ಕಲ್ಲು ಬಿದ್ದ ಕೊಳ

ಕೂತಲ್ಲಿ ಕೂಡಲಾರದ
ನಿಂತಲ್ಲಿ ನಿಲಲಾರದ ಮನವೀಗ
ಕಲ್ಲು ಬಿದ್ದ ಕೊಳ
ಅವನನ್ನು ಹಾಗೆ ನೋಡಿದ್ದೇ ತಪ್ಪಾಯಿತೆ?
ಆ ಕಣ್ಣುಗಳಲ್ಲಿ ಚಾಕು ಚೂರಿಗಳಿದ್ದದ್ದು
ನನಗಾದರೂ ಏನು ಗೊತ್ತಿತ್ತು…?

ಗೋಡೆಗಳು ಕೇಳಿಸಿಕೊಳ್ಳುವುದು
ಹಲ್ಲಿಗಳು ಮಾತನಾಡುವುದು
ಅದನ್ನೇ ಸಾಕ್ಷಿಯೆಂದು ನಂಬುವುದು
ರಸ್ತೆಗಳೇ ಕಟಕಟೆಗಳಾಗುವುದು
ಕಣ್ಣಿದ್ದವರೆಲ್ಲಾ ಜಾಣ ಕುರುಡರಾಗಿರುವುದು
ನಟನೆಯೇ ಬದುಕಾಗಿರುವುದು
ಎಲ್ಲಾ ಹೆಣ್ಣಿಗೆ ಬರೆದ ಸಂವಿಧಾನ?

ಕಟ್ಟಿಕೊಂಡವ
ಕಾದ ಹೆಂಚಿನ ಮೇಲೆ
ನಾಲ್ಕು ಹನಿ
ಹಲ್ಲಿಯಂತೆ ಹೊಯ್ಯದೇ
ಉತ್ತರೆಯ ಮಳೆಯಾಗಿದ್ದರೆ….?
ಯಾರದೋ ಮುತ್ತು
ಈ ಒಡಲ ಚಿಪ್ಪಿನೊಳಗೆ ಫಳ್ ಅಂತ
ಹೊಳೆದು
ರಾಡಿ ರಂಪ ಎಬ್ಬಿಸುತ್ತಿರಲಿಲ್ಲ

ಕುಂತಿ ಗಾಂಧಾರಿಯರು
ಬೇಡವೆಂದರೂ ನೆನಪಾಗುತ್ತಾರೆ
ಕಣ್ಣು ಹೊರಳಿಸಿದ ಕಡೆ ನಿಂತು
ಸೆರಗು ಬಾಯಲಿ ಕಚ್ಚಿ
ನಗುತ್ತಾರೆ
ನನಗೋ ಕಣ್ಣು ತುಂಬಾ
ಉಪ್ಪು ಕಡಲು

ಕತ್ತಲ ರಾತ್ರಿಗಳ ಹೆರುವ
ನಾಳೆಗಳು
‘ಅಮ್ಮಾಽಽಽ’ ಎಂದರೆ
ತುಂಬಿದೊಡಲ ಮೇಲೆ ಅರಿವಿಲ್ಲದೇ
ಹರಿವ ನಡುಗುವ ಕೈಗಳು
ಮಿಸುಕಾಡುವ ಎಳೆಯ ಕನಸು ತಾಕಿ
ಹಣೆಯ ಮೇಲೆ ಬೆವರ ಸಾಲು

ಅವುಗಳನ್ನೂ ಯಾರಾದರೂ ಮುತ್ತೆಂದು
ಕರೆದುಬಿಟ್ಟರೆ?
ಛೆ! ಎಂಥ ರೂಪಕ
ಎಂದು ನಕ್ಕು ಸುಮ್ಮನಾಗಲೇ
ಅಥವಾ ಅತ್ತು ಕೂಗಲೇ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಈ ಆಗಸ ಈ ತಾರೆ
Next post ಡ್ರಿಂಕ್ಸ್ ಬೇಕಾ

ಸಣ್ಣ ಕತೆ

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…