ನಮ್ಮೂರ ಹೋಳಿ ಹಾಡು – ೫

ಹೇ ಕೃಷ್ಣ ತಂದೆ ಏನುಕಾರ್ಯ
ಹೇಳಿದೆ ಎನಗೆ?
ಮನಸಾಯಿತೆ ನಿನಗೆ ||ಪ||
ಹಡೆದ ಮಕ್ಕಳ ಮೇಲೆ
ಪಿತಗೆ ಹರುವಿಲ್ಲವೋ
ಇದು ಕಠಿಣವಲ್ಲವೋ ||೧||

ಹರನ ಉರಿಯಗಣ್ಣಿನೆದುರು
ನಿಲ್ಲುವರ್‍ಯಾರೋ?
ಆವ ಪುರುಷರ ತೋರೋ ||೨||

ಬೆಂಕಿಯೊಳಗೆ ನೂಕಬಾರದೆ
ಬ್ಯಾಸರವಾದರೆ?
ಪರರು ಕೇಳಿ ಸೈರಿಪರೆ ||೩||

ಲೋಕ ಬಾಂಧವನೆಂದು
ನಿನ್ನ ಲೋಕವೆಂಬುದೋ
ಆವ ನ್ಯಾಯವೋ ಇದು ||೪||

ಪರರ ಮಕ್ಕಳ ನೋವ
ನೋಡಿ ಮಿಡುಕುತಲಿಹರೋ
ದೈವ ಭಾವ ಉಳ್ಳವರೋ ||೫||

ಎನ್ನ ಧೋರಣವೇನು
ತಂದೆ ಪನ್ನಗ ಶಯನ
ಹೆಣೆದ್ಯಾಕೋ ಈ ಹದನ ||೬||

ಹರನು ಮುನಿದ ಮೇಲೆ
ಲೋಕ ಉರಿದು ಹೋಗದೆ
ಅವಕಾಶವಾಗ್ವುದೆ ||೭||

ಶೂರನಾದರೇನು ನಾನು
ಶೂಲಿಗೆ ಎದುರೇ?
ನಾನಾತಗೆ ನದರೇ ||೮||

ಆನೆ ಸಿಂಹ ಕೆಣಕಲದಲಕೆ
ಹಾನಿಯಲ್ಲದೆ
ಪ್ರಾಣ ಬೇರೆ ಉಳಿವದೆ ||೯||

ಏಸುದಿನದಲಿಂದ
ಈಶನ ಕಣ್ಣ ಮುಂದಕೆ
ಹಾಕಬೇಕೆಂಬ ಬಯಕೆ ತೀರಿತೆ ||೧೦||

ನಿನ್ನ ಬಯಕೆ ತೀರಿತೆ
ನಿನ್ನ ಮನಸ್ಸಿನ ಕನಸು ಹೋಯಿತೆ
ಇನ್ನು ಬಾಕಿ ಉಳಿಯಿತೆ ||೧೧||

ಹಡೆದವರು ದುರ್ಬುದ್ಧಿ
ತೋರಿರುವರೆ ಮಕ್ಕಳಿಗೆ
ಕೆಣಕುವರೆ ಜಗದೊಳಗೆ ||೧೨||

ನನ್ನ ದೈವ ನಿನ್ನೊಳು ಹೊಕ್ಕು
ಮಾಡಲೀ ಪರಿಯಾ
ಮಾಡಲೇನು ಶ್ರೀ ಹರಿಯೇ ||೧೩||

ಇನ್ನು ನಿನ್ನ ಪಾದ ಎನಗೆ
ಎರವು ಗೈದೆಯಾ
ಹೇ ರುಕ್ಮಿಣೀ ಪ್ರಿಯಾ ||೧೪||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲೆಕ್ಕದ ಮಾತು
Next post ಪುಟ್ಟನ ಕಚೇರಿ

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…