Home / ಕವನ / ಕವಿತೆ / ಹರಿದ ಜೋಳಿಗೆ ತುಂಬ

ಹರಿದ ಜೋಳಿಗೆ ತುಂಬ

ಮಸಿ ಬಟ್ಟೆ ಆ ಹುಡುಗ
ಆ ಹುಡುಗ ಮಸಿ ಬಟ್ಟೆ
ಬರಿಗಾಲಲಿ
ಬೀದಿ ಬೀದಿ ಸುತ್ತುತ್ತಾ
‘ಸಾಕು’
ಎಂದೆಸೆದದ್ದ
ಎತ್ತಿಕೊಳ್ಳುತ್ತಾನೆ ಹುಡುಕಿ
ತುತ್ತಿನಂತೆ

ಕುಡಿದು ಬಿಸುಟ ಖಾಲಿ
ಬಾಟಲು
ಕತ್ತರಿಸಿ ಒಗೆದ ‘ಡೈರಿ’
ಹಾಲಿನ ಪಾಕೆಟ್ಟು
ತುಕ್ಕು ಹಿಡಿದ ಸೈಕಲ್ಲಿನ
‘ಮಡ್‌ಗಾರ್ಡು’
ಒಡೆದು ಹೋದ ‘ಪ್ಲಾಸ್ಪಿಕ್ಕು
ಜಗ್ಗು ಬಕೆಟ್ಟು’
ಆಡಿ ಎಸೆದ ಮುರಿದ
ಗೊಂಬೆಗಳು
ರಟ್ಟಿನ ಡಬ್ಬಿ
ಹಿಟ್ಟಿನ ಪುಟ್ಟಿ
ಸುದ್ದಿ ಹೇಳುವ ಹಾಳೆ…
ಅವನ ಹಸಿದ
ಹರಕು
ಜೋಳಿಗೆಗೆ ಅಂದು ಮೃಷ್ಟಾನ್ನ

ವಿಷಣ್ಣ ವದನದ ಎರಡು
ಸೋಡಾ ಗೋಲಿಯಲಿ
ಆಟೋಗೆ ಜೋತು ಬಿದ್ದು
ತೂಗುವ
ಅಮ್ಮನ ಕಿರುಬೆರಳು ಹಿಡಿದು
ಜಗ್ಗುವ
ಸ್ಕೂಟರನೇರಿ ಬೆನ್ನು ಬಳಸಿ
ಕುಳಿತ
ಗೆಳೆಯರ ಕೈ ಹಿಡಿದು
ಹಾರಿ ಬರುವ
ಹಿಂಡು ಗುಬ್ಬಿಗಳ
ಬೆನ್ನ ಮೇಲೆ
ಕನಸು
ತುಂಬಿದ ಪಾಟಿ ಚೀಲ.

ಅರೆಕ್ಷಣ ಮೈ ಮರೆತು
ನಿಂತಲ್ಲೇ
ನಿಟ್ಟುಸಿರೊಂದು ಹಾದು
ಕಣ್ಣು ಕೊಳವಾಗುವದು

ನಿಂತರೆ ಕೆಡುವುದು ಕೆಲಸ
ನಡೆ
ನಾಲ್ಕು ಬೈಗಳು
ಇರಿವ ಕಣ್ಣೋಟಗಳ ನಡುವೆ
ಹುಡುಕು
ಸಂದಿಗೊಂದಿಯ ತಿರುಗು
ಮನೆಯ ಹಿತ್ತಲಲಿ ಚೂರು
ಕಬ್ಬಿಣ
ಮುರುಕು ತಗಡು
ಹರಕು ಚಪಲಿ
ಬಾಯೊಳಗೊಂದು ಬಳಸಿದ
ಕಾಂಡೋಮ್
ಉಬ್ಬಿದ ಬಲೂನಿನ ತುದಿಗೆ
ತುಣುಕು ಸೂರ್ಯ
ಒಣಗಿದ ಗಂಟಲಿಗೆ ಬೊಗಸೆ ನೀರು
ಸೋತ ಕಾಲ್ಗಳಿಗೆ ಬೀದಿ ಬದಿಯ
‘ಗುಲ್ಮೊಹರ್’ ನೆರಳು

ಕತ್ತಲಾಗುವ ಮುನ್ನ
ಪುಟ್ಟ
ಗುಡಿಸಲ ಮಿಣುಕು ದೀಪ
ಹಚ್ಚಬೇಕು ಒಲೆ
ತಣಿಸಬೇಕು ಹಸಿದ ಒಡಲು

ಮರುದಿನ
ಸೂರ್ಯ
ಹರಿದ ಜೋಳಿಗೆ
ಹೆಕ್ಕಿ ತುಂಬಬೇಕು ಕನಸುಗಳ…

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...