ನಮ್ಮೂರ ಹೋಳಿ ಹಾಡು – ೩

ಸತಿ ಹೋಮದೊಳಾದುದ ಕೇಳಿ
ಶಿತಿ ಕಂಠನು ವ್ಯಸನವ ತಾಳಿ
ಕೈಲಾಸದ ವೈಭೋಗವನು
ಪಾಲಿಸುವುದ ಬಿಟ್ಟನುಽ
ಶಿವನೋಽ||ಪ||

ತಾಳಿದ ಮೌನವ
ತಪಸಿಗೆ ಮನವನು ಕೂರಿಸಿದನು
ಆ ಪರಮಾತಮನೂ
ಶಿವನೋಽ||೧||

ಹೇಮಕೂಟ ಪರ್ವತಕೆ ಹೋಗಿ
ತಾ ಮಾಡುತ ತಪ ಶಿವಯೋಗಿ
ಪ್ರೇಮದಿಯವತರಿಸ್ಯಾ
ಮಹ ಪಾರ್ವತಿ ಕಾಮಿಸಿ
ಬೆಳೆದಳು ಹೆಣ್ಣಾಗಿ||೨||

ಇತ್ತಲು ಈ ಪರಿಯಿರುತಿರಲು ತಾ
ಮತ್ತೊಂದಾಯಿತು ತರುವಾತ|
ದೈತ್ಯನು ತಾರಕ ದೇವತರಿಗೆ
ವಿಪತ್ತು ತಂದನವ ನಿತ್ಯವೂ ಘೀಳಿಡುತ||೩||

ಇಂದ್ರಾಗ್ನ್ಯಮನೈರುತೀಶಾನನ್ನರನ್ನೋಡಿಸಿ
ಗರ್ವದಿ ಮುನ್ನ|
ಕುಂದದೆ ಸುರರಿಗೆ ಅಧಿಪತಿಯಾದನು
ಬಂಧಿಸಿಟ್ಟನು ಸೆರೆಯಲಿ ಸುರನನ್ನ||೪||

ಸುರಸಭೆ ಎಲ್ಲರೂ ಘೀಳಿಡುತಾ
ತೆರಳಿದರೆಲ್ಲರೂ ಬಳಲುತಾ
ಸರಸಿಜ ಭವನಿಗೆ ಮೊರೆಯಿಟ್ಟರು ತಾ
ಪರಿ ಪರಿಯಿಂದಲಿ ದೂರಿಡುತಾ||೫||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಊರು-ಕೇರಿ ಕುರಿತು
Next post ಬಿತ್‌ಲೆಸ್

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…