ಹೀಗೆ, ಹೀಗೆಯೇ ಇದ್ದೆ
ಒಂದಂಗುಲವೂ ಆಚೀಚೆ
ಹಾರದೆ ದಾಟದೆ
ಯಾರಿಟ್ಟರೋ ಶಾಪ
ಬರಿ ಪರಿತಾಪ
ಒಳಗಿಹುದೆಲ್ಲವೂ ಮಿಥ್ಯೆ
ಸೀತೆಗೂ ಒಮ್ಮೆ ಅಗ್ನಿ ಪರೀಕ್ಷೆ
ಗೆದ್ದರೂ ಗೆಲುವಲ್ಲ
ರಾಘವನದೇ ಪ್ರತೀಕ್ಷೆ
ಯಾವುದೋ ನಿರೀಕ್ಷೆ
ಗತಿತಪ್ಪಿದ ವಿವೇಚನೆ
ಜಮದಗ್ನಿಯ ರೇಣುಕೆ
ಉಳಿದುದೊಂದೇ ಮಾಯದ
ಮಾಸದ ಭಗ್ನಶಿಲೆ
ಚಿತ್ತಚಿತ್ತಾರದ ಕಲೆ
ಏನೂ ಆಗದ, ಆಗಲೂ
ಬಿಡದ ವರ್ಣರಂಜಿತ
ದೂರುದುಮ್ಮಾನಗಳ ಪಾತ್ರ
ಕ್ಷಣಕ್ಷಣಕ್ಕೂ ಚಿತ್ರವಧೆ
ಅರ್ಥವಾಗದ ಮೌನ
ಮತ್ಯಾರಿಗೊ ಸುಮ್ಮಾನ
ಎಂದೊ ಒಮ್ಮೆ
ನೆನಪಿನ ಕದಲಿಕೆ,
ನೆನಪ ಹೂತು
ಗೋರಿಕಟ್ಟುವ ಬಯಕೆ
ಕಟ್ಟುವ ಗೋರಿಯಲ್ಲಿಯೇ ಬಿರುಕು
ಚೇ, ಈ ನೆನಪಿಗೆಂತಹ ಛಳಕು
*****
Related Post
ಸಣ್ಣ ಕತೆ
-
ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು
ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…
-
ದೇವರು ಮತ್ತು ಅಪಘಾತ
ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…
-
ಅಜ್ಜಿ-ಮೊಮ್ಮಗ
ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…
-
ಗೋಪಿ
ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…
-
ಗದ್ದೆ
ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…