ಮಕ್ಕಳಾಟ

ದಿನಕ್ಕೊಂದು ಆಟ ಮರದ ತುಂಬ ಮಿಡಿ
ಮಿಡಿತದ ಹಕ್ಕಿ ಹಾರಾಟ ಗಾಳಿ ಮಾತು
ಹೊಳೆದಾಟಿ ಬೇಲಿದಾಟಿ ಹಿಡಿದ ಚಿಟ್ಟೆ
ಕೈಗೆ ಅಂಟದ ಬಣ್ಣಗಳು ಆಚೆ ಕಾಮನ ಬಿಲ್ಲು.

ದೊಡ್ಡ ರೆಂಬೆಯ ಹಿಡಿದ ಎಳೆದ ಎಲೆ
ಬೆರಳುಗಳು ಚೀಪಿ ಚೀಪಿ ರಸಪಾಕ
ಹಕ್ಕಿ ರೆಕ್ಕೆ ತುಂಬ ಹಾರಿದ ತೇಲುಪಟ
ಜೋಕಾಲಿ ಜೀಕೀದ ಹಾಯಿ ಎದೆಯ ಹಾಡು.

ಯಾವ ಸಂಘರ್ಷಗಳಿಲ್ಲದ ಧರ್ಮದ ಗೂಡು
ಎದೆಯಿಂದ ಎದೆಗೆ ಹರಡಿದ ಪ್ರೀತಿ ಸ್ನೇಹ
ಅಂಗೈಯ ಮೃದು ಸೋಕಿದ ಕ್ಷಣಗಳು
ಚಲಿಸುವ ಸೂರ್ಯ ಹೊಳೆದಂಡೆಯಲಿ ನಿಂತುಬಿಟ್ಟ.

ಪರಿವರ್ತನೆಯ ಕನಸುಗಳ ಮೇಲೆ
ದಾಟಿ ಮನಸ್ಸು ಹೃದಯ ಒಂದಾದ ನಾದ
ಬಿಳಿ ನುಣುಪ ಮರಳು ಕಪ್ಪೇಗೂಡಿನಲಿ
ಅಂಗೈತುಂಬ ಸಂಜೇ ಮಲ್ಲಿಗೆ ರಂಗುಮದರಂಗಿ.

ಆಟ ಮುಗಿಯುವುದೇ ಇಲ್ಲ ಹೊಳೆ ಹರಿಯುತ್ತಿತ್ತು.
ಮರದ ತುಂಬ ಹೋತುಬಿದ್ದ ಮಾವಿನಹಣ್ಣುಗಳು
ಹೂವಿನಿಂದ ಹೂವಿಗೆ ಹಾರುವ ಚಿಟ್ಟೇ ಪಟ
ಮಕ್ಕಳಿಗೆ ನಂದನವನದಲಿ ಸಂಭ್ರಮದ ಹೋಳಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಂಚುಳ್ಳಿ ಬೆಳಕಿಂಡಿ – ೬೮
Next post ಬನ್ನಿ ಸಜ್ಜನರೇ… ಬನ್ನಿ

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…