ನಮ್ಮೂರ ಹೋಳಿ ಹಾಡು – ೫

ಹೇ ಕೃಷ್ಣ ತಂದೆ ಏನುಕಾರ್ಯ
ಹೇಳಿದೆ ಎನಗೆ?
ಮನಸಾಯಿತೆ ನಿನಗೆ ||ಪ||
ಹಡೆದ ಮಕ್ಕಳ ಮೇಲೆ
ಪಿತಗೆ ಹರುವಿಲ್ಲವೋ
ಇದು ಕಠಿಣವಲ್ಲವೋ ||೧||

ಹರನ ಉರಿಯಗಣ್ಣಿನೆದುರು
ನಿಲ್ಲುವರ್‍ಯಾರೋ?
ಆವ ಪುರುಷರ ತೋರೋ ||೨||

ಬೆಂಕಿಯೊಳಗೆ ನೂಕಬಾರದೆ
ಬ್ಯಾಸರವಾದರೆ?
ಪರರು ಕೇಳಿ ಸೈರಿಪರೆ ||೩||

ಲೋಕ ಬಾಂಧವನೆಂದು
ನಿನ್ನ ಲೋಕವೆಂಬುದೋ
ಆವ ನ್ಯಾಯವೋ ಇದು ||೪||

ಪರರ ಮಕ್ಕಳ ನೋವ
ನೋಡಿ ಮಿಡುಕುತಲಿಹರೋ
ದೈವ ಭಾವ ಉಳ್ಳವರೋ ||೫||

ಎನ್ನ ಧೋರಣವೇನು
ತಂದೆ ಪನ್ನಗ ಶಯನ
ಹೆಣೆದ್ಯಾಕೋ ಈ ಹದನ ||೬||

ಹರನು ಮುನಿದ ಮೇಲೆ
ಲೋಕ ಉರಿದು ಹೋಗದೆ
ಅವಕಾಶವಾಗ್ವುದೆ ||೭||

ಶೂರನಾದರೇನು ನಾನು
ಶೂಲಿಗೆ ಎದುರೇ?
ನಾನಾತಗೆ ನದರೇ ||೮||

ಆನೆ ಸಿಂಹ ಕೆಣಕಲದಲಕೆ
ಹಾನಿಯಲ್ಲದೆ
ಪ್ರಾಣ ಬೇರೆ ಉಳಿವದೆ ||೯||

ಏಸುದಿನದಲಿಂದ
ಈಶನ ಕಣ್ಣ ಮುಂದಕೆ
ಹಾಕಬೇಕೆಂಬ ಬಯಕೆ ತೀರಿತೆ ||೧೦||

ನಿನ್ನ ಬಯಕೆ ತೀರಿತೆ
ನಿನ್ನ ಮನಸ್ಸಿನ ಕನಸು ಹೋಯಿತೆ
ಇನ್ನು ಬಾಕಿ ಉಳಿಯಿತೆ ||೧೧||

ಹಡೆದವರು ದುರ್ಬುದ್ಧಿ
ತೋರಿರುವರೆ ಮಕ್ಕಳಿಗೆ
ಕೆಣಕುವರೆ ಜಗದೊಳಗೆ ||೧೨||

ನನ್ನ ದೈವ ನಿನ್ನೊಳು ಹೊಕ್ಕು
ಮಾಡಲೀ ಪರಿಯಾ
ಮಾಡಲೇನು ಶ್ರೀ ಹರಿಯೇ ||೧೩||

ಇನ್ನು ನಿನ್ನ ಪಾದ ಎನಗೆ
ಎರವು ಗೈದೆಯಾ
ಹೇ ರುಕ್ಮಿಣೀ ಪ್ರಿಯಾ ||೧೪||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲೆಕ್ಕದ ಮಾತು
Next post ಪುಟ್ಟನ ಕಚೇರಿ

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…