ಹಸಿರಕ್ತದ ಬಿಸಿಮಾಂಸ

ಕನಸು ಕಾಣದ, ನಾಚಿ ತುಟಿ ಕಚ್ಚಿಕೊಳ್ಳವ
ಹಸಿರಕ್ತದ ಬಿಸಿಮಾಂಸದ
ಬೆಡಗಿಯೆರು ನಿಲ್ಲುತ್ತಾರೆ
ಆರೆಬೆತ್ತಲಾಗಿ ನಗುತ್ತಾರೆ ಮುದಿಗಳೂ
ಹೊರಳಿ ನೋಡುವಂತೆ
ಹದ್ದುಗಳು ಎರಗುತ್ತವೆ ಮುಗಿಬೀಳುತ್ತವೆ
ಕಾಮದ ಹಸಿವಿಗಾಗಿ
ದೂರದ ಆಫ್ರಿಕ ಏಷಿಯಾದ
ಮುಸುರೆ ತೊಟ್ಟಿಗೆ
ಭಿಕ್ಷುಕರು ಮುಗಿಬಿದ್ದಂತೆ
ಅಲ್ಲಿಮುಸುರೆ; ಇಲ್ಲಿ ಮಾಂಸ
ಹೆಕ್ಕುತ್ತವೆ ಅವೇ ರಕ್ತ ಕಣಗಳ
ಹೊತ್ತ ಜೀವಿಗಳು
ಹಸಿರಕ್ತ ಕಹಿಯಾದರೂ
ಇರಲಿ ಸಿಹಿಯಾದರೂ ಇರಲಿ
ದೇಹ ಹಿಂಜರಿದರೂ ಬಿರಿದ
ಎದೆ ತೊಡೆಗಳನ್ನೆಲ್ಲ ಬಿಡದೇ
ದಿನೇ ದಿನೇ ಹೆಕ್ಕಿ ತಿನ್ನಲು
ಹದ್ದುಗಳು ಬೇಟೆಯಾಡುತ್ತಲೇ ಇರುತ್ತವೆ
ಬಿಸಿ ಮಾಂಸದ ದೇಹದಲ್ಲಿ
ತಾಯಿ ಅಕ್ಕ ಹೆಂಡತಿ ಕಾಣದೇ
ಅದೇ ರಕ್ತದ ಮಡುವಿನಲ್ಲಿ
ಮುಳುಗುತ್ತ ತೆಕ್ಕೆಯೊಳಗೆ ನಲಗಿಸುತ್ತ
ಸರಿಯುತ್ತವೆ
ಜಾರಿಬಿದ್ದ ಬೆಡಗಿಯರಿಗೆ ಅಳುವಿಲ್ಲ
ಏಳುತ್ತಾರೆ
ಇನ್ನೂ ಇನ್ನೂ ಬೆತ್ತಲಾಗುತ್ತ
ನೇಸರಿಳಿಯುವುದು ಕಾಯುತ್ತ
ರಸಿಕರಿಗೆ ರಂಗೇರಿಸಲು
ಬಣ್ಣ ಬಣ್ಣಗಳ ದೀಪಗಳಡಿ
ಮತ್ತೆ ಮತ್ತೆ ಸುಟ್ಟುಕೊಳ್ಳಲು ನಿಲ್ಲುತ್ತಾರೆ.
(ಪ್ಯಾರಿಸ್ಲಿನ Red light area)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೊನ್ ಪದಕವೇಕೆ?
Next post ಲಿಂಗಮ್ಮನ ವಚನಗಳು – ೧೫

ಸಣ್ಣ ಕತೆ

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…