ನಮ್ಮೂರ ಹೋಳಿ ಹಾಡು – ೫

ಹೇ ಕೃಷ್ಣ ತಂದೆ ಏನುಕಾರ್ಯ
ಹೇಳಿದೆ ಎನಗೆ?
ಮನಸಾಯಿತೆ ನಿನಗೆ ||ಪ||
ಹಡೆದ ಮಕ್ಕಳ ಮೇಲೆ
ಪಿತಗೆ ಹರುವಿಲ್ಲವೋ
ಇದು ಕಠಿಣವಲ್ಲವೋ ||೧||

ಹರನ ಉರಿಯಗಣ್ಣಿನೆದುರು
ನಿಲ್ಲುವರ್‍ಯಾರೋ?
ಆವ ಪುರುಷರ ತೋರೋ ||೨||

ಬೆಂಕಿಯೊಳಗೆ ನೂಕಬಾರದೆ
ಬ್ಯಾಸರವಾದರೆ?
ಪರರು ಕೇಳಿ ಸೈರಿಪರೆ ||೩||

ಲೋಕ ಬಾಂಧವನೆಂದು
ನಿನ್ನ ಲೋಕವೆಂಬುದೋ
ಆವ ನ್ಯಾಯವೋ ಇದು ||೪||

ಪರರ ಮಕ್ಕಳ ನೋವ
ನೋಡಿ ಮಿಡುಕುತಲಿಹರೋ
ದೈವ ಭಾವ ಉಳ್ಳವರೋ ||೫||

ಎನ್ನ ಧೋರಣವೇನು
ತಂದೆ ಪನ್ನಗ ಶಯನ
ಹೆಣೆದ್ಯಾಕೋ ಈ ಹದನ ||೬||

ಹರನು ಮುನಿದ ಮೇಲೆ
ಲೋಕ ಉರಿದು ಹೋಗದೆ
ಅವಕಾಶವಾಗ್ವುದೆ ||೭||

ಶೂರನಾದರೇನು ನಾನು
ಶೂಲಿಗೆ ಎದುರೇ?
ನಾನಾತಗೆ ನದರೇ ||೮||

ಆನೆ ಸಿಂಹ ಕೆಣಕಲದಲಕೆ
ಹಾನಿಯಲ್ಲದೆ
ಪ್ರಾಣ ಬೇರೆ ಉಳಿವದೆ ||೯||

ಏಸುದಿನದಲಿಂದ
ಈಶನ ಕಣ್ಣ ಮುಂದಕೆ
ಹಾಕಬೇಕೆಂಬ ಬಯಕೆ ತೀರಿತೆ ||೧೦||

ನಿನ್ನ ಬಯಕೆ ತೀರಿತೆ
ನಿನ್ನ ಮನಸ್ಸಿನ ಕನಸು ಹೋಯಿತೆ
ಇನ್ನು ಬಾಕಿ ಉಳಿಯಿತೆ ||೧೧||

ಹಡೆದವರು ದುರ್ಬುದ್ಧಿ
ತೋರಿರುವರೆ ಮಕ್ಕಳಿಗೆ
ಕೆಣಕುವರೆ ಜಗದೊಳಗೆ ||೧೨||

ನನ್ನ ದೈವ ನಿನ್ನೊಳು ಹೊಕ್ಕು
ಮಾಡಲೀ ಪರಿಯಾ
ಮಾಡಲೇನು ಶ್ರೀ ಹರಿಯೇ ||೧೩||

ಇನ್ನು ನಿನ್ನ ಪಾದ ಎನಗೆ
ಎರವು ಗೈದೆಯಾ
ಹೇ ರುಕ್ಮಿಣೀ ಪ್ರಿಯಾ ||೧೪||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲೆಕ್ಕದ ಮಾತು
Next post ಪುಟ್ಟನ ಕಚೇರಿ

ಸಣ್ಣ ಕತೆ

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಮೇಷ್ಟ್ರು ಮುನಿಸಾಮಿ

    ಪ್ರಕರಣ ೮ ಮಾರನೆಯ ದಿನ ಬೆಳಗ್ಗೆ ರಂಗಣ್ಣನು, ‘ಶಂಕರಪ್ಪ ! ನೀವೂ ಗೋಪಾಲ ಇಬ್ಬರೂ ನೆಟ್ಟಗೆ ಜನಾರ್ದನಪುರಕ್ಕೆ ಹಿಂದಿರುಗಿ ಹೋಗಿ, ನನ್ನ ಸಾಮಾನುಗಳನ್ನೆಲ್ಲ ಜೋಕೆಯಿಂದ ತೆಗೆದುಕೊಂಡು ಹೋಗಿ.… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…