ಹರಿದ ಜೋಳಿಗೆ ತುಂಬ

ಮಸಿ ಬಟ್ಟೆ ಆ ಹುಡುಗ
ಆ ಹುಡುಗ ಮಸಿ ಬಟ್ಟೆ
ಬರಿಗಾಲಲಿ
ಬೀದಿ ಬೀದಿ ಸುತ್ತುತ್ತಾ
‘ಸಾಕು’
ಎಂದೆಸೆದದ್ದ
ಎತ್ತಿಕೊಳ್ಳುತ್ತಾನೆ ಹುಡುಕಿ
ತುತ್ತಿನಂತೆ

ಕುಡಿದು ಬಿಸುಟ ಖಾಲಿ
ಬಾಟಲು
ಕತ್ತರಿಸಿ ಒಗೆದ ‘ಡೈರಿ’
ಹಾಲಿನ ಪಾಕೆಟ್ಟು
ತುಕ್ಕು ಹಿಡಿದ ಸೈಕಲ್ಲಿನ
‘ಮಡ್‌ಗಾರ್ಡು’
ಒಡೆದು ಹೋದ ‘ಪ್ಲಾಸ್ಪಿಕ್ಕು
ಜಗ್ಗು ಬಕೆಟ್ಟು’
ಆಡಿ ಎಸೆದ ಮುರಿದ
ಗೊಂಬೆಗಳು
ರಟ್ಟಿನ ಡಬ್ಬಿ
ಹಿಟ್ಟಿನ ಪುಟ್ಟಿ
ಸುದ್ದಿ ಹೇಳುವ ಹಾಳೆ…
ಅವನ ಹಸಿದ
ಹರಕು
ಜೋಳಿಗೆಗೆ ಅಂದು ಮೃಷ್ಟಾನ್ನ

ವಿಷಣ್ಣ ವದನದ ಎರಡು
ಸೋಡಾ ಗೋಲಿಯಲಿ
ಆಟೋಗೆ ಜೋತು ಬಿದ್ದು
ತೂಗುವ
ಅಮ್ಮನ ಕಿರುಬೆರಳು ಹಿಡಿದು
ಜಗ್ಗುವ
ಸ್ಕೂಟರನೇರಿ ಬೆನ್ನು ಬಳಸಿ
ಕುಳಿತ
ಗೆಳೆಯರ ಕೈ ಹಿಡಿದು
ಹಾರಿ ಬರುವ
ಹಿಂಡು ಗುಬ್ಬಿಗಳ
ಬೆನ್ನ ಮೇಲೆ
ಕನಸು
ತುಂಬಿದ ಪಾಟಿ ಚೀಲ.

ಅರೆಕ್ಷಣ ಮೈ ಮರೆತು
ನಿಂತಲ್ಲೇ
ನಿಟ್ಟುಸಿರೊಂದು ಹಾದು
ಕಣ್ಣು ಕೊಳವಾಗುವದು

ನಿಂತರೆ ಕೆಡುವುದು ಕೆಲಸ
ನಡೆ
ನಾಲ್ಕು ಬೈಗಳು
ಇರಿವ ಕಣ್ಣೋಟಗಳ ನಡುವೆ
ಹುಡುಕು
ಸಂದಿಗೊಂದಿಯ ತಿರುಗು
ಮನೆಯ ಹಿತ್ತಲಲಿ ಚೂರು
ಕಬ್ಬಿಣ
ಮುರುಕು ತಗಡು
ಹರಕು ಚಪಲಿ
ಬಾಯೊಳಗೊಂದು ಬಳಸಿದ
ಕಾಂಡೋಮ್
ಉಬ್ಬಿದ ಬಲೂನಿನ ತುದಿಗೆ
ತುಣುಕು ಸೂರ್ಯ
ಒಣಗಿದ ಗಂಟಲಿಗೆ ಬೊಗಸೆ ನೀರು
ಸೋತ ಕಾಲ್ಗಳಿಗೆ ಬೀದಿ ಬದಿಯ
‘ಗುಲ್ಮೊಹರ್’ ನೆರಳು

ಕತ್ತಲಾಗುವ ಮುನ್ನ
ಪುಟ್ಟ
ಗುಡಿಸಲ ಮಿಣುಕು ದೀಪ
ಹಚ್ಚಬೇಕು ಒಲೆ
ತಣಿಸಬೇಕು ಹಸಿದ ಒಡಲು

ಮರುದಿನ
ಸೂರ್ಯ
ಹರಿದ ಜೋಳಿಗೆ
ಹೆಕ್ಕಿ ತುಂಬಬೇಕು ಕನಸುಗಳ…

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾವಿರ ನೇತ್ರದ ಸಾವಿರ ಪಾತ್ರದ
Next post ಕಳೆದ ಕಾಲವ ಗುಣಿಸಿ ಏಕೆ ಕೊರಗುವೆ?

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

cheap jordans|wholesale air max|wholesale jordans|wholesale jewelry|wholesale jerseys