Home / ಕವನ / ಕವಿತೆ / ಹುಚ್ಚುನಾಯಿ ಬಂದು ಕಚ್ಚುತಿಹುದು ತಂಗಿ

ಹುಚ್ಚುನಾಯಿ ಬಂದು ಕಚ್ಚುತಿಹುದು ತಂಗಿ

ಹುಚ್ಚುನಾಯಿ ಬಂದು ಕಚ್ಚುತಿಹುದು ತಂಗಿ
ಎಚ್ಚರವಿರಲಿ ದಾರಿಹಿಡಿದು ನಡಿ || ಪ ||

ಅಚ್ಯತನೊಳು ಸೇರಿ ಅಜನ ತಲಿಗೆ ಹಾರಿ
ಹೆಚ್ಚಿನ ಋಷಿಗಳ ಬೆನ್ನತ್ತಿ ಕಾಡುವದಿದು || ಅ. ಪ. ||

ಹರನ ಕಡಿದು ಕೈಯೊಳು ಕೊಡಿಸಿ ಕಪಾಲವ
ಭರದಿಂದ ಭಿಕ್ಷಕೆ ದೂಡಿತಿದು
ಸುರಲೋಕಕ್ಹೋಗಿ ಇಂದ್ರನ ಸರೀರದಿ ಬಹು-
ಪರಿ ಛಿದ್ರವ ಮೂಡಿಸಿತಿದು || ೧ ||

ನರ ಪಾಂಡುಪುತ್ರರೊಳು ಬೆರೆದು ಆರೋಗ್ಯದಿ
ಪರಿಭವಗೆಟ್ಟು ತಿರುತಿರುಗಾಡಿತಿದು
ಧರೆಯೊಳು ಗುಲಗಂಜಿಕೊಪ್ಪದೊಳಿರುವಂಥಾ
ಕುರಿಗಳ ಕಡಿದಬ್ಬರಿಸುತ ಬರುತದೆ || ೨ ||

ಯಾಕೆ ಬಂದೆವು ಈ ಊರೊಳಗದ್ಭುತ
ಸಾಕಿದಾವಿನಕರ ಕಡಿದಿತಂತೆ
ಬಾ ಕಂಡ್ಯಾ ಲಕ್ಷ್ಮೀಪುರಕೆ ಹೋಗುವ ಮಾರ್ಗದಿ
ಬೇಕೆಂದು ನಿಂತಡ್ಡಗಟ್ಟಿ ಬೊಗಳುವದೊ || ೩ ||

ನಾಲ್ಕುಮಂದಿ ನಾವು ಏಕಾಗಿ ಹೋಗೋನು
ಜೋಕೆಯಿಂದದರಕಡೆ ನೋಡದಂತೆ
ಕಾಕುಜನರಿಗೆ ಕಣ್ಣಿಟ್ಟರೆ ಬಿಡದಮ್ಮಾ
ನೀ ಕೇಳೆ ಗೆಳತಿ ಇಲ್ಲ್ಯಾಕ ಕುಂತಿ || ೪ ||

ಬಳಲಿಸುವದು ಬ್ರಹ್ಮಾಂಡದೊಳಗೆ ಇನ್ನ
ಉಳಿಯೋದು ಕಷ್ಟ ನಾ ಯಾರಿಗ್ಹೇಳಲಿ
ಲಲನಾಮಣಿಯೆ ಅಚ್ಚಬಿಳೇದು ದೊಂಡೇದಬಾಲಾ
ತಿಳುನಡಾ ಜೋಲ್ಗಿವಿಯ ಬಾವಲಿ || ೫ ||

ಇಳಿಯೊಳೆಲ್ಲರ ಹಲ್ಲಲ್ಲ್ಹಿಡಿದು ಸವರುತ
ತಳಮಳಗೊಳಿಸಿತಿನ್ನ್ಯಾಂಗ ತಾಳಲಿ
ಚಲ್ವ ಶಿಶುನಾಳಧೀಶನೊಲಿಮಿಯಿಂದ
ತಿಳಿದು ಜ್ಞಾನದ ಮನಿಯೊಳಡಗಿರು ಕಂಡ್ಯಾ || ೬ ||

 

Tagged:

Leave a Reply

Your email address will not be published. Required fields are marked *

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...

ಶೋಭಾ, ನಿನ್ನ ಎಲ್ಲಾ ಕಾಗದಗಳೂ ತಲುಪಿವೆ. ಓದುತ್ತಲೂ ಇದ್ದೇನೆ. ‘ತಂಪೆರೆಯುವ ನಿನ್ನ ಕಾಗದಗಳನ್ನು ದಿನಾ ಎದುರು ನೋಡುತ್ತಿರುತ್ತೇನೆ. ಅಬ್ಬಾ! ಎಷ್ಟು ಪ್ರಶ್ನೆಗಳನ್ನು ಕೇಳಿದ್ದೀಯಾ? ಬರೆಯುವ ಶಕ್ತಿ ಬರಲೀಂತ ಕಾಯ್ತಾ ಇದ್ದೆ. ಮಾನಸಿಕ ವಿಪ್ಲವದಲ್ಲಿ ಮನಸ್ಸು, ದೇಹ ಎಲ್ಲವೂ ಕೊರಡಿನಂತಾ...