Home / ಕವನ / ಕವಿತೆ / ಲೆಕ್ಕದ ಮಾತು

ಲೆಕ್ಕದ ಮಾತು

ಲೆಕ್ಕ ಲೆಕ್ಕ ಮಾನವ ಪ್ರತಿಯೊಂದಕ್ಕೂ
ಲೆಕ್ಕ ಇಡುತ್ತಾ ಹೋಗುತ್ತಾನೆ!!
ಲೆಕ್ಕ ಬಲು ದುಕ್ಕ! ತಿಳಿದೆ ಈ ನಕ್ಕಗೇ?!
ಮಳೆ, ಗಾಳಿ, ನೀರು, ಬೆಳೆ, ಬಿಸಿಲು, ಬೆಂಕಿ,
ಗುಡುಗು, ಸಿಡಿಲು, ಮಿಂಚಿಗುಂಟೆ ಲೆಕ್ಕ?!
*

ಲೆಕ್ಕ… ಲೆಕ್ಕ… ಈ ಹುಲ್ಲು, ಜ್ವಲ್ಲು ಮಾನವಂದೇನು ಲೆಕ್ಕ?!
ಪ್ರಕೃತಿ, ವಿಕೃತಿ, ಸುಕೃತಿಗೆ ಲೆಕ್ಕವಿಲ್ಲ ಪತ್ರವಿಲ್ಲ!
ಕಶ್ಟವಿಲ್ಲದೆ, ಸುಖ ಅನಿಶ್ಟವೆಂಬಾತತ್ವ ನನ್ನದು!
ಮೂಗಿಡಿದರೆ ಬಾಯಿ ತೆರೆಯದೇ?!
ದೇವರ ಲೆಕ್ಕದಾ ಮುಂದೆ, ಮಾನವರದೇನು ಲೆಕ್ಕ?!
*

ಸ್ವಿಚ್, ಆನ್ ಮಾಡಿದಶ್ಟು, ಸುಲಭವಲ್ಲ
ಮುಮ್ಮುಖದ ಋತುಮಾನದ ಈ ಲೆಕ್ಕ?!
ಆಹಾ! ಮರ, ಗಿಡ, ಪೊದೆ, ಪೊದೆಗಳೆಲ್ಲ…
ಬೆದೆಗೆ ಬರುವುದು ಯಾವ ಲೆಕ್ಕ?
ಅಂಗಾಂಗ ಅಗಲಿಸಿ, ಮಾಗಿದ ಎಲೆ ಎಲೆ… ಉದುರಿಸಿ,
ಚಿಗುರೆಲೆಯ ಚಿಗುರಿಸುವುದೆಂಥಾ ಲೆಕ್ಕ?!
ಮರ ಮರದ ಎಲೆ ಎಲೆಯಲಿ, ಅಲೆ ಅಲೆಯಾಗಿ,
ಕೋಗಿಲೆ ಕೂಗುವುದೆಂಥಾ ಲೆಕ್ಕ?!
ಅಪ್ಪ, ಅಮ್ಮ, ಸಂಸಾರ ಮಾಡಿ, ಮಕ್ಕಳ ಹಡೆದು,
ಜಗದೊಟ್ಟಿಗೆ ಜೀವಿಸುವುದೆಂಥಾ ಲೆಕ್ಕ?
ಲೆಕ್ಕ ಲೆಕ್ಕ ಯಾರಿಟ್ಟರೀ ಲೆಕ್ಕ?!
ಲೆಕ್ಕವಿಲ್ಲ, ಪತ್ರವಿಲ್ಲ, ಬರಿ ಭ್ರಮೆ
ಹಾವು, ಪೊರೆ ಕಳಚಿದಶ್ಟು, ಸುಲಭವಲ್ಲ!
ಎಲೆಯುದುರಿದಾ ಜಾಗದಲ್ಲೇ, ಮತ್ತೆ ಮತ್ತೆ ಹುಟ್ಟಿಬರುವ,
ಭರವಸೆಯ ಚಿಗುರು ನಾ!
ಪಾತಾಳ ಲೋಕದಿ, ಹೊರ ಹೊಮ್ಮಿದ, ನೋವು ನಾ!!
ನನ್ನ ನೋವಿಗೂ ಅರ್ಥವಿಲ್ಲ ಭಾವವಿಲ್ಲ! ಬರೀ ದುಕ್ಕ ಕಾರಂಜಿ!
*

ಬೇಡ ಬೇಡೆಂದರೂ… ನಿಲ್ಲದಾ ಋತುಗಾನಕ್ಕೆ,
ವಸಂತ ಇಡುವನೆ ಲೆಕ್ಕ?!
ಹುಟ್ಟು, ಸಾವು, ನೋವು, ನಲಿವು, ದುಕ್ಕ, ದುಮ್ಮಾನಗಳಿಗಿಲ್ಲ ಲೆಕ್ಕ?!
ಬೇರಿಂದ ಲೆಕ್ಕವೋ? ಮರದಿಂದಾ ಲೆಕ್ಕವೋ? ಎಲ್ಲಿಂದಾಲೆಕ್ಕ ಹೇಳಲಿ??
ಸೃಷ್ಟಿ, ಲಯ, ಜೀವ, ಜಲ, ಚೇತನ, ಅನಿಕೇತನ…
ಯಾವ ಲೆಕ್ಕ ಮೊದಲು?!
ಲೆಕ್ಕವಿಟ್ಟವರಿದ್ದರೆ… ಮೊದಲು, ಲೆಕ್ಕ ಕೊಡಿ!
*

ಒಣಗಿ ಬೋಳಾದವೆಲ್ಲ, ಧಗ್ಗನೆದ್ದು ಚಿಗುರುವ, ಹೆಣ್ತನಕ್ಯಾವ ಲೆಕ್ಕ?!
ಮನುಶ್ಯ ಕ್ರಿಯೆಯಲ್ಲಿಲ್ಲದ, ಹೊಸತನಕೆ ಲೆಕ್ಕವೆಲ್ಲಿದೆ ಗೆಳೆಯಾ??
ಮರದೊಳಗೆ ಮರಹುಟ್ಟಿ, ಅಮರವಾಗುವ ಕ್ರಿಯೆಗ್ಯಾವ ಲೆಕ್ಕ?
ಪ್ರಕೃತಿ ಹೆಣ್ಣೆಂಬೆ! ಹೆಣ್ಣೇ ಪ್ರಕೃತಿಯೆಂಬೆ, ಎಲ್ಲಿಯ ಲೆಕ್ಕೆಂಬೇ?!
ಮಳೆ, ಗಾಳಿ, ನೀರು, ಗುಡುಗು, ಸಿಡಿಲು, ಬಿಸಿಲು, ಮಿಂಚಿಗೆ ಲೆಕ್ಕವೆ?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...