Home / ಕವನ / ಕವಿತೆ / ಬನ್ನಿ ಸಜ್ಜನರೇ… ಬನ್ನಿ

ಬನ್ನಿ ಸಜ್ಜನರೇ… ಬನ್ನಿ

ಬನ್ನಿ ಸಜ್ಜನರೇ ಬನ್ನಿ
ನವ ನಾಡ ಕಟ್ಟುವ ಬನ್ನಿ ||ಪ||

ಪ್ರಗತಿ ಬಂಡಾಯ ದಲಿತ ನವೋದಯ
ನವ್ಯ ಸಂಪ್ರದ ಶೀಲರೆ ಬನ್ನಿ,
ಜ್ಞಾನ ವಿಜ್ಞಾನ ನಿಧಿಯ ವಿಬುಧ ಜನ
ಸಮ್ಮಾನ ಜನಪದರೆ ಬನ್ನಿ, ||ಅ.ಪ.||

ಕಬ್ಬಿಗ ಬನದ ಕಾವ್ಯ ರಸದ
ಸುಧೆ ಕಳಸ ಹೊತ್ತು ಬನ್ನಿ,
ಮಾನವ ಜಾತಿ ತಾನೊಂದೆ ಕುಲವೆಂಬ
ಸ್ಪಟಿಕ ನುಡಿಯ ಬೆಳಕ ತನ್ನಿ,
ರವಿ ಕಾಣದ್ದನ್ನು ಕಾಣೋ ಕಲ್ಪನೆ ಕನಸಲೋಕದೀಚೆ….
ಕಣ್ ಕಂಡದ್ದನ್ನು ನಿಜ ನೇರ ನುಡಿಸೋ
ಸತ್ವ ದೀಪ್ತರಾಗಿ ಬನ್ನಿ |

ವಿಜ್ಞಾನ ದೇಗುಲದ ದೀಪದಾರತಿಯ
ನಿಜ ಬೆಳಕ ಬೀರ ಬನ್ನಿ,
ಜ್ಞಾನ-ವಿಜ್ಞಾನವು ಜಗದ ಬಲವೆಂಬ
ಮಣಿಕಾಂತಿ ತೋರ ಬನ್ನಿ,
ಮುಗಿಲೊಳಗು ಥಳಕುಗಳ ನಿಗೂಢ ಶೋಧ ದಾಚೆ…..
ನೆಲದ ಬದುಕಿನಾ ಜೀವ ಪ್ರೀತಿಸೋ
ಸೆಲೆ ಸುಳಿವ ಹಿಡಿದು ಬನ್ನಿ |

ಹಳೆಯ ಕೊಳೆಯ ಕಳೆಯನೊಮ್ಮನದಿ ಕೊಚ್ಚಿ
ನವನೀತ ನೇಹ ತನ್ನಿ,
ಕವಿ ಕವಿದ ನಿಶೆಯ, ಬಿಡಿ ಬಿಡಿಸೋ ಉಷೆಯ
ಹೊಂಗಿರಣವಾಗ ಬನ್ನಿ,
ಗೂಡು ಗೂಡುಗಳ ಹೊತ್ತಿ ಉರಿಸೋ ಹಗೆಯ ಜಾಲದೀಚೆ….
ಗೂಡೆದೆಯ ಗೂಡಿಗೂ ಪ್ರೀತಿ ಗುಟುಕನು
ಹಂಚಿ ಉಣಿಸಿ ಉಣಲು ಬನ್ನಿ |

ಅವರು ಇವರು ಇವರವರೆಂಬ
ತರತಮವ ಕೈಬಿಟ್ಟು ಬನ್ನಿ,
ಉಸಿರಿನ್ಹುಸಿರ ನಾಡ್ಹೆಸರ ಹಸಿರ ಬಸಿರ
ಸತ್ಯ ಹೊತ್ತು ತನ್ನಿ,
ಒಂದಾದುದೆಲ್ಲವೆರಡೆರಡ ಮಾಡೋ ಧಗೆಯ ತಂತ್ರದಾಚೆ….
ಒಂದು ಗೂಡಿಸುತ ಬಾನ್ಬೆಳಕ ಬೀರುವ
ದೀವಿಗೆಯ ಹಿಡಿದು ತನ್ನಿ |
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...