ಅಲ್ಲಿ ಝಗಝಗಿಸುವ ಸೂರ್ಯ ಉರಿನಾಲಿಗೆ ಚಾಚುತ್ತಾನೆ
ಅವನಂತೆ ತಿರುಗಣಿಯ ಗೋಳಾಟವಾಡುವ
ಉರಿಯುಂಡೆಗಳು ಯಾವ ಒಡಲಿಗಾಗಿ ತಿರುಗುತ್ತಿವೆಯೋ?
ಎರವಲಿಗೆ ಮೈತೊರೆದು ಗೂಟಕೊಡನಾಡುತಿವೆ
ಗಣನೆಯಿಲ್ಲದ ಮಣ್ಣ ಗುಂಡುಗಳು, ನೆರಳ ಬಂಡುಗಳು
ಇಲ್ಲಿ ಕೆಳಗೆ ಹಸಿದ ಮಣ್ಣು ಬಾಯ್ಬಿಟ್ಟು ನಾಲಗೆ ಜೊಲ್ಲುತ್ತಿದೆ
ಎಳೆಯುತಿದೆ ಮುಗಿಲ ಸೆರಗನ್ನು
ಜಾರಿ ಬೀಳುತ್ತದೆ ನಾಚಿಕೆ ನೀರಾಗಿ
ಹಸಿದ ನೀರು ಹರಿಹರಿದು ಓಡುತಿದೆ ತಳ ಕಾಣುವನಕ
ತಳಹೊಟ್ಟೆತಗ್ಗುಗಳು ತುಂಬಿದರೂ ಒಳಕರುಳು ಕಳವಳಿಸುತ್ತವೆ
ಆಸೆ ಹೆಡೆ ಒಡೆತೆನೆಯೆತ್ತಿ ಚಾಚುತ್ತದೆ ಆಗಸಕ್ಕಾಯೆಂದು ಬಾಯಿ
ತುರೀಯ ಚುಂಬನದ ಸವಿಜೇನಿಗಾಗಿ
ಇಲ್ಲಿ ಕೆಳಗಿನೊಳಗೆ ಜೀವ ಜೀವಗಳು ಚರ್ಮಸುಲಿದು
ರಕ್ತ ಕುಡಿದು ಮಾಂಸ ನೆಣ ಕಿತ್ತು ತಿನ್ನುತ್ತಿವೆ
ಒಂದರ ಜೀವ ಇನ್ನೊಂದರ ಸಾವು
ಗಂಡು ಹೆಣ್ಣಿಗಾಗಿ ಹೆಣ್ಣು ಗಂಡಿಗಾಗಿ
ಹಸಿದು ಹಸಿವಿಂಗಿಸಲೆಂದೇ ಹಬ್ಬಿಸಿಕೊಂಡಿವೆ ಹೊಕ್ಕುಳಬಳ್ಳಿಗಳ
ತೆರೆದುಕೊಂಡಿವೆ ಬಸಿರು ಭಾವಗಳ
ಹೊಸೆಯುತ್ತಿವೆ ಒಡಲ ಹಗ್ಗಕಗ್ಗಗಳ
ಈ ಹಸಿವಿಗಿಲ್ಲ ತಿಂದು ತೇಗಿದ ತೃಪ್ತಿ
*****
Related Post
ಸಣ್ಣ ಕತೆ
-
ಎದಗೆ ಬಿದ್ದ ಕತೆ
೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…
-
ಇರುವುದೆಲ್ಲವ ಬಿಟ್ಟು
ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…
-
ರಣಹದ್ದುಗಳು
ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…
-
ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು
ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…
-
ಮುಗ್ಧ
ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…