ನಮ್ಮೂರ ಹೋಳಿ ಹಾಡು – ೩

ಸತಿ ಹೋಮದೊಳಾದುದ ಕೇಳಿ
ಶಿತಿ ಕಂಠನು ವ್ಯಸನವ ತಾಳಿ
ಕೈಲಾಸದ ವೈಭೋಗವನು
ಪಾಲಿಸುವುದ ಬಿಟ್ಟನುಽ
ಶಿವನೋಽ||ಪ||

ತಾಳಿದ ಮೌನವ
ತಪಸಿಗೆ ಮನವನು ಕೂರಿಸಿದನು
ಆ ಪರಮಾತಮನೂ
ಶಿವನೋಽ||೧||

ಹೇಮಕೂಟ ಪರ್ವತಕೆ ಹೋಗಿ
ತಾ ಮಾಡುತ ತಪ ಶಿವಯೋಗಿ
ಪ್ರೇಮದಿಯವತರಿಸ್ಯಾ
ಮಹ ಪಾರ್ವತಿ ಕಾಮಿಸಿ
ಬೆಳೆದಳು ಹೆಣ್ಣಾಗಿ||೨||

ಇತ್ತಲು ಈ ಪರಿಯಿರುತಿರಲು ತಾ
ಮತ್ತೊಂದಾಯಿತು ತರುವಾತ|
ದೈತ್ಯನು ತಾರಕ ದೇವತರಿಗೆ
ವಿಪತ್ತು ತಂದನವ ನಿತ್ಯವೂ ಘೀಳಿಡುತ||೩||

ಇಂದ್ರಾಗ್ನ್ಯಮನೈರುತೀಶಾನನ್ನರನ್ನೋಡಿಸಿ
ಗರ್ವದಿ ಮುನ್ನ|
ಕುಂದದೆ ಸುರರಿಗೆ ಅಧಿಪತಿಯಾದನು
ಬಂಧಿಸಿಟ್ಟನು ಸೆರೆಯಲಿ ಸುರನನ್ನ||೪||

ಸುರಸಭೆ ಎಲ್ಲರೂ ಘೀಳಿಡುತಾ
ತೆರಳಿದರೆಲ್ಲರೂ ಬಳಲುತಾ
ಸರಸಿಜ ಭವನಿಗೆ ಮೊರೆಯಿಟ್ಟರು ತಾ
ಪರಿ ಪರಿಯಿಂದಲಿ ದೂರಿಡುತಾ||೫||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಊರು-ಕೇರಿ ಕುರಿತು
Next post ಬಿತ್‌ಲೆಸ್

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…