ರಸಿಕ ಕವಿಗೆ….

ಶತಶತಮಾನಗಳಿಂದ
ನಿನಗ ‘ಅವಳು’
ಅರ್ಥವಾದದ್ದೆಷ್ಟು?
ಬರೀ ಇಷ್ಟೇ ಇಷ್ಟು!

ಸಾಕಪ್ಪ ಸಾಕು ನಿನ್ನೀ
ಕಾಗಕ್ಕ-ಗುಬ್ಬಕ್ಕನ ಕಥೆ
‘ಅವಳ’ ಅಂಗಾಂಗ ವರ್ಣಿಸುತ್ತಾ
ನಿನ್ನದೇ ಅತೃಪ್ತ ಕಾಮನೆ ತಣಿಸುತ್ತಾ
ಅಡ್ಡಹಾದಿಗೆಳೆವ ರಸಿಕತೆ!

ಆ ಸಂಸ್ಕೃತ ಕವಿಗಳ ಅಪರಾವತಾರ
ಹೇಳಿದ್ದೇ ಪರಾಕು
ಮತ್ತೆ ಮತ್ತೆ ಹೇಳುವ ಶೂರ!

ನೀ ಏನೇ ಹೇಳು
ಎರಡೆರಡಲಿ ನಾಲ್ಕು
ಆಗುತ್ತದೆಯೇ ಹದಿನಾಲ್ಕು?
ಹತ್ತಾರು ಗೋಡೆಗೆ ಒಂದೇ ಮಾಡು
ನೂರಾರು ಕಡ್ಡಿಗಳ ಹಿಡಿದಿಟ್ಟಿದೆ
ಪೊರಕೆಯೊಂದರ ನೂಲು
ಕಾಣುವ ಮುಖವೊಂದಕ್ಕೆ
ಕಾಣದ ಭಾವಗಳೆನಿತೋ
ಬಲ್ಲವರು ಯಾರು?

ತಿರುಳು ಬಿಟ್ಟು ಕರಟ ಹೆರೆವ
ನಿನ್ನ ಈ ಪರಿಗೆ ನಗಲೇ?
ಅಳಲೇ?
ಶತಶತಮಾನಗಳಿಂದ ನಿನಗೆ ‘ಅವಳು’
ಅರ್ಥವಾದದ್ದೆಷ್ಟು?
ಬರೀ ಇಷ್ಟೇ ಇಷ್ಟು!

ಒಮ್ಮೆ ಕಣ್ಮುಚ್ಚಿ ಮನವ ತೆರೆದಿಡು
‘ಖುಲ್ ಜ್ಹಾ ಸಿಮ್ ಸಿಮ್’ ಹಾಡು
ನಿಜಕ್ಕೂ ಧೈರ್ಯವಿದ್ದರೆ
ಆಳದಲ್ಲೇ ಹುದುಗಿ ಹೋದ
‘ಅವಳ’ ಭಾವಗಳ ಅರ್ಥೈಸಲು ನೋಡು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಮಾಜ
Next post ಅಸಹಾಯಕತೆ

ಸಣ್ಣ ಕತೆ

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

cheap jordans|wholesale air max|wholesale jordans|wholesale jewelry|wholesale jerseys