ಜಾರಿಹೋದ ಉಂಗುರಕೆ

ನಮ್ಮ ಪ್ರೇಮದ ದಾರಿ ಕೊರಕಲನು ಸಮವಾಗಿ,
ದೂರವನು ಹತ್ತಿರಿರಿಸಿ-
ಸಂದ ಭಾಗ್ಯದ ಚೆನ್ನುಗನಸನ್ನು ನೆನೆಸನ್ನು
ತೋರಿದುಂಗುರವ ಕಳೆದೆ!

ಸಂಜೆ ತಾರೆಯ ನೋಡಿ ಅದರ ಕಾಂತಿಯ ಹಳಿದ
ಸರಸಿ ಉಂಗುರವವಳು;
ಮೊಲ್ಲೆ ಮಲ್ಲಿಗೆ ವರ್ಣದೀಪ್ತಿಯನು ತಾಕಂಡು
ಮುಡಿಯಲೆಂದಳು ನನಗೆ!

ರಮಣನಂದೆನಗಿತ್ತ ಅಂದಿನಾ ದಿನದಿಂದ
ನನ್ನೊಡನಾಡಿ ಅವಳು,
ಪತಿಭವನ ವಾರ್ತೆಯನು ಪತಿಯೊಲುಮೆ ತೆರವನ್ನು
ಅಂದವಳವಳೆ ನನಗೆ!

ಕ್ಷಣಕ್ಷಣಕು ದಿನದಿನಕು ಉಂಗುರದ ಸ್ಪರ್ಶವೇ
ನನ್ನ ಪ್ರೇಮದ ಹರುಷ
ಹೃದಯ ಸಾಮಿಪ್ಯವನು ಪ್ರಣಯ ಸಾರೂಪ್ಯವನು
ತೋರಿತದು-ಅಹಾ ಎಲ್ಲಿ?

ಕೆರೆಯಲ್ಲಿ ಕೈತೊಳೆಯೆ ಅದು ನಕ್ಕು ಹೊಳೆಹೊಳೆದು
ನನ್ನ ಮುತ್ತನ್ನು ಕೊಂಡು-
ನಿನ್ನ ರಮಣನ ಪ್ರೇಮ ಸಾಕ್ಷ್ಯ ರೂಪಿಯೆ ನಾನು-
ಎಂದು ಗೇಲಿಯನು ಮಾಡಿ.

ಕೈಯ ನೀರೊಳಗಿಡಲು-ಅದರ ಹೊಳಪನು ನೋಡಿ
ಬರಲು ಬೆರಗಿಂ ಮೀಂಗಳು,
ಮುಗ್ದೆ ಶಕುಂತಲೆಯ ಉಂಗುರವ ಕದ್ದಂತೆ
ಸಿಗಲಾರೆ-ತಾನು ಎಂದು

ಓಡಿಸುತ ಮೀಂಗಳನು-ಪ್ರೇಮಪುರಿ ದಾರಿಯನು
ತೋರುವೆನು-ಅಂದಿತೆನಗೆ.
ಬೆರಳ ನಡುವಲಿ ಸಿಲುಕಿ ಓಡಲಾರೆನು, ಮೋಡಿ
ವಿದ್ಯೆಯಾ ಗಾಡಿ-ಎಂದು.

ಪ್ರೇಮವಾರ್ತೆಯ ದೂತಿ, ನಲ್ಮೆ ಕಾಯುವ ದಾಸಿ
ಮಾಯವಾದಳೇ ಇಂದು?
ಜಗದ ಪ್ರೇಮಿಗಳ ಹೃತ್ಕಮಲಗಳ ಹೆಣೆಯುತಿಹ
ಮಾಯ ಮುದ್ರಾ ಸ್ವರೂಪಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೨೮
Next post ಎಷ್ಟು ಕಣ್ಣು ಹೊಡೆದರೂ

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಬೋರ್ಡು ಒರಸುವ ಬಟ್ಟೆ

    ಪ್ರಕರಣ ೬ ಸುತ್ತಮುತ್ತಲಿನ ಕೆಲವು ಪಾಠಶಾಲೆಗಳನ್ನು ನೋಡಿಕೊಂಡು ರಂಗಣ್ಣ ಜನಾರ್ದನಪುರಕ್ಕೆ ನಾಲ್ಕು ದಿನಗಳ ನಂತರ ಹಿಂದಿರುಗಿದನು. ರೇಂಜಿನಲ್ಲಿ ಹಲವು ಸುಧಾರಣೆಗಳಾಗಬೇಕೆಂಬುದು ಅವನ ಅನುಭವಕ್ಕೆ ಬಂದಿತು. ತನಗೆ ತೋರಿದ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ರಾಜಕೀಯ ಮುಖಂಡರು

    ಪ್ರಕರಣ ೧೦ ಆವಲಹಳ್ಳಿಯಲ್ಲಿ ನಡೆದ ಉಪಾಧ್ಯಾಯರ ಸಂಘದ ಸಭೆ ರೇಂಜಿನಲ್ಲೆಲ್ಲ ದೊಡ್ಡ ಜಾಗಟೆಯನ್ನು ಬಾರಿಸಿದಂತಾಯಿತು. ಅದರ ಕಾರ್ಯಕಲಾಪಗಳು, ಔತಣದ ವೈಖರಿ, ಇನ್ಸ್ಪೆಕ್ಟರು ಸಲಿಗೆಯಿಂದ ಉಪಾಧ್ಯಾಯರೊಡನೆ ಮಿಳಿತರಾಗಿ ಅವರ… Read more…