Home / ಕವನ / ಕವಿತೆ / ಕಿಟಕಿ

ಕಿಟಕಿ

ಉದ್ದಕ್ಕೆ ಏಳು
ಅಡ್ಡಕ್ಕೆ ಐದು ಸರಳುಗಳ ಕಿಟಕಿಯ ಕೆಳಗೆ
ರೋಡು ಬಜಾರು ಮನೆ ಮಠ ಬಯಲು ಬಯಲು
ಆಚೆ ಸಮುದ್ರ ಏರಿಳಿತ ಕೊರೆತ ಮೊರೆತ ಈಚೆ
ಸಂತೆಗೆ ಹೋಗುವ ಹೊರೆಗಳ ಭಾರದ ಕೆಳ ಓರೆಕೋರೆ
ರೇಖೆಗಳಲ್ಲಿ ಅಸ್ತಿತ್ವಗೊಂಡು ಮೂಡಿ ಮಾಯುವ ಮುಖಗಳು

ಹರಿಯುತ್ತಿರುವ ವಸ್ತುಗಳು ಸರಿಯುತ್ತಿರುವ ಬೆಳಕುಗಳು
ವಿಸ್ತಾರಗೊಳ್ಳುವ ಸರಹದ್ದುಗಳು ಅಮೀಬ ಆಕೃತಿಗಳು ವಿಕೃತಿಗಳು
ಅಸ್ಪಷ್ಟ ಸ್ಥಿತಿಗಳ ಅಮೂರ್ತ ಒತ್ತಡಗಳು ಹೀಗೆ
ತೇಲಿ ಬರುತ್ತಿವೆ ಕಿಟಕಿಯೊಳಗೆ ಇಣಕುತ್ತಿವೆ
ಏನೊ ಅನ್ವೇಷಿಸುತ್ತವೆ ಎಡೆಬಿಡದೆ
ಅದರ ನಿರ್ದಯ ಜಡತೆ ನಿಷ್ಕ್ರಿಯಕ್ಕೆ ಅದರ
ಹೆಪ್ಪು ಥಂಡಿಗೆ ಅಲಿಪ್ತ ಮೌನಕ್ಕೆ ಕತ್ತಲೆಯ ಭಯಕ್ಕೆ
ತಟ್ಟುತ್ತಾ ಇರುತ್ತವೆ ಆಗ,

ಆ ಹೊರಗು ಒಳಕ್ಕೆ ಜರಿಯುತ್ತಿರುವಂತೆ
ಆ ಒಳಗು ಕದಡಿ ಸರಿದು ಹೊರಕ್ಕೆ ಲಯಿಸುತ್ತಿರುವಂತೆ
ಏಕಾಂತತೆ ಮತ್ತು ಸಂತೆ ಅತ್ತಿತ್ತ ಹೊಕ್ಕು ಬೆರೆತಂತೆ ಕ್ಷೆಣಗಳು
ಇಂಥ ಸ್ಥಿತ್ಯಂತರದ ಪ್ರವಾಹದಲ್ಲಿ
ಉದ್ದಕ್ಕೆ ಏಳು ಅಡ್ಡಕ್ಕೆ ಐದು
ಸರಳುಗಳ ಕಿಟಕಿ
ಆಕಾರ ಕಳಚಿ ಹಗುರಾಗುತ್ತದೆ
ಮರಳಿ ಅದೇ ಅವಸ್ಥೆಗೆ ಬರುವವರೆಗೆ
ಖಾಲಿಯಾಗುತ್ತದೆ ಆದಾಗ
ಇಲ್ಲಿ ಏನೋ ಆಯಿತು ಅನುಭವದ ಹೊರಗೆ
ಎನಿಸುತ್ತದೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...