Home / ಕವನ / ಕವಿತೆ / ಬನ್ನಿ ಸಜ್ಜನರೇ… ಬನ್ನಿ

ಬನ್ನಿ ಸಜ್ಜನರೇ… ಬನ್ನಿ

ಬನ್ನಿ ಸಜ್ಜನರೇ ಬನ್ನಿ
ನವ ನಾಡ ಕಟ್ಟುವ ಬನ್ನಿ ||ಪ||

ಪ್ರಗತಿ ಬಂಡಾಯ ದಲಿತ ನವೋದಯ
ನವ್ಯ ಸಂಪ್ರದ ಶೀಲರೆ ಬನ್ನಿ,
ಜ್ಞಾನ ವಿಜ್ಞಾನ ನಿಧಿಯ ವಿಬುಧ ಜನ
ಸಮ್ಮಾನ ಜನಪದರೆ ಬನ್ನಿ, ||ಅ.ಪ.||

ಕಬ್ಬಿಗ ಬನದ ಕಾವ್ಯ ರಸದ
ಸುಧೆ ಕಳಸ ಹೊತ್ತು ಬನ್ನಿ,
ಮಾನವ ಜಾತಿ ತಾನೊಂದೆ ಕುಲವೆಂಬ
ಸ್ಪಟಿಕ ನುಡಿಯ ಬೆಳಕ ತನ್ನಿ,
ರವಿ ಕಾಣದ್ದನ್ನು ಕಾಣೋ ಕಲ್ಪನೆ ಕನಸಲೋಕದೀಚೆ….
ಕಣ್ ಕಂಡದ್ದನ್ನು ನಿಜ ನೇರ ನುಡಿಸೋ
ಸತ್ವ ದೀಪ್ತರಾಗಿ ಬನ್ನಿ |

ವಿಜ್ಞಾನ ದೇಗುಲದ ದೀಪದಾರತಿಯ
ನಿಜ ಬೆಳಕ ಬೀರ ಬನ್ನಿ,
ಜ್ಞಾನ-ವಿಜ್ಞಾನವು ಜಗದ ಬಲವೆಂಬ
ಮಣಿಕಾಂತಿ ತೋರ ಬನ್ನಿ,
ಮುಗಿಲೊಳಗು ಥಳಕುಗಳ ನಿಗೂಢ ಶೋಧ ದಾಚೆ…..
ನೆಲದ ಬದುಕಿನಾ ಜೀವ ಪ್ರೀತಿಸೋ
ಸೆಲೆ ಸುಳಿವ ಹಿಡಿದು ಬನ್ನಿ |

ಹಳೆಯ ಕೊಳೆಯ ಕಳೆಯನೊಮ್ಮನದಿ ಕೊಚ್ಚಿ
ನವನೀತ ನೇಹ ತನ್ನಿ,
ಕವಿ ಕವಿದ ನಿಶೆಯ, ಬಿಡಿ ಬಿಡಿಸೋ ಉಷೆಯ
ಹೊಂಗಿರಣವಾಗ ಬನ್ನಿ,
ಗೂಡು ಗೂಡುಗಳ ಹೊತ್ತಿ ಉರಿಸೋ ಹಗೆಯ ಜಾಲದೀಚೆ….
ಗೂಡೆದೆಯ ಗೂಡಿಗೂ ಪ್ರೀತಿ ಗುಟುಕನು
ಹಂಚಿ ಉಣಿಸಿ ಉಣಲು ಬನ್ನಿ |

ಅವರು ಇವರು ಇವರವರೆಂಬ
ತರತಮವ ಕೈಬಿಟ್ಟು ಬನ್ನಿ,
ಉಸಿರಿನ್ಹುಸಿರ ನಾಡ್ಹೆಸರ ಹಸಿರ ಬಸಿರ
ಸತ್ಯ ಹೊತ್ತು ತನ್ನಿ,
ಒಂದಾದುದೆಲ್ಲವೆರಡೆರಡ ಮಾಡೋ ಧಗೆಯ ತಂತ್ರದಾಚೆ….
ಒಂದು ಗೂಡಿಸುತ ಬಾನ್ಬೆಳಕ ಬೀರುವ
ದೀವಿಗೆಯ ಹಿಡಿದು ತನ್ನಿ |
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...