ಕಿಟಕಿ

ಉದ್ದಕ್ಕೆ ಏಳು
ಅಡ್ಡಕ್ಕೆ ಐದು ಸರಳುಗಳ ಕಿಟಕಿಯ ಕೆಳಗೆ
ರೋಡು ಬಜಾರು ಮನೆ ಮಠ ಬಯಲು ಬಯಲು
ಆಚೆ ಸಮುದ್ರ ಏರಿಳಿತ ಕೊರೆತ ಮೊರೆತ ಈಚೆ
ಸಂತೆಗೆ ಹೋಗುವ ಹೊರೆಗಳ ಭಾರದ ಕೆಳ ಓರೆಕೋರೆ
ರೇಖೆಗಳಲ್ಲಿ ಅಸ್ತಿತ್ವಗೊಂಡು ಮೂಡಿ ಮಾಯುವ ಮುಖಗಳು

ಹರಿಯುತ್ತಿರುವ ವಸ್ತುಗಳು ಸರಿಯುತ್ತಿರುವ ಬೆಳಕುಗಳು
ವಿಸ್ತಾರಗೊಳ್ಳುವ ಸರಹದ್ದುಗಳು ಅಮೀಬ ಆಕೃತಿಗಳು ವಿಕೃತಿಗಳು
ಅಸ್ಪಷ್ಟ ಸ್ಥಿತಿಗಳ ಅಮೂರ್ತ ಒತ್ತಡಗಳು ಹೀಗೆ
ತೇಲಿ ಬರುತ್ತಿವೆ ಕಿಟಕಿಯೊಳಗೆ ಇಣಕುತ್ತಿವೆ
ಏನೊ ಅನ್ವೇಷಿಸುತ್ತವೆ ಎಡೆಬಿಡದೆ
ಅದರ ನಿರ್ದಯ ಜಡತೆ ನಿಷ್ಕ್ರಿಯಕ್ಕೆ ಅದರ
ಹೆಪ್ಪು ಥಂಡಿಗೆ ಅಲಿಪ್ತ ಮೌನಕ್ಕೆ ಕತ್ತಲೆಯ ಭಯಕ್ಕೆ
ತಟ್ಟುತ್ತಾ ಇರುತ್ತವೆ ಆಗ,

ಆ ಹೊರಗು ಒಳಕ್ಕೆ ಜರಿಯುತ್ತಿರುವಂತೆ
ಆ ಒಳಗು ಕದಡಿ ಸರಿದು ಹೊರಕ್ಕೆ ಲಯಿಸುತ್ತಿರುವಂತೆ
ಏಕಾಂತತೆ ಮತ್ತು ಸಂತೆ ಅತ್ತಿತ್ತ ಹೊಕ್ಕು ಬೆರೆತಂತೆ ಕ್ಷೆಣಗಳು
ಇಂಥ ಸ್ಥಿತ್ಯಂತರದ ಪ್ರವಾಹದಲ್ಲಿ
ಉದ್ದಕ್ಕೆ ಏಳು ಅಡ್ಡಕ್ಕೆ ಐದು
ಸರಳುಗಳ ಕಿಟಕಿ
ಆಕಾರ ಕಳಚಿ ಹಗುರಾಗುತ್ತದೆ
ಮರಳಿ ಅದೇ ಅವಸ್ಥೆಗೆ ಬರುವವರೆಗೆ
ಖಾಲಿಯಾಗುತ್ತದೆ ಆದಾಗ
ಇಲ್ಲಿ ಏನೋ ಆಯಿತು ಅನುಭವದ ಹೊರಗೆ
ಎನಿಸುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇವಳು ನನ್ನವ್ವ
Next post ಅನುರಾಗ

ಸಣ್ಣ ಕತೆ

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…