ನಮ್ಮೂರ ಹೋಳಿ ಹಾಡು – ೩

ಸತಿ ಹೋಮದೊಳಾದುದ ಕೇಳಿ
ಶಿತಿ ಕಂಠನು ವ್ಯಸನವ ತಾಳಿ
ಕೈಲಾಸದ ವೈಭೋಗವನು
ಪಾಲಿಸುವುದ ಬಿಟ್ಟನುಽ
ಶಿವನೋಽ||ಪ||

ತಾಳಿದ ಮೌನವ
ತಪಸಿಗೆ ಮನವನು ಕೂರಿಸಿದನು
ಆ ಪರಮಾತಮನೂ
ಶಿವನೋಽ||೧||

ಹೇಮಕೂಟ ಪರ್ವತಕೆ ಹೋಗಿ
ತಾ ಮಾಡುತ ತಪ ಶಿವಯೋಗಿ
ಪ್ರೇಮದಿಯವತರಿಸ್ಯಾ
ಮಹ ಪಾರ್ವತಿ ಕಾಮಿಸಿ
ಬೆಳೆದಳು ಹೆಣ್ಣಾಗಿ||೨||

ಇತ್ತಲು ಈ ಪರಿಯಿರುತಿರಲು ತಾ
ಮತ್ತೊಂದಾಯಿತು ತರುವಾತ|
ದೈತ್ಯನು ತಾರಕ ದೇವತರಿಗೆ
ವಿಪತ್ತು ತಂದನವ ನಿತ್ಯವೂ ಘೀಳಿಡುತ||೩||

ಇಂದ್ರಾಗ್ನ್ಯಮನೈರುತೀಶಾನನ್ನರನ್ನೋಡಿಸಿ
ಗರ್ವದಿ ಮುನ್ನ|
ಕುಂದದೆ ಸುರರಿಗೆ ಅಧಿಪತಿಯಾದನು
ಬಂಧಿಸಿಟ್ಟನು ಸೆರೆಯಲಿ ಸುರನನ್ನ||೪||

ಸುರಸಭೆ ಎಲ್ಲರೂ ಘೀಳಿಡುತಾ
ತೆರಳಿದರೆಲ್ಲರೂ ಬಳಲುತಾ
ಸರಸಿಜ ಭವನಿಗೆ ಮೊರೆಯಿಟ್ಟರು ತಾ
ಪರಿ ಪರಿಯಿಂದಲಿ ದೂರಿಡುತಾ||೫||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಊರು-ಕೇರಿ ಕುರಿತು
Next post ಬಿತ್‌ಲೆಸ್

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಮೇಷ್ಟ್ರು ಮುನಿಸಾಮಿ

    ಪ್ರಕರಣ ೮ ಮಾರನೆಯ ದಿನ ಬೆಳಗ್ಗೆ ರಂಗಣ್ಣನು, ‘ಶಂಕರಪ್ಪ ! ನೀವೂ ಗೋಪಾಲ ಇಬ್ಬರೂ ನೆಟ್ಟಗೆ ಜನಾರ್ದನಪುರಕ್ಕೆ ಹಿಂದಿರುಗಿ ಹೋಗಿ, ನನ್ನ ಸಾಮಾನುಗಳನ್ನೆಲ್ಲ ಜೋಕೆಯಿಂದ ತೆಗೆದುಕೊಂಡು ಹೋಗಿ.… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…