ಕಲ್ಲು ಬಿದ್ದ ಕೊಳ

ಕೂತಲ್ಲಿ ಕೂಡಲಾರದ
ನಿಂತಲ್ಲಿ ನಿಲಲಾರದ ಮನವೀಗ
ಕಲ್ಲು ಬಿದ್ದ ಕೊಳ
ಅವನನ್ನು ಹಾಗೆ ನೋಡಿದ್ದೇ ತಪ್ಪಾಯಿತೆ?
ಆ ಕಣ್ಣುಗಳಲ್ಲಿ ಚಾಕು ಚೂರಿಗಳಿದ್ದದ್ದು
ನನಗಾದರೂ ಏನು ಗೊತ್ತಿತ್ತು…?

ಗೋಡೆಗಳು ಕೇಳಿಸಿಕೊಳ್ಳುವುದು
ಹಲ್ಲಿಗಳು ಮಾತನಾಡುವುದು
ಅದನ್ನೇ ಸಾಕ್ಷಿಯೆಂದು ನಂಬುವುದು
ರಸ್ತೆಗಳೇ ಕಟಕಟೆಗಳಾಗುವುದು
ಕಣ್ಣಿದ್ದವರೆಲ್ಲಾ ಜಾಣ ಕುರುಡರಾಗಿರುವುದು
ನಟನೆಯೇ ಬದುಕಾಗಿರುವುದು
ಎಲ್ಲಾ ಹೆಣ್ಣಿಗೆ ಬರೆದ ಸಂವಿಧಾನ?

ಕಟ್ಟಿಕೊಂಡವ
ಕಾದ ಹೆಂಚಿನ ಮೇಲೆ
ನಾಲ್ಕು ಹನಿ
ಹಲ್ಲಿಯಂತೆ ಹೊಯ್ಯದೇ
ಉತ್ತರೆಯ ಮಳೆಯಾಗಿದ್ದರೆ….?
ಯಾರದೋ ಮುತ್ತು
ಈ ಒಡಲ ಚಿಪ್ಪಿನೊಳಗೆ ಫಳ್ ಅಂತ
ಹೊಳೆದು
ರಾಡಿ ರಂಪ ಎಬ್ಬಿಸುತ್ತಿರಲಿಲ್ಲ

ಕುಂತಿ ಗಾಂಧಾರಿಯರು
ಬೇಡವೆಂದರೂ ನೆನಪಾಗುತ್ತಾರೆ
ಕಣ್ಣು ಹೊರಳಿಸಿದ ಕಡೆ ನಿಂತು
ಸೆರಗು ಬಾಯಲಿ ಕಚ್ಚಿ
ನಗುತ್ತಾರೆ
ನನಗೋ ಕಣ್ಣು ತುಂಬಾ
ಉಪ್ಪು ಕಡಲು

ಕತ್ತಲ ರಾತ್ರಿಗಳ ಹೆರುವ
ನಾಳೆಗಳು
‘ಅಮ್ಮಾಽಽಽ’ ಎಂದರೆ
ತುಂಬಿದೊಡಲ ಮೇಲೆ ಅರಿವಿಲ್ಲದೇ
ಹರಿವ ನಡುಗುವ ಕೈಗಳು
ಮಿಸುಕಾಡುವ ಎಳೆಯ ಕನಸು ತಾಕಿ
ಹಣೆಯ ಮೇಲೆ ಬೆವರ ಸಾಲು

ಅವುಗಳನ್ನೂ ಯಾರಾದರೂ ಮುತ್ತೆಂದು
ಕರೆದುಬಿಟ್ಟರೆ?
ಛೆ! ಎಂಥ ರೂಪಕ
ಎಂದು ನಕ್ಕು ಸುಮ್ಮನಾಗಲೇ
ಅಥವಾ ಅತ್ತು ಕೂಗಲೇ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಈ ಆಗಸ ಈ ತಾರೆ
Next post ಡ್ರಿಂಕ್ಸ್ ಬೇಕಾ

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…