ಹೀಗೆ, ಹೀಗೆಯೇ ಇದ್ದೆ
ಒಂದಂಗುಲವೂ ಆಚೀಚೆ
ಹಾರದೆ ದಾಟದೆ
ಯಾರಿಟ್ಟರೋ ಶಾಪ
ಬರಿ ಪರಿತಾಪ
ಒಳಗಿಹುದೆಲ್ಲವೂ ಮಿಥ್ಯೆ
ಸೀತೆಗೂ ಒಮ್ಮೆ ಅಗ್ನಿ ಪರೀಕ್ಷೆ
ಗೆದ್ದರೂ ಗೆಲುವಲ್ಲ
ರಾಘವನದೇ ಪ್ರತೀಕ್ಷೆ
ಯಾವುದೋ ನಿರೀಕ್ಷೆ
ಗತಿತಪ್ಪಿದ ವಿವೇಚನೆ
ಜಮದಗ್ನಿಯ ರೇಣುಕೆ
ಉಳಿದುದೊಂದೇ ಮಾಯದ
ಮಾಸದ ಭಗ್ನಶಿಲೆ
ಚಿತ್ತಚಿತ್ತಾರದ ಕಲೆ
ಏನೂ ಆಗದ, ಆಗಲೂ
ಬಿಡದ ವರ್ಣರಂಜಿತ
ದೂರುದುಮ್ಮಾನಗಳ ಪಾತ್ರ
ಕ್ಷಣಕ್ಷಣಕ್ಕೂ ಚಿತ್ರವಧೆ
ಅರ್ಥವಾಗದ ಮೌನ
ಮತ್ಯಾರಿಗೊ ಸುಮ್ಮಾನ
ಎಂದೊ ಒಮ್ಮೆ
ನೆನಪಿನ ಕದಲಿಕೆ,
ನೆನಪ ಹೂತು
ಗೋರಿಕಟ್ಟುವ ಬಯಕೆ
ಕಟ್ಟುವ ಗೋರಿಯಲ್ಲಿಯೇ ಬಿರುಕು
ಚೇ, ಈ ನೆನಪಿಗೆಂತಹ ಛಳಕು
*****
Related Post
ಸಣ್ಣ ಕತೆ
-
ಧರ್ಮಸಂಸ್ಥಾಪನಾರ್ಥಾಯ
ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…
-
ಇನ್ನೊಬ್ಬ
ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…
-
ಹೃದಯ ವೀಣೆ ಮಿಡಿಯೆ….
ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…
-
ಹೃದಯದ ತೀರ್ಪು
ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…
-
ಉಪ್ಪು
ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…