Home / ಕವನ / ಕವಿತೆ / ಲೆಕ್ಕದ ಮಾತು

ಲೆಕ್ಕದ ಮಾತು

ಲೆಕ್ಕ ಲೆಕ್ಕ ಮಾನವ ಪ್ರತಿಯೊಂದಕ್ಕೂ
ಲೆಕ್ಕ ಇಡುತ್ತಾ ಹೋಗುತ್ತಾನೆ!!
ಲೆಕ್ಕ ಬಲು ದುಕ್ಕ! ತಿಳಿದೆ ಈ ನಕ್ಕಗೇ?!
ಮಳೆ, ಗಾಳಿ, ನೀರು, ಬೆಳೆ, ಬಿಸಿಲು, ಬೆಂಕಿ,
ಗುಡುಗು, ಸಿಡಿಲು, ಮಿಂಚಿಗುಂಟೆ ಲೆಕ್ಕ?!
*

ಲೆಕ್ಕ… ಲೆಕ್ಕ… ಈ ಹುಲ್ಲು, ಜ್ವಲ್ಲು ಮಾನವಂದೇನು ಲೆಕ್ಕ?!
ಪ್ರಕೃತಿ, ವಿಕೃತಿ, ಸುಕೃತಿಗೆ ಲೆಕ್ಕವಿಲ್ಲ ಪತ್ರವಿಲ್ಲ!
ಕಶ್ಟವಿಲ್ಲದೆ, ಸುಖ ಅನಿಶ್ಟವೆಂಬಾತತ್ವ ನನ್ನದು!
ಮೂಗಿಡಿದರೆ ಬಾಯಿ ತೆರೆಯದೇ?!
ದೇವರ ಲೆಕ್ಕದಾ ಮುಂದೆ, ಮಾನವರದೇನು ಲೆಕ್ಕ?!
*

ಸ್ವಿಚ್, ಆನ್ ಮಾಡಿದಶ್ಟು, ಸುಲಭವಲ್ಲ
ಮುಮ್ಮುಖದ ಋತುಮಾನದ ಈ ಲೆಕ್ಕ?!
ಆಹಾ! ಮರ, ಗಿಡ, ಪೊದೆ, ಪೊದೆಗಳೆಲ್ಲ…
ಬೆದೆಗೆ ಬರುವುದು ಯಾವ ಲೆಕ್ಕ?
ಅಂಗಾಂಗ ಅಗಲಿಸಿ, ಮಾಗಿದ ಎಲೆ ಎಲೆ… ಉದುರಿಸಿ,
ಚಿಗುರೆಲೆಯ ಚಿಗುರಿಸುವುದೆಂಥಾ ಲೆಕ್ಕ?!
ಮರ ಮರದ ಎಲೆ ಎಲೆಯಲಿ, ಅಲೆ ಅಲೆಯಾಗಿ,
ಕೋಗಿಲೆ ಕೂಗುವುದೆಂಥಾ ಲೆಕ್ಕ?!
ಅಪ್ಪ, ಅಮ್ಮ, ಸಂಸಾರ ಮಾಡಿ, ಮಕ್ಕಳ ಹಡೆದು,
ಜಗದೊಟ್ಟಿಗೆ ಜೀವಿಸುವುದೆಂಥಾ ಲೆಕ್ಕ?
ಲೆಕ್ಕ ಲೆಕ್ಕ ಯಾರಿಟ್ಟರೀ ಲೆಕ್ಕ?!
ಲೆಕ್ಕವಿಲ್ಲ, ಪತ್ರವಿಲ್ಲ, ಬರಿ ಭ್ರಮೆ
ಹಾವು, ಪೊರೆ ಕಳಚಿದಶ್ಟು, ಸುಲಭವಲ್ಲ!
ಎಲೆಯುದುರಿದಾ ಜಾಗದಲ್ಲೇ, ಮತ್ತೆ ಮತ್ತೆ ಹುಟ್ಟಿಬರುವ,
ಭರವಸೆಯ ಚಿಗುರು ನಾ!
ಪಾತಾಳ ಲೋಕದಿ, ಹೊರ ಹೊಮ್ಮಿದ, ನೋವು ನಾ!!
ನನ್ನ ನೋವಿಗೂ ಅರ್ಥವಿಲ್ಲ ಭಾವವಿಲ್ಲ! ಬರೀ ದುಕ್ಕ ಕಾರಂಜಿ!
*

ಬೇಡ ಬೇಡೆಂದರೂ… ನಿಲ್ಲದಾ ಋತುಗಾನಕ್ಕೆ,
ವಸಂತ ಇಡುವನೆ ಲೆಕ್ಕ?!
ಹುಟ್ಟು, ಸಾವು, ನೋವು, ನಲಿವು, ದುಕ್ಕ, ದುಮ್ಮಾನಗಳಿಗಿಲ್ಲ ಲೆಕ್ಕ?!
ಬೇರಿಂದ ಲೆಕ್ಕವೋ? ಮರದಿಂದಾ ಲೆಕ್ಕವೋ? ಎಲ್ಲಿಂದಾಲೆಕ್ಕ ಹೇಳಲಿ??
ಸೃಷ್ಟಿ, ಲಯ, ಜೀವ, ಜಲ, ಚೇತನ, ಅನಿಕೇತನ…
ಯಾವ ಲೆಕ್ಕ ಮೊದಲು?!
ಲೆಕ್ಕವಿಟ್ಟವರಿದ್ದರೆ… ಮೊದಲು, ಲೆಕ್ಕ ಕೊಡಿ!
*

ಒಣಗಿ ಬೋಳಾದವೆಲ್ಲ, ಧಗ್ಗನೆದ್ದು ಚಿಗುರುವ, ಹೆಣ್ತನಕ್ಯಾವ ಲೆಕ್ಕ?!
ಮನುಶ್ಯ ಕ್ರಿಯೆಯಲ್ಲಿಲ್ಲದ, ಹೊಸತನಕೆ ಲೆಕ್ಕವೆಲ್ಲಿದೆ ಗೆಳೆಯಾ??
ಮರದೊಳಗೆ ಮರಹುಟ್ಟಿ, ಅಮರವಾಗುವ ಕ್ರಿಯೆಗ್ಯಾವ ಲೆಕ್ಕ?
ಪ್ರಕೃತಿ ಹೆಣ್ಣೆಂಬೆ! ಹೆಣ್ಣೇ ಪ್ರಕೃತಿಯೆಂಬೆ, ಎಲ್ಲಿಯ ಲೆಕ್ಕೆಂಬೇ?!
ಮಳೆ, ಗಾಳಿ, ನೀರು, ಗುಡುಗು, ಸಿಡಿಲು, ಬಿಸಿಲು, ಮಿಂಚಿಗೆ ಲೆಕ್ಕವೆ?
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...