ಇನ್ನೆಷ್ಟು ದಿನ ಹೀಗೆ?

ಇನ್ನೆಷ್ಟು ದಿನ ಹೀಗೆ?
ಗಾಣಕ್ಕೆ ಕಟ್ಟಿದ ಎತ್ತಿನಂತೆ
ಸುಮ್ಮನಿರುವುದು

ಗೆದ್ದಲು ಕಟ್ಟದ ಹುತ್ತದೊಳಗೆ
ಹಾವೊಂದು
ಬೆಚ್ಚಗೆ ನಿದ್ರಿಸುವುದು

ಕಾಗೆ ಇಟ್ಟ ಮೊಟ್ಟೆಗಳ ನಡುವೆ
ಕೋಗಿಲೆಯೊಂದು
ತಣ್ಣಗೆ ಮರಿಯಾಗುವುದು

ರೊಟ್ಟಿ ಕದ್ದು ಓಡಿಹೋದ ನಾಯಿಯನ್ನು
ತೋಳವೊಂದು
ಸದ್ದಿಲ್ಲದೆ ನುಂಗಿಬಿಡುವುದು

ಇನ್ನೆಷ್ಟು ದಿನ
ಮಿಸುಕಾಡದ ದೇವರುಗಳ ಮುಂದೆ
ಹರಕೆ ಹೊರುವುದು.
ಹೊಲಸು ಹಾದಿಗಳ ಮೇಲೆ
ಚಿಂದಿಯುಟ್ಟು ಉರುಳುವುದು
ತಲೆ ಬೋಳಿಸಿಕೊಳ್ಳುವುದು
ಸತ್ತ ಮೇಲೂ ಸಾಯುವುದು?

ಕಪ್ಪು ದೇಹಗಳ
ಕೆಂಪಾಗಿಸುವ ಕುಲುಮೆಯೊಳಗೆ
ಬಿದ್ದು ಬೇಯಬೇಕು
ಪಡೆಯಬೇಕು
ಹಾರೆ ಗುದ್ದಲಿಗಳ ರೂಪ
ಹರಿತ ಕೊಡಲಿಯ ಚೂಪ

ನಾವೂ ಆಡೋಣ ಒಮ್ಮೆ
ಕಾಲ್ಚೆಂಡಿನಾಟ
ರಕ್ಕಸರ ರುಂಡ ಕಡಿದು
ಮುಳ್ಳು ಬೇಲಿಯ ಕಿತ್ತು
ಕಸಗುಡಿಸಿ
ಹಸನು ಮಾಡಿದ
ಮೈದಾನದೊಳಗೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನು ನಾನೆಂಬ ಹಮ್ಮಿನಲಿ ಬೀಗಿ
Next post ನಮೋ ದೇವಿ ನಮೋ ತಾಯಿ

ಸಣ್ಣ ಕತೆ

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…