Home / ಕವನ / ಜನಪದ / ನಮ್ಮೂರ ಹೋಳಿ ಹಾಡು – ೫

ನಮ್ಮೂರ ಹೋಳಿ ಹಾಡು – ೫

ಹೇ ಕೃಷ್ಣ ತಂದೆ ಏನುಕಾರ್ಯ
ಹೇಳಿದೆ ಎನಗೆ?
ಮನಸಾಯಿತೆ ನಿನಗೆ ||ಪ||
ಹಡೆದ ಮಕ್ಕಳ ಮೇಲೆ
ಪಿತಗೆ ಹರುವಿಲ್ಲವೋ
ಇದು ಕಠಿಣವಲ್ಲವೋ ||೧||

ಹರನ ಉರಿಯಗಣ್ಣಿನೆದುರು
ನಿಲ್ಲುವರ್‍ಯಾರೋ?
ಆವ ಪುರುಷರ ತೋರೋ ||೨||

ಬೆಂಕಿಯೊಳಗೆ ನೂಕಬಾರದೆ
ಬ್ಯಾಸರವಾದರೆ?
ಪರರು ಕೇಳಿ ಸೈರಿಪರೆ ||೩||

ಲೋಕ ಬಾಂಧವನೆಂದು
ನಿನ್ನ ಲೋಕವೆಂಬುದೋ
ಆವ ನ್ಯಾಯವೋ ಇದು ||೪||

ಪರರ ಮಕ್ಕಳ ನೋವ
ನೋಡಿ ಮಿಡುಕುತಲಿಹರೋ
ದೈವ ಭಾವ ಉಳ್ಳವರೋ ||೫||

ಎನ್ನ ಧೋರಣವೇನು
ತಂದೆ ಪನ್ನಗ ಶಯನ
ಹೆಣೆದ್ಯಾಕೋ ಈ ಹದನ ||೬||

ಹರನು ಮುನಿದ ಮೇಲೆ
ಲೋಕ ಉರಿದು ಹೋಗದೆ
ಅವಕಾಶವಾಗ್ವುದೆ ||೭||

ಶೂರನಾದರೇನು ನಾನು
ಶೂಲಿಗೆ ಎದುರೇ?
ನಾನಾತಗೆ ನದರೇ ||೮||

ಆನೆ ಸಿಂಹ ಕೆಣಕಲದಲಕೆ
ಹಾನಿಯಲ್ಲದೆ
ಪ್ರಾಣ ಬೇರೆ ಉಳಿವದೆ ||೯||

ಏಸುದಿನದಲಿಂದ
ಈಶನ ಕಣ್ಣ ಮುಂದಕೆ
ಹಾಕಬೇಕೆಂಬ ಬಯಕೆ ತೀರಿತೆ ||೧೦||

ನಿನ್ನ ಬಯಕೆ ತೀರಿತೆ
ನಿನ್ನ ಮನಸ್ಸಿನ ಕನಸು ಹೋಯಿತೆ
ಇನ್ನು ಬಾಕಿ ಉಳಿಯಿತೆ ||೧೧||

ಹಡೆದವರು ದುರ್ಬುದ್ಧಿ
ತೋರಿರುವರೆ ಮಕ್ಕಳಿಗೆ
ಕೆಣಕುವರೆ ಜಗದೊಳಗೆ ||೧೨||

ನನ್ನ ದೈವ ನಿನ್ನೊಳು ಹೊಕ್ಕು
ಮಾಡಲೀ ಪರಿಯಾ
ಮಾಡಲೇನು ಶ್ರೀ ಹರಿಯೇ ||೧೩||

ಇನ್ನು ನಿನ್ನ ಪಾದ ಎನಗೆ
ಎರವು ಗೈದೆಯಾ
ಹೇ ರುಕ್ಮಿಣೀ ಪ್ರಿಯಾ ||೧೪||
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...