Home / ಕವನ / ಕವಿತೆ / ಬನ್ನಿ ಸಜ್ಜನರೇ… ಬನ್ನಿ

ಬನ್ನಿ ಸಜ್ಜನರೇ… ಬನ್ನಿ

ಬನ್ನಿ ಸಜ್ಜನರೇ ಬನ್ನಿ
ನವ ನಾಡ ಕಟ್ಟುವ ಬನ್ನಿ ||ಪ||

ಪ್ರಗತಿ ಬಂಡಾಯ ದಲಿತ ನವೋದಯ
ನವ್ಯ ಸಂಪ್ರದ ಶೀಲರೆ ಬನ್ನಿ,
ಜ್ಞಾನ ವಿಜ್ಞಾನ ನಿಧಿಯ ವಿಬುಧ ಜನ
ಸಮ್ಮಾನ ಜನಪದರೆ ಬನ್ನಿ, ||ಅ.ಪ.||

ಕಬ್ಬಿಗ ಬನದ ಕಾವ್ಯ ರಸದ
ಸುಧೆ ಕಳಸ ಹೊತ್ತು ಬನ್ನಿ,
ಮಾನವ ಜಾತಿ ತಾನೊಂದೆ ಕುಲವೆಂಬ
ಸ್ಪಟಿಕ ನುಡಿಯ ಬೆಳಕ ತನ್ನಿ,
ರವಿ ಕಾಣದ್ದನ್ನು ಕಾಣೋ ಕಲ್ಪನೆ ಕನಸಲೋಕದೀಚೆ….
ಕಣ್ ಕಂಡದ್ದನ್ನು ನಿಜ ನೇರ ನುಡಿಸೋ
ಸತ್ವ ದೀಪ್ತರಾಗಿ ಬನ್ನಿ |

ವಿಜ್ಞಾನ ದೇಗುಲದ ದೀಪದಾರತಿಯ
ನಿಜ ಬೆಳಕ ಬೀರ ಬನ್ನಿ,
ಜ್ಞಾನ-ವಿಜ್ಞಾನವು ಜಗದ ಬಲವೆಂಬ
ಮಣಿಕಾಂತಿ ತೋರ ಬನ್ನಿ,
ಮುಗಿಲೊಳಗು ಥಳಕುಗಳ ನಿಗೂಢ ಶೋಧ ದಾಚೆ…..
ನೆಲದ ಬದುಕಿನಾ ಜೀವ ಪ್ರೀತಿಸೋ
ಸೆಲೆ ಸುಳಿವ ಹಿಡಿದು ಬನ್ನಿ |

ಹಳೆಯ ಕೊಳೆಯ ಕಳೆಯನೊಮ್ಮನದಿ ಕೊಚ್ಚಿ
ನವನೀತ ನೇಹ ತನ್ನಿ,
ಕವಿ ಕವಿದ ನಿಶೆಯ, ಬಿಡಿ ಬಿಡಿಸೋ ಉಷೆಯ
ಹೊಂಗಿರಣವಾಗ ಬನ್ನಿ,
ಗೂಡು ಗೂಡುಗಳ ಹೊತ್ತಿ ಉರಿಸೋ ಹಗೆಯ ಜಾಲದೀಚೆ….
ಗೂಡೆದೆಯ ಗೂಡಿಗೂ ಪ್ರೀತಿ ಗುಟುಕನು
ಹಂಚಿ ಉಣಿಸಿ ಉಣಲು ಬನ್ನಿ |

ಅವರು ಇವರು ಇವರವರೆಂಬ
ತರತಮವ ಕೈಬಿಟ್ಟು ಬನ್ನಿ,
ಉಸಿರಿನ್ಹುಸಿರ ನಾಡ್ಹೆಸರ ಹಸಿರ ಬಸಿರ
ಸತ್ಯ ಹೊತ್ತು ತನ್ನಿ,
ಒಂದಾದುದೆಲ್ಲವೆರಡೆರಡ ಮಾಡೋ ಧಗೆಯ ತಂತ್ರದಾಚೆ….
ಒಂದು ಗೂಡಿಸುತ ಬಾನ್ಬೆಳಕ ಬೀರುವ
ದೀವಿಗೆಯ ಹಿಡಿದು ತನ್ನಿ |
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...