ಬಿರುಕು

ಹೀಗೆ, ಹೀಗೆಯೇ ಇದ್ದೆ
ಒಂದಂಗುಲವೂ ಆಚೀಚೆ
ಹಾರದೆ ದಾಟದೆ
ಯಾರಿಟ್ಟರೋ ಶಾಪ
ಬರಿ ಪರಿತಾಪ
ಒಳಗಿಹುದೆಲ್ಲವೂ ಮಿಥ್ಯೆ
ಸೀತೆಗೂ ಒಮ್ಮೆ ಅಗ್ನಿ ಪರೀಕ್ಷೆ
ಗೆದ್ದರೂ ಗೆಲುವಲ್ಲ
ರಾಘವನದೇ ಪ್ರತೀಕ್ಷೆ
ಯಾವುದೋ ನಿರೀಕ್ಷೆ
ಗತಿತಪ್ಪಿದ ವಿವೇಚನೆ
ಜಮದಗ್ನಿಯ ರೇಣುಕೆ
ಉಳಿದುದೊಂದೇ ಮಾಯದ
ಮಾಸದ ಭಗ್ನಶಿಲೆ
ಚಿತ್ತಚಿತ್ತಾರದ ಕಲೆ
ಏನೂ ಆಗದ, ಆಗಲೂ
ಬಿಡದ ವರ್ಣರಂಜಿತ
ದೂರುದುಮ್ಮಾನಗಳ ಪಾತ್ರ
ಕ್ಷಣಕ್ಷಣಕ್ಕೂ ಚಿತ್ರವಧೆ
ಅರ್ಥವಾಗದ ಮೌನ
ಮತ್ಯಾರಿಗೊ ಸುಮ್ಮಾನ
ಎಂದೊ ಒಮ್ಮೆ
ನೆನಪಿನ ಕದಲಿಕೆ,
ನೆನಪ ಹೂತು
ಗೋರಿಕಟ್ಟುವ ಬಯಕೆ
ಕಟ್ಟುವ ಗೋರಿಯಲ್ಲಿಯೇ ಬಿರುಕು
ಚೇ, ಈ ನೆನಪಿಗೆಂತಹ ಛಳಕು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಕ್ಕಡಗಳು
Next post ಮುಖಗಳು

ಸಣ್ಣ ಕತೆ

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

cheap jordans|wholesale air max|wholesale jordans|wholesale jewelry|wholesale jerseys