ನಮ್ಮೂರ ಹೋಳಿ ಹಾಡು – ೩

ಸತಿ ಹೋಮದೊಳಾದುದ ಕೇಳಿ
ಶಿತಿ ಕಂಠನು ವ್ಯಸನವ ತಾಳಿ
ಕೈಲಾಸದ ವೈಭೋಗವನು
ಪಾಲಿಸುವುದ ಬಿಟ್ಟನುಽ
ಶಿವನೋಽ||ಪ||

ತಾಳಿದ ಮೌನವ
ತಪಸಿಗೆ ಮನವನು ಕೂರಿಸಿದನು
ಆ ಪರಮಾತಮನೂ
ಶಿವನೋಽ||೧||

ಹೇಮಕೂಟ ಪರ್ವತಕೆ ಹೋಗಿ
ತಾ ಮಾಡುತ ತಪ ಶಿವಯೋಗಿ
ಪ್ರೇಮದಿಯವತರಿಸ್ಯಾ
ಮಹ ಪಾರ್ವತಿ ಕಾಮಿಸಿ
ಬೆಳೆದಳು ಹೆಣ್ಣಾಗಿ||೨||

ಇತ್ತಲು ಈ ಪರಿಯಿರುತಿರಲು ತಾ
ಮತ್ತೊಂದಾಯಿತು ತರುವಾತ|
ದೈತ್ಯನು ತಾರಕ ದೇವತರಿಗೆ
ವಿಪತ್ತು ತಂದನವ ನಿತ್ಯವೂ ಘೀಳಿಡುತ||೩||

ಇಂದ್ರಾಗ್ನ್ಯಮನೈರುತೀಶಾನನ್ನರನ್ನೋಡಿಸಿ
ಗರ್ವದಿ ಮುನ್ನ|
ಕುಂದದೆ ಸುರರಿಗೆ ಅಧಿಪತಿಯಾದನು
ಬಂಧಿಸಿಟ್ಟನು ಸೆರೆಯಲಿ ಸುರನನ್ನ||೪||

ಸುರಸಭೆ ಎಲ್ಲರೂ ಘೀಳಿಡುತಾ
ತೆರಳಿದರೆಲ್ಲರೂ ಬಳಲುತಾ
ಸರಸಿಜ ಭವನಿಗೆ ಮೊರೆಯಿಟ್ಟರು ತಾ
ಪರಿ ಪರಿಯಿಂದಲಿ ದೂರಿಡುತಾ||೫||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಊರು-ಕೇರಿ ಕುರಿತು
Next post ಬಿತ್‌ಲೆಸ್

ಸಣ್ಣ ಕತೆ

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

cheap jordans|wholesale air max|wholesale jordans|wholesale jewelry|wholesale jerseys