Home / ಬಾಲ ಚಿಲುಮೆ / ಕವಿತೆ / ಪುಟ್ಟನ ಕಚೇರಿ

ಪುಟ್ಟನ ಕಚೇರಿ

ಪುಟ್ಟನ ಮನೆ ಮುಂದೆ ಇದೇನು ಕೂಟ
ಇಷ್ಟು ಬೆಳಿಗ್ಗೆಯೆ ಊರವರ ಕಾಟ
ಕೆಲವರು ಕುಂತು ಕೆಲವರು ನಿಂತು
ಹಲವರು ಹಣಿಕಿ ಉಳಿದವರಿಣುಕಿ
ಹಾಡುತ್ತಿರುವನು ಪುಟ್ಟನು ಎಂದು
ಜನ ಬಂದಿರುವರು ಕೇಳಲು ಇಂದು
ಪುಟ್ಟನ ಗಾಯನ ಒಂದೇ ಸವನೆ
ನಡೆದಿದೆ ಯಾರದೆ ಪರಿವಿಲ್ಲದೆನೆ
ಮಂದ್ರ ಮಧ್ಯಮ ತಾರಕ ಬಿಂದಿಗೆ
ಎಲ್ಲಾ ಶ್ರುತಿಗಳು ಕೃತಿಗಳು ಒಂದಿಗೆ
ತಲೆದೂಗುತಾರೆ ಕೇಳುವ ಜನಗಳು
ಅದೆಂಥ ಭಾವ ತುಂಬಿದೆ ಇವನೊಳು
ಹರಿದರಿದು ಬರುತಿದೆ ಕಣ್ಣೀರ ಧಾರೆ
ದನಿಯೆಂಥ ದನಿಯಿತು ವ್ಹಾರೆ ವ್ಹಾರೆ
ಬಾಲಪ್ರತಿಭೆಯಿವ ಚೆಂಬೈಗೂ ಸಮ
ಇವನೆದುರು ಇನ್ನೆಲ್ಲರು ಬರೀ ಸರಿಗಮ
ಚರ್ಚೆ ಸುರುವಾಗುವುದು ರಾಗದ ಕುರಿತು
ಒಬ್ಬೊಬ್ಬರು ತಮ್ಮ ಬುದ್ಧಿಯಂತರಿತು
ಒಬ್ಬನೆಂದರೆ ಇದು ಕೇದಾರ ಗೌಳ
ಇನ್ನೊಬ್ಬನ ಹಟ ರೀತಿ ಗೌಳ
ಆಗ ಶುರುವಾಗುವುದು ಭಾರೀ ಜಗಳ
ಯಾಕೆಂದರೆ ಇದು ಮಾಯಾಮಾಳವ ಗೌಳ
ಕೆಲವರಭೇರಿ ಕೆಲವರು ಬಿಲಹರಿ
ದೇವಗಾಂಧಾರಿ ಗೌರಿಮನೋಹರಿ
ಖರಹರಪ್ರಿಯ ನಾಟಿಕುರಂಜಿ
ಆನಂದ ಭೈರವಿ ಪೂರ್ವಕಲ್ಯಾಣಿ
ಮಲಯಮಾರುತ ಪಂತುವರಾಳಿ
ಸಿಂಹೇಂದ್ರಮಧ್ಯಮ ಸಿಂಧುಭೈರವಿ
ಒನ್ಸ್ ಮೋರೆಂದು ಕೂಗಲು ಕೆಲವರು
ಟ್ವೈಸ್ ಮೋರೆಂದು ಇನ್ನೂ ಹಲವರು
ಮೋರ್ ಮೋರೆಂಬ ಗುಂಪೂ ಇತ್ತು
ಈ ಮಧ್ಯೆ ಗಾಯನ ಜೋರಾಗ್ತ ಹೋಯ್ತು
ಆಗಲೆ ಬಂದಳು ಪುಟ್ಪನ ಅಮ್ಮ
ಕೈಯಲಿ ಎತ್ಕೊಂಡು ಅಂಗಡಿ ಸಾಮಾನ್ನ
ಅಯ್ಯೋ ಕಂದಾ ಹಸಿವಾಯ್ತೇನಪ
ಯಾಕಿಂಗಳ್ತೀ ನಂದೇ ತಪ್ಪ
ಕರಕೊಂಡು ಹೋದಳು ಪುಟ್ಟನ ಒಳಕ್ಕೆ
ಕಾಲು ಕಿತ್ತರು ಶ್ರಾವಕರು ಹೊರಕ್ಕೆ
ಇಂತು ಸಂಪನ್ನ ಪುಟ್ಪನ ಕಚೇರಿ
ಹೊಟ್ಟೆಗೆ ಸೇರಲು ಮೂರ್ನಾಲ್ಕು ಪೂರಿ!
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್