಂಗಿ.

ಆಟ ಮುಗಿಯುವುದೇ ಇಲ್ಲ ಹೊಳೆ ಹರಿಯುತ್ತಿತ್ತು.
ಮರದ ತುಂಬ ಹೋತುಬಿದ್ದ ಮಾವಿನಹಣ್ಣುಗಳು
ಹೂವಿನಿಂದ ಹೂವಿಗೆ ಹಾರುವ ಚಿಟ್ಟೇ ಪಟ
ಮಕ್ಕಳಿಗೆ ನಂದನವನದಲಿ ಸಂಭ್ರಮದ ಹೋಳಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಂಚುಳ್ಳಿ ಬೆಳಕಿಂಡಿ – ೬೮
Next post ಬನ್ನಿ ಸಜ್ಜನರೇ… ಬನ್ನಿ

ಸಣ್ಣ ಕತೆ

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

cheap jordans|wholesale air max|wholesale jordans|wholesale jewelry|wholesale jerseys