ಹರಿದ ಜೋಳಿಗೆ ತುಂಬ

ಮಸಿ ಬಟ್ಟೆ ಆ ಹುಡುಗ
ಆ ಹುಡುಗ ಮಸಿ ಬಟ್ಟೆ
ಬರಿಗಾಲಲಿ
ಬೀದಿ ಬೀದಿ ಸುತ್ತುತ್ತಾ
‘ಸಾಕು’
ಎಂದೆಸೆದದ್ದ
ಎತ್ತಿಕೊಳ್ಳುತ್ತಾನೆ ಹುಡುಕಿ
ತುತ್ತಿನಂತೆ

ಕುಡಿದು ಬಿಸುಟ ಖಾಲಿ
ಬಾಟಲು
ಕತ್ತರಿಸಿ ಒಗೆದ ‘ಡೈರಿ’
ಹಾಲಿನ ಪಾಕೆಟ್ಟು
ತುಕ್ಕು ಹಿಡಿದ ಸೈಕಲ್ಲಿನ
‘ಮಡ್‌ಗಾರ್ಡು’
ಒಡೆದು ಹೋದ ‘ಪ್ಲಾಸ್ಪಿಕ್ಕು
ಜಗ್ಗು ಬಕೆಟ್ಟು’
ಆಡಿ ಎಸೆದ ಮುರಿದ
ಗೊಂಬೆಗಳು
ರಟ್ಟಿನ ಡಬ್ಬಿ
ಹಿಟ್ಟಿನ ಪುಟ್ಟಿ
ಸುದ್ದಿ ಹೇಳುವ ಹಾಳೆ…
ಅವನ ಹಸಿದ
ಹರಕು
ಜೋಳಿಗೆಗೆ ಅಂದು ಮೃಷ್ಟಾನ್ನ

ವಿಷಣ್ಣ ವದನದ ಎರಡು
ಸೋಡಾ ಗೋಲಿಯಲಿ
ಆಟೋಗೆ ಜೋತು ಬಿದ್ದು
ತೂಗುವ
ಅಮ್ಮನ ಕಿರುಬೆರಳು ಹಿಡಿದು
ಜಗ್ಗುವ
ಸ್ಕೂಟರನೇರಿ ಬೆನ್ನು ಬಳಸಿ
ಕುಳಿತ
ಗೆಳೆಯರ ಕೈ ಹಿಡಿದು
ಹಾರಿ ಬರುವ
ಹಿಂಡು ಗುಬ್ಬಿಗಳ
ಬೆನ್ನ ಮೇಲೆ
ಕನಸು
ತುಂಬಿದ ಪಾಟಿ ಚೀಲ.

ಅರೆಕ್ಷಣ ಮೈ ಮರೆತು
ನಿಂತಲ್ಲೇ
ನಿಟ್ಟುಸಿರೊಂದು ಹಾದು
ಕಣ್ಣು ಕೊಳವಾಗುವದು

ನಿಂತರೆ ಕೆಡುವುದು ಕೆಲಸ
ನಡೆ
ನಾಲ್ಕು ಬೈಗಳು
ಇರಿವ ಕಣ್ಣೋಟಗಳ ನಡುವೆ
ಹುಡುಕು
ಸಂದಿಗೊಂದಿಯ ತಿರುಗು
ಮನೆಯ ಹಿತ್ತಲಲಿ ಚೂರು
ಕಬ್ಬಿಣ
ಮುರುಕು ತಗಡು
ಹರಕು ಚಪಲಿ
ಬಾಯೊಳಗೊಂದು ಬಳಸಿದ
ಕಾಂಡೋಮ್
ಉಬ್ಬಿದ ಬಲೂನಿನ ತುದಿಗೆ
ತುಣುಕು ಸೂರ್ಯ
ಒಣಗಿದ ಗಂಟಲಿಗೆ ಬೊಗಸೆ ನೀರು
ಸೋತ ಕಾಲ್ಗಳಿಗೆ ಬೀದಿ ಬದಿಯ
‘ಗುಲ್ಮೊಹರ್’ ನೆರಳು

ಕತ್ತಲಾಗುವ ಮುನ್ನ
ಪುಟ್ಟ
ಗುಡಿಸಲ ಮಿಣುಕು ದೀಪ
ಹಚ್ಚಬೇಕು ಒಲೆ
ತಣಿಸಬೇಕು ಹಸಿದ ಒಡಲು

ಮರುದಿನ
ಸೂರ್ಯ
ಹರಿದ ಜೋಳಿಗೆ
ಹೆಕ್ಕಿ ತುಂಬಬೇಕು ಕನಸುಗಳ…

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾವಿರ ನೇತ್ರದ ಸಾವಿರ ಪಾತ್ರದ
Next post ಕಳೆದ ಕಾಲವ ಗುಣಿಸಿ ಏಕೆ ಕೊರಗುವೆ?

ಸಣ್ಣ ಕತೆ

  • ನೆಮ್ಮದಿ

    ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…